ಅಶ್ಲೀಲ ವಿಡಿಯೋ ಮಾಡಿ ಬೆಂಗಳೂರಿನ ಗೃಹಿಣಿಯ ಬ್ಲ್ಯಾಕ್ ಮೇಲ್
ಬೆಂಗಳೂರು, ಡಿಸೆಂಬರ್ 27: ವ್ಯಾಪಾರಿಯೊಬ್ಬರ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ, ಹದಿನೆಂಟು ತಿಂಗಳಲ್ಲಿ ಅರವತ್ತು ಲಕ್ಷ ರುಪಾಯಿ ತನಕ ಈ ವರೆಗೆ ವಸೂಲಿ ಮಾಡಿರುವ ಆರು ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ದೂರು ನೀಡಿದವರು ರಾಜಾಜಿನಗರ ನಿವಾಸಿ. ಬ್ಲ್ಯಾಕ್ ಮೇಲ್ ಮಾಡಿದ ಆರು ಮಂದಿ ಪೈಕಿ ಒಬ್ಬ ಮನೆಗೆಲಸದಾಕೆ ಕೂಡ ಇದ್ದಾಳೆ.
ಮಹಿಳೆಯ ಮಾರ್ಫ್ ಮಾಡಿದ ಫೋಟೋಗಳನ್ನು ಒಳಗೊಂಡಂತೆ ಅಶ್ಲೀಲ ವಿಡಿಯೋ ತೋರಿಸಿ, 2016 ಹಾಗೂ 2018ರ ಮಧ್ಯೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ಸಂತ್ರಸ್ತೆಯ ಮಗಳು, ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಕೂಡ ದೌರ್ಜನ್ಯ ಎಸಗಿ, ಹಣಕ್ಕಾಗಿ ಒತ್ತಾಯ ಮಾಡಿದ್ದಾರೆ.
ವ್ಯಾಪಾರಿಯ ಪತ್ನಿ 2016ರಲ್ಲಿ ಪ್ರಕಾಶ್ ನಗರದ ಲಕ್ಷ್ಮಿ ಎಂಬಾಕೆಯನ್ನು ಮನೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆ ನಂತರ ಆಕೆಯ ಸ್ನೇಹಿತೆ ಪವಿತ್ರಾ ಮತ್ತು ಪವಿತ್ರಾಳ ಗಂಡ ಪ್ರಶಾಂತ್ ಒಟ್ಟಾಗಿ, ತಮ್ಮೊಂದಿಗೆ ಮೂವರನ್ನು ಜತೆ ಮಾಡಿಕೊಂಡು ಹಣ ವಸೂಲಿ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಗೃಹಿಣಿಯ ಫೋಟೋಗಳು ಮತ್ತು ವಿಡಿಯೋ ಬಳಸಿ, ಅಶ್ಲೀಲ ವಿಡಿಯೋ ಸೃಷ್ಟಿಸಲಾಗಿದೆ. ಅದನ್ನು ತೋರಿಸಿ, ಹಣ ಕೊಡಬೇಕು. ಇಲ್ಲದಿದ್ದರೆ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.
ಆ ಗೃಹಿಣಿ ತನ್ನ ಆಭರಣಗಳನ್ನು ಅಡವಿಟ್ಟು ಈ ಗುಂಪಿಗೆ ಹಣ ಕೊಟ್ಟಿದ್ದಾರೆ. ಆಕೆ ಒಬ್ಬರೇ ಇದ್ದಾಗ ಮನೆಗೇ ಭೇಟಿ ನೀಡಲು ಈ ತಂಡ ಆರಂಭ ಮಾಡಿದೆ. ಜತೆಗೆ ಅವರ ಮಗಳ ಕಾಲೇಜಿನ ಬಳಿಗೂ ಹೋಗಿದೆ. "ನಿಮ್ಮ ಅಮ್ಮನಿಗೆ ಹೇಳಿ, ಲಕ್ಷ್ಮಿ ಹತ್ತಿರ ದುಡ್ಡು ಕೊಡಿಸು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಧಮಕಿ ಹಾಕಿದೆ.
ಬಹಳ ದೊಡ್ಡ ಮೊತ್ತವೇ ಈ ತಂಡವು ವಸೂಲಿ ಮಾಡಿದ ಮೇಲೆ ಆ ಗೃಹಿಣಿಗೆ ಇದು ಇಲ್ಲಿಗೆ ಮುಗಿಯಲ್ಲ ಎನಿಸಿ, ತನ್ನ ಪತಿಗೆ ವಿಷಯ ತಿಳಿಸಲು ನಿರ್ಧರಿಸಿದ್ದಾರೆ. ಕುಟುಂಬದ ಇತರ ಸದಸ್ಯರ ಜತೆಗೆ ಮಾತನಾಡಿ, ಸಿಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲಿಂದ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ವರ್ಗಾವಣೆಯಾಗಿದೆ.
ತಲೆ ತಪ್ಪಿಸಿಕೊಂಡಿರುವ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಮತ್ತು ಹಫ್ತಾ ವಸೂಲಿ ದೂರು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications