ಜ್ಯುವೆಲರ್ಸ್ ಗೋಡೆ ಕೊರೆದು 3 ಕೋಟಿ ಬೆಲೆಯ 5 ಕೆಜಿ ಚಿನ್ನ ದರೋಡೆ
ಬೆಂಗಳೂರು, ಏಪ್ರಿಲ್ 21: ಚಿನ್ನದ ಆಭರಣದ ಮಳಿಗೆಯ ಗೋಡೆ ಕೊರೆದು ಆಭರಣದ ಅಂಗಡಿಯಲ್ಲಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ 5 ಕೆಜಿ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಬೆಂಗಳೂರಿನ ದಕ್ಷಿಣವಲಯಲ್ಲಿರುವ ಜೆಪಿ ನಗರ ಒಂದನೇ ಹಂತದ ಬಳಿ ಇರುವ ಪ್ರಿಯದರ್ಶನಿ ಜ್ಯುವೆಲರ್ಸ್ನಲ್ಲಿ ಭಾನುವಾರ ರಾತ್ರಿ ಈ ದರೋಡೆ ನಡೆದಿದ್ದು, ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿದ್ದ ಚಿನ್ನಾಭರಣದ ಈ ಮಳಿಗೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ನಿಷ್ಕ್ರಿಯಯಗೊಳಿಸಲು ವಿದ್ಯುತ್ ತಂತಿಗಳನ್ನು ಕಿತ್ತು ಸಿಸಿಟಿವಿ ಕ್ಯಾಮೆರಗಳು ಆನ್ ಆಗದಂತೆ ಮಾಡಿ ಜ್ಯುವೆಲರರ್ಸ್ ಒಳಗೆ ನುಗ್ಗಿರುವ ಕಳ್ಳರು ಚಿನ್ನ ದೋಚಿದ್ದಾರೆ.
ಚಿನ್ನದ ಅಂಡಿಯನ್ನು ದೋಚಲು ಮುಂಚಿತವಾಗಿಯೇ ಪ್ಲಾನ್ ಮಾಡಿಕೊಂಡಿದ್ದ ಕಳ್ಳರು ಪಕ್ಕದ ಕಟ್ಟಡದಲ್ಲಿ ಮನೆಯೊಂದರಲ್ಲಿ ಎರಡನೇ ಮಹಡಿಯಲ್ಲಿ ಮನೆ ಬಾಡಿಗೆ ಪಡದಿದ್ದರು ಎನ್ನಲಾಗಿದ್ದು ಇಬ್ಬರು ಸೇರಿಕೊಂಡು ಚಿನ್ನ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆಭರಣದ ಮಳಿಗೆ ಮೂರು ಕಟ್ಟಡವನ್ನು ಹೊಂದಿದ್ದರು ಚಿನ್ನ ದರೋಡೆಗೆ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿಕೊಂಡಿದ್ದರು ಕಳ್ಳರು ಆಭರಣ ಮಳಿಗೆಯನ್ನು ಹೇಗೆ ಕಳ್ಳತನ ಮಾಡಿ ಪರಾರಿಯಾಗಬೇಕೆಂದು ಮುಂಚಿತವಾಗಿ ಯೋಜನೆ ಹಾಕಿಕೊಂಡಿದ್ದರು. ಇನ್ನು ಸುಮಾರು 3 ಕೋಟಿ ಬೆಲೆಯ 5 ಕೆಜಿ ಚಿನ್ನ ಕಳೆದಕೊಂಡಿರುವ ಜೆಪಿ ನಗರದ ಕೆ. ರಾಜು ದೇವಾಡಿಗ ಎಂಬವರೇ ಕಳ್ಳತನವಾದ ಚಿನ್ನದಂಗಡಿಯ ಮಾಲಿಕನಾಗಿದ್ದು, ಇವರು ಕಳೆದ ಶನಿವಾರ ಚಿನ್ನದಂಗಡಿಯಲ್ಲಿದ್ದ ಚಿನ್ನವನ್ನು ಲಾಕರ್ನಲ್ಲಿ ಲಾಕ್ ಇಟ್ಟು ಅಂಗಡಿಯ ವ್ಯವಹಾರ ಮುಗಿಸಿಕೊಂಡು ಮನೆಗೆ ಹೋಗಿದ್ದರು.

ಮರುದಿನ ಭಾನುವಾರ ಬೆಳಗ್ಗೆ10 ಗಂಟೆಯ ಸುಮಾರಿಗೆ ಹಿಂತಿರುಗಿ ಬಂದು ಅಂಗಡಿ ತೆರೆದಾಗ ಪೀಠೋಪಕರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿವೆ ಬಿದ್ದಿದವು. ಚಿನ್ನಾಭರಣಗಳ ಲಾಕರ್ನ್ನು ಗ್ಯಾಸ್ ಕಟರ್ನಿಂದ ಒಡೆದು ಹಾಕಿ ಅಂಗಡಿಯಲ್ಲಿದ್ದ ಬೆಳ್ಳಿಯನ್ನು ಕದಿಯದ ಕಳ್ಳರು ಚೂರು ಚಿನ್ನವನ್ನು ಉಳಿಸದೆ ಎಲ್ಲ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಕೋಟಿ ಬೆಲೆಯ ಚಿನ್ನ ಕಳೆದಕೊಂಡು ಪ್ರಿಯದರ್ಶನಿ ಜ್ಯುವೆಲರ್ಸ್ನ ಮಾಲೀಕ ಪೋಲಿಸ ಠಾಣೆಗೆ ದೂರು ದಾಖಲಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದೆವರಿಸಿದ್ದಾರೆ.
Recommended Video
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications