Happy New Year 2026: ಹೊಸ ವರ್ಷದ ಶುಭಾಶಯಗಳ ಮೆಸೇಜ್ ಓದುವ ಮೊದಲು ಎಚ್ಚರ!
ಕನ್ನಡ ನಾಡು ಸೇರಿದಂತೆ ಇಡೀ ಜಗತ್ತಿನಲ್ಲಿ ಸಂಭ್ರಮ ಮನೆಮಾಡಿದೆ, ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿರುವ ಸಮಯದಲ್ಲಿ 2025ಕ್ಕೆ ಗುಡ್ಬೈ ಹೇಳಿ 2026ಕ್ಕೆ ಹಾಯ್ ಹೇಳಲು ಜನ ರೆಡಿಯಾಗಿ ಕೂತಿದ್ದಾರೆ. ಪ್ರತಿಯೊಬ್ಬರು ತಮ್ಮ ಸ್ನೇಹಿತರು ಹಾಗೇ ಪ್ರೀತಿ ಪಾತ್ರರಿಗೆ ಹೊಸ ವರ್ಷದ ಶುಭಾಶಯ ಸಾರುವ ಮೆಸೇಜ್ ಕಳಿಸಲು ಸಜ್ಜಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ನೀವು ಎಚ್ಚರವಾಗಿ ಇರದಿದ್ದರೆ ನಿಮ್ಮ ಅಕೌಂಟ್ನಿಂದ ಹಣ ಹೋಗುವ ಜೊತೆಗೆ ನಿಮ್ಮ ಮೊಬೈಲ್ ಕೂಡ ಹ್ಯಾಕ್ ಆಗಬಹುದು ಎಚ್ಚರ! ಯಾಕೆ ಅನ್ನೋದನ್ನ ವಿವರವಾಗಿ ಓದೋಣ ಬನ್ನಿ...
ಸಾಮಾನ್ಯವಾಗಿ ಹೊಸವರ್ಷ ಬಂದರೆ ನೂರಾರು ಮೆಸೇಜ್ ಮೊಬೈಲ್ಗೆ ಬರುತ್ತದೆ. ಅದರಲ್ಲೂ ಈ ರೀತಿ ಬರುವ ಸಂದೇಶಗಳನ್ನು ನಾವು ಓದಲು ಲಿಂಕ್ ಮೇಲೆ ಕ್ಲಿಕ್ ಮಾಡುತ್ತೇವೆ. ಹೀಗೆಲ್ಲಾ ಜನರ ಸಂಭ್ರಮದ ಕ್ಷಣವನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಖದೀಮರು, ಮೋಸ ಮಾಡಿ ನಿಮ್ಮ ಅಕೌಂಟ್ನಲ್ಲಿ ಇರುವ ಹಣದ ಸಮೇತ ನಿಮ್ಮ ಖಾಸಗಿ ಮಾಹಿತಿ ಕದಿಯಲು ಕಾಯುತ್ತಾ ಕೂತಿದ್ದಾರೆ. ಈ ಬಗ್ಗೆ ಇದೀಗ ಪೊಲೀಸ್ ಪಡೆ ಎಚ್ಚರಿಕೆ ಸಂದೇಶ ರವಾನಿಸಿದೆ, ಅದರಲ್ಲೂ ಒಂದೇ ಒಂದು ಕ್ಲಿಕ್ ನಿಮ್ಮನ್ನು ಯಾಮಾರಿಸಬಹುದು ಹುಷಾರ್.

ಹೊಸ ವರ್ಷದ ಶುಭಾಶಯ ಓದುವವರೇ ಎಚ್ಚರ!
ಹೌದು, ಬೆಂಗಳೂರು ನಗರ ಪೊಲೀಸರು ಹಾಗೂ ಕರ್ನಾಟಕ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿ ಅಧಿಕಾರಿಗಳು ಕನ್ನಡ ನಾಡಿನ ಜನರಿಗೆ ಎಚ್ಚರದಿಂದ ಇರಲು ಸಂದೇಶ ನೀಡಿದ್ದಾರೆ. ಈ ಪೈಕಿ ನ್ಯೂ ಇಯರ್ ಅಂದ್ರೆ ಹೊಸ ವರ್ಷದ ಶುಭಾಶಯ ಕೋರುವ ಸಂದೇಶ ಬಂದಾಗ, ನೀವು ಅಲರ್ಟ್ ಆಗಿ ಇರಬೇಕು. ಯಾಕಂದ್ರೆ ನಿಮಗೆ ಬರುವ ಮೆಸೇಜ್ ಲಿಂಕ್ ಮೂಲಕ ಇದ್ದರೆ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಶುಭಾಶಯದ ಜೊತೆ ಅಟ್ಯಾಚ್ ಮಾಡಿದ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್ ಅಂದ್ರೆ ಎಪಿಕೆ ಫೈಲ್ಗಳನ್ನ ಒತ್ತುವ ಮೊದಲು ಎಚ್ಚರಿಕೆ ವಹಿಸಿ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಎಪಿಕೆ ಫೈಲ್ ಅಥವಾ ಲಿಂಕ್ ಮೂಲಕ ಸೈಬರ್ ಕಳ್ಳರು ಜನ ಸಾಮಾನ್ಯರಿಗೆ ಮೋಸ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಸ ವರ್ಷದ ಹಿನ್ನೆಲೆಯಲ್ಲಿ ಈ ರೀತಿ ದೊಡ್ಡ ಮಟ್ಟದಲ್ಲಿ ಮೊಸ ಮಾಡುವ ಜಾಲ ಕೂಡ ಕಾಯುತ್ತಿದೆ. ನಿಮ್ಮ ಮೊಬೈಲ್ಗೆ ವಾಟ್ಸಾಪ್, ಟೆಲಿಗ್ರಾಮ್ ಹಾಗೂ ಇನ್ಸ್ಟಾಗ್ರಾಮ್ ಸೇರಿ ಟೆಕ್ಸ್ಟ್ ಹೀಗೆ ಯಾವುದೇ ರೀತಿಯಲ್ಲಿ ಮೆಸೇಜ್ ಬಂದರೂ ಅದನ್ನು ಒತ್ತುವ ಮೊದಲು ಅಲರ್ಟ್ ಆಗಿರಿ. ಈ ಬಗ್ಗೆ ಕರ್ನಾಟಕ ಪೊಲೀಸರು ಜನರಿಗೆ ಎಚ್ಚರದಿಂದ ಇರಲು ಸಂದೇಶ ರವಾನಿಸಿದ್ದಾರೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications