ನವಜಾತ ಶಿಶುಗಳ ಐಸಿಯುನಲ್ಲಿ ಹೆಚ್ಚುತ್ತಿದೆ ಸೋಂಕು:ವೈದ್ಯರಲ್ಲಿ ಆತಂಕ
ಬೆಂಗಳೂರು, ಜು.6: ರಾಜ್ಯದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಶಿಶುಗಳಿಗೆ ಫಂಗಲ್ ಇನ್ಫೆಕ್ಷನ್ ಪ್ರಮಾಣ ಹೆಚ್ಚುತ್ತಿದೆ ಎನ್ನುವ ಆತಂಕದ ವಿಚಾರವೊಂದು ಬಹಿರಂಗಗೊಂಡಿದೆ.
ಅವಧಿಪೂರ್ವ ಶಿಶು ಜನನ, ಉಸಿರಾಟದ ತೊಂದರೆ ಇನ್ನು ಅನೇಕ ಅಂಗಾಂಗಳ ತೊಂದರೆಯಿಂದಾಗಿ ತೀವ್ರ ನಿಗಾ ಘಟಕ(ಐಸಿಯು)ನಲ್ಲಿರಿಸುವುದು ಸಾಮಾನ್ಯ. ಆದರೆ ಶಿಶುವನ್ನು ಐಸಿಯುನಲ್ಲಿರಿಸುವುದರಿಂದಲೇ ಮೃತಪಡುತ್ತಿವೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ನರ್ಸ್ಗಳ ನಿರ್ಲಕ್ಷ್ಯ, ಸ್ವಚ್ಛತೆಯ ಕೊರತೆ, ತಾಯಿಯಿಂದಲೂ ಕೂಡ ಶಿಶುವಿಗೆ ಸೋಂಕು ತಗಲುವ ಎಲ್ಲಾ ಸಾಧ್ಯತೆಗಳಿರುತ್ತದೆ.
ಈ ಫಂಗಲ್ ಸೋಂಕಿನಿಂದಾಗಿ ಶಿಶುಗಳು ಸಾವನ್ನಪ್ಪುತ್ತಿವೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಫಂಗಲ್ ಸೋಂಕಿನಿಂದಾಗಿ ಶೇ.6.6 ರಷ್ಟು ಶಿಶುಗಳಿಗೆ ಚಿಕಿತ್ಸೆ ನೀಡಲಾಗಿತ್ತು. 2015ರಲ್ಲಿ 4.3ರಷ್ಟು ಶಿಶುಗಳು, 2016ರಲ್ಲಿ ಶೇ.4.6ರಷ್ಟು ಶಿಶುಗಳನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಅವಧಿಪೂರ್ವ ಶಿಶುಗಳನ್ನು ಐಸಿಯುನಲ್ಲಿರಸಲಾಗುತ್ತಿದೆ. ಶಿಶುವಿನ ತೂಕ ಕಡಿಮೆ ಇರುವ ಕಾರಣ ಆಂಟಿ ಬಯೋಟಿಕ್ಗಳನ್ನು ನೀಡಲಾಗುತ್ತದೆ ಇದರಿಂದ ಕೂಡ ಸೋಂಕು ತಗುಲುತ್ತಿದೆ. ನವಜಾತ ಶಿಶುಗಳಲ್ಲಿ ಫಂಗಲ್ ಇನ್ಫೆಕ್ಷನ್ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಇದುವರೆಗೂ ಅಧ್ಯಯನ ನಡೆದಿಲ್ಲ ಎಂದು ನ್ಯಾಷನಲ್ ನಿಯೊನೊಟಾಲಜಿ ಫಾರ್ಮ್ನ ಅಧ್ಯಕ್ಷ ಡಾ. ರಂಜನ್ ಪೇಜಾವರ್ ತಿಳಿಸಿದ್ದಾರೆ.
ಮಗುವು ಫಂಗಲ್ ಇನ್ಫೆಕ್ಷನ್ನಿಂದಲೇ ಸಾವನ್ನಪ್ಪಿದೆ ಎಂದು ನಿಖರವಾಗಿ ಹೇಳುವುದು ಕಷ್ಟ, ಸರ್ಕಾರಿ ಆಸ್ಪತ್ರೆಗಳಿಗೆ ಅಂತಿಮ ಸಮಯದಲ್ಲಿ ಬಂದು ದಾಖಲಾಗುತ್ತಾರೆ, ಮುಗುವಿಗೆ ಏನಾಗಿದೆ ಎಂದು ಚಿಕಿತ್ಸೆ ನೀಡುವುದರ ಒಳಗೆ ಎಷ್ಟೋ ಶಿಶುಗಳು ಸಾವನ್ನಪ್ಪಿರುತ್ತವೆ. ಮಗುವನ್ನು ಮುಟ್ಟಿದ ಟವೆಲ್ನ್ನು ಪುನಃ ಬಳಕೆ ಮಾಡದಿರುವ ಕುರಿತು ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕಿದೆ.
ಅಲ್ಲಿ ಬಳಕೆಯಾಗುವ ಹೋಲೋ ಟ್ಯೂಬ್ನ್ನು ನೀರಿನಲ್ಲಿ ಖುದಿಸಿ ಮರು ಬಳಕೆ ಮಾಡಲಾಗುತ್ತದೆ ಆದರೂ ಕೂಡ ಅದನ್ನು ಸ್ವಚ್ಛವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಅದರಿಂದ ಕ್ರಾಸ್ ಇನ್ಫೆಕ್ಷನ್ ಆಗಬಹುದುದು ಎಂದು ತಿಳಿಸಿದ್ದಾರೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications