ಬೆಂಗಳೂರು: ಸರಗಳ್ಳನನ್ನು ಹಿಡಿದ ಕಂದಾಯ ಇಲಾಖೆಯ ಗನ್ಮ್ಯಾನ್
ಬೆಂಗಳೂರು, ಜುಲೈ 2: ಡ್ಯಾಗರ್ನಿಂದ ಇರಿದು ಮಹಿಳೆಯ ಸರಗಳ್ಳತನ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸರಗಳ್ಳನನ್ನು ಗನ್ಮ್ಯಾನ್ ಬೆನ್ನಟ್ಟು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು
ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ರಾತ್ರಿ ಸುನಿತಾ ಎಂಬುವವರು ರಸ್ತೆಯಲ್ಲಿ ತೆರಳುತ್ತಿದ್ದಾಗ ಆರೋಪಿ ಮಹಮ್ಮದ್ ದಸ್ತಗೀರ್ ಸುನೀತಾಳ ಬಳಿ ಇದ್ದ ಸರವನ್ನು ಕಿತ್ತುಕೊಳ್ಳುವ ವೇಳೆ ಡ್ಯಾಗರ್ನಿಂದ ಇರಿದಿದ್ದ ನಂತರ ಸರವನ್ನು ಅಪಹರಿಸಿ ಅಲ್ಲಿಂದ ತೆರಳಲು ಯತ್ನಿಸಿದ್ದ ಆದರೆ ಆತನ ಪ್ಲ್ಯಾನ್ ಸಂಪೂರ್ಣ ಫೇಲ್ ಆಗಿತ್ತು.
ಕಂದಾಯ ಇಲಾಖೆಯ ಗನ್ಮ್ಯಾನ್ ಆತನನ್ನು ಬೆನ್ನಟ್ಟಿ ಹೋಗಿ ಹಿಡಿದು ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಿದ್ದಾರೆ, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Comments
English summary
A gunman has been shown his courage by chasing and catch a chain snatcher who was attack on a woman with dagger and tried to snatch chain in MG road last night.
Story first published: Monday, July 2, 2018, 11:51 [IST]