ಮೋಡಬಿತ್ತನೆ ಟೆಂಡರ್ಗೆ ಸರ್ಕಾರದಿಂದ ತಾತ್ಕಾಲಿಕ ತಡೆ
ಬೆಂಗಳೂರು, ನವೆಂಬರ್ 7: ಯಾವುದೇ ಕಾರಣಕ್ಕೂ ಮೋಡಬಿತ್ತನೆ ಮುಂದುವರೆಸಬಾರದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಲಪ್ರಳಯ ಆಗಿದೆ. ಈ ಸಂದರ್ಭದಲ್ಲಿ ಮೋಡಬಿತ್ತನೆ ಬೇಡ ಎನ್ನುವುದು ನನ್ನ ನಿರ್ಧಾರ, ಮೋಡ ಬಿತ್ತನೆಗೆ ಕಳೆದ ಸರ್ಕಾರ 2 ವರ್ಷದ ಟೆಂಡರ್ ಕರೆದಿತ್ತು.
ರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ
ಅವರು ಯಾರಿಗೆ ಟೆಂಡರ್ ಕೊಟ್ಟಿದ್ದಾರೆ ಎನ್ನುವುದು ತಿಳಿದಿಲ್ಲ. ಹೀಗಾಗಿ ಆ ಟೆಂಡರ್ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಯಾರಿಗೆ ಟೆಂಡರ್ ಕೊಟ್ಟಿದ್ದಾರೆ , ಏನು ಆಗಿದೆ ಎನ್ನುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಮೋಡ ಬಿತ್ತನೆ ಟೆಂಡರ್ಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ. ಯಾರಿಗೆ ಯಾಕೆ ಗುತ್ತಿಗೆ ಕೊಟ್ಟಿದ್ದಾರೆ ಅದು ನಮಗೆ ಸಂಬಂಧ ಇಲ್ಲ , ರಾಜ್ಯದ ಹಣಕಾಸು ಸರಿಯಾಗಿ ಬಳಕೆಯಾಗಬೇಕು , ಎರಡು ವರ್ಷ ಮೋಡ ಬಿತ್ತನೆ ಅಗ್ರಿಮೆಂಟ್ ಇದೆಯಾ ಎಂದು ವಿಚಾರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಮಳೆ ಬರ್ತಿದೆ ಇನ್ನೇನು ಮೋಡ ಬಿತ್ತನೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮೋಡಬಿತ್ತನೆಯ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.