ಹೊಸಕೆರೆಹಳ್ಳಿ, ಚಾಮರಾಜಪೇಟೆಯಲ್ಲಿ ಹನುಮ ಜಯಂತಿ ಸಂಭ್ರಮ
ಬೆಂಗಳೂರು, ಡಿಸೆಂಬರ್ 19: ನಗರದ ವಿವಿಧೆಡೆ ಡಿಸೆಂಬರ್ 20ರಂದು ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಡಿ. 20ರಂದು ಹೊಸಕೆರೆಹಳ್ಳಿ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ಹನುಮ ಜಯಂತಿ ಮಹೋತ್ಸವ ನಡೆಯಲಿದೆ.
ಹೊಸಕೆರೆಹಳ್ಳಿಯಲ್ಲಿರುವ ಮಾರುತಿ ಹನುಮಂತಪ್ಪ ಮುಂಭಾಗದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 15 ನೇ ವರ್ಷದ ಹನುಮ ಜಯತಿ ಮಹೋತ್ಸವವನ್ನು ಆಯೋಜಿಸಲಾಗಿದೆ.

* ಡಿ. 19 ಬುಧವಾರ ಸಂಜೆ ವಿಶೇಷ ಶ್ರೀ ದುರ್ಗಾಪೂಜೆ ಮತ್ತು ಶ್ರೀ ದುರ್ಗಾ ದೀಪ ನಮಸ್ಕಾರ.
* ಡಿ. 20ರಂದು ಬೆಳಿಗ್ಗೆ ಜೀವೋತ್ತಮ್ಮನಾದ ಪ್ರಾಣದೇವರಿಗೆ ವಿಶೇಷ ಪವಮಾನ ಮಧು ಅಭಿಷೇಕ, ಶ್ರೀ ರಾಮನಾಮ ತಾರಕ ಹೋಮ, ಸಂಜೆ ಶ್ರೀ ಸೀತಾ ಕಲ್ಯಾಣ ಮಹೋತ್ಸವ ಏರ್ಪಡಿಸಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಸತೀಶ್ ದೀಕ್ಷಿತ್ ಮತ್ತು ಧರ್ಮದರ್ಶಿ ಹನುಮಂತಪ್ಪರವರು ತಿಳಿಸಿರುತ್ತಾರೆ.
ಚಾಮರಾಜಪೇಟೆಯಲ್ಲಿ ಹನುಮ ಜಯಂತಿ: ಚಾಮರಾಜಪೇಟೆ 3ನೇ ಚಾಮರಾಜಪೇಟೆ 3ನೇ ಮುಖ್ಯ ರಸ್ತೆಯಲ್ಲಿರುವ ಕನ್ನಡ ತಿಂಡಿ ಕೇಂದ್ರದ ಸಹಯೋಗದೊಂದಿಗೆ ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರದ ವತಿಯಿಂದ 19ನೇ ಹನುಮ ಜಯಂತಿ ಮಹೋತ್ಸವವನ್ನು ಡಿ. 20 ರಿಂದ 22ರವರೆಗೆ ಏರ್ಪಡಿಸಿದೆ.

ಡಿ. 20 ಬೆಳಿಗ್ಗೆ ಪವಮಾನ ಹೋಮ, ಸಂಜೆ ಖ್ಯಾತ ಪರಿಸರವಾದಿ ಶಿವಮಲ್ಲು ದಾಸರಿಂದ ಮಾರುತಿ ವಿಜಯ ಹರಿಕಥೆ ಡಿ.21 ರಂದು ಬೆಳಿಗ್ಗೆ ಮಹಾಸುದರ್ಶನ ಹೋಮ ಸಂಜೆ ಜೀವಸ್ವರ ಸುಗಮ ಸಂಗೀತ ಆಕಾಡೆಮಿಯಿಂದ ಸುಗಮ ಸಂಗೀತ ಮತ್ತು ಪುಣ್ಯಕೋಟಿ ನೃತ್ಯರೂಪಕ.
ಡಿ. 22ರಂದು ಬೆಳಿಗ್ಗೆ ದತ್ತಾತ್ರೇಯ ಜಯಂತಿ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸಂಜೆ ಸೂರ್ಯ ಆರ್ಟ್ಸ್ ಇಂಟರನ್ಯಾಷನಲ್ ರವರಿಂದ ಧರೆಗಿಳಿದ ದಿವ್ಯ ಚೇತನ ಶ್ರೀ ಶಿರಡಿ ಸಾಯಿ ಬಾಬಾ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದು ಆಯೋಜಕರಾದ ಡಾ. ಕೃ.ವೆ. ರಾಮಚಂದ್ರ ರವರು ತಿಳಿಸಿರುತ್ತಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications