Happy New Year 2026: ಹೊಸ ವರ್ಷದ ಶುಭಾಶಯಗಳ ಮೆಸೇಜ್ ಓದುವ ಮೊದಲು ಎಚ್ಚರ!
ಕನ್ನಡ ನಾಡು ಸೇರಿದಂತೆ ಇಡೀ ಜಗತ್ತಿನಲ್ಲಿ ಸಂಭ್ರಮ ಮನೆಮಾಡಿದೆ, ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿರುವ ಸಮಯದಲ್ಲಿ 2025ಕ್ಕೆ ಗುಡ್ಬೈ ಹೇಳಿ 2026ಕ್ಕೆ ಹಾಯ್ ಹೇಳಲು ಜನ ರೆಡಿಯಾಗಿ ಕೂತಿದ್ದಾರೆ. ಪ್ರತಿಯೊಬ್ಬರು ತಮ್ಮ ಸ್ನೇಹಿತರು ಹಾಗೇ ಪ್ರೀತಿ ಪಾತ್ರರಿಗೆ ಹೊಸ ವರ್ಷದ ಶುಭಾಶಯ ಸಾರುವ ಮೆಸೇಜ್ ಕಳಿಸಲು ಸಜ್ಜಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ನೀವು ಎಚ್ಚರವಾಗಿ ಇರದಿದ್ದರೆ ನಿಮ್ಮ ಅಕೌಂಟ್ನಿಂದ ಹಣ ಹೋಗುವ ಜೊತೆಗೆ ನಿಮ್ಮ ಮೊಬೈಲ್ ಕೂಡ ಹ್ಯಾಕ್ ಆಗಬಹುದು ಎಚ್ಚರ! ಯಾಕೆ ಅನ್ನೋದನ್ನ ವಿವರವಾಗಿ ಓದೋಣ ಬನ್ನಿ...
ಸಾಮಾನ್ಯವಾಗಿ ಹೊಸವರ್ಷ ಬಂದರೆ ನೂರಾರು ಮೆಸೇಜ್ ಮೊಬೈಲ್ಗೆ ಬರುತ್ತದೆ. ಅದರಲ್ಲೂ ಈ ರೀತಿ ಬರುವ ಸಂದೇಶಗಳನ್ನು ನಾವು ಓದಲು ಲಿಂಕ್ ಮೇಲೆ ಕ್ಲಿಕ್ ಮಾಡುತ್ತೇವೆ. ಹೀಗೆಲ್ಲಾ ಜನರ ಸಂಭ್ರಮದ ಕ್ಷಣವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಖದೀಮರು, ಮೋಸ ಮಾಡಿ ನಿಮ್ಮ ಅಕೌಂಟ್ನಲ್ಲಿ ಇರುವ ಹಣದ ಸಮೇತ ನಿಮ್ಮ ಖಾಸಗಿ ಮಾಹಿತಿ ಕದಿಯಲು ಕಾಯುತ್ತಾ ಕೂತಿದ್ದಾರೆ. ಈ ಬಗ್ಗೆ ಇದೀಗ ಪೊಲೀಸ್ ಪಡೆ ಎಚ್ಚರಿಕೆ ಸಂದೇಶ ರವಾನಿಸಿದೆ, ಅದರಲ್ಲೂ ಒಂದೇ ಒಂದು ಕ್ಲಿಕ್ ನಿಮ್ಮನ್ನು ಯಾಮಾರಿಸಬಹುದು ಹುಷಾರ್.

ಹೊಸ ವರ್ಷದ ಶುಭಾಶಯ ಓದುವವರೇ ಎಚ್ಚರ!
ಹೌದು, ಬೆಂಗಳೂರು ನಗರ ಪೊಲೀಸರು ಹಾಗೂ ಕರ್ನಾಟಕ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿ ಅಧಿಕಾರಿಗಳು ಕನ್ನಡ ನಾಡಿನ ಜನರಿಗೆ ಎಚ್ಚರದಿಂದ ಇರಲು ಸಂದೇಶ ನೀಡಿದ್ದಾರೆ. ಈ ಪೈಕಿ ನ್ಯೂ ಇಯರ್ ಅಂದ್ರೆ ಹೊಸ ವರ್ಷದ ಶುಭಾಶಯ ಕೋರುವ ಸಂದೇಶ ಬಂದಾಗ, ನೀವು ಅಲರ್ಟ್ ಆಗಿ ಇರಬೇಕು. ಯಾಕಂದ್ರೆ ನಿಮಗೆ ಬರುವ ಮೆಸೇಜ್ ಲಿಂಕ್ ಮೂಲಕ ಇದ್ದರೆ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಶುಭಾಶಯದ ಜೊತೆ ಅಟ್ಯಾಚ್ ಮಾಡಿದ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಅಂದ್ರೆ ಎಪಿಕೆ ಫೈಲ್ಗಳನ್ನ ಒತ್ತುವ ಮೊದಲು ಎಚ್ಚರಿಕೆ ವಹಿಸಿ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಎಪಿಕೆ ಫೈಲ್ ಅಥವಾ ಲಿಂಕ್ ಮೂಲಕ ಸೈಬರ್ ಕಳ್ಳರು ಜನ ಸಾಮಾನ್ಯರಿಗೆ ಮೋಸ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಸ ವರ್ಷದ ಹಿನ್ನೆಲೆಯಲ್ಲಿ ಈ ರೀತಿ ದೊಡ್ಡ ಮಟ್ಟದಲ್ಲಿ ಮೊಸ ಮಾಡುವ ಜಾಲ ಕೂಡ ಕಾಯುತ್ತಿದೆ. ನಿಮ್ಮ ಮೊಬೈಲ್ಗೆ ವಾಟ್ಸಾಪ್, ಟೆಲಿಗ್ರಾಮ್ ಹಾಗೂ ಇನ್ಸ್ಟಾಗ್ರಾಮ್ ಸೇರಿ ಟೆಕ್ಸ್ಟ್ ಹೀಗೆ ಯಾವುದೇ ರೀತಿಯಲ್ಲಿ ಮೆಸೇಜ್ ಬಂದರೂ ಅದನ್ನು ಒತ್ತುವ ಮೊದಲು ಅಲರ್ಟ್ ಆಗಿರಿ. ಈ ಬಗ್ಗೆ ಕರ್ನಾಟಕ ಪೊಲೀಸರು ಜನರಿಗೆ ಎಚ್ಚರದಿಂದ ಇರಲು ಸಂದೇಶ ರವಾನಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications