ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ್ಣು-ತರಕಾರಿ ಬೆಲೆಯಲ್ಲಿ ದಿಢೀರ್ ಏರಿಕೆ: ಇಂದಿನ ಬೆಲೆ ಎಷ್ಟು?

|
Google Oneindia Kannada News

ಬೆಂಗಳೂರು, ಮೇ 9: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ವ್ಯಾಪಾರ-ವಹಿವಾಟಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಅತ್ತ ಸಂಬಳ ಕಡಿತ ಮತ್ತು ಆರ್ಥಿಕ ಸಂಕಷ್ಟದಿಂದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದರೆ, ಇತ್ತ ತರಕಾರಿ ಮತ್ತು ಹಣ್ಣಿನ ಬೆಲೆ ಜಾಸ್ತಿಯಾಗಿದೆ.

Recommended Video

ಉಡುಪಿಗೆ ಯಾರೇ ಬಂದ್ರೂ ಕ್ವಾರಂಟೇನ್ ನಲ್ಲಿಡೋದು ಪಕ್ಕಾ | Udupi | Oneindia Kannada

ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ, ಇಂದು ಕೆಲ ತರಕಾರಿ ಮತ್ತು ಹಣ್ಣುಗಳ ರೇಟು ಹೆಚ್ಚಾಗಿದೆ.

ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರ್ ಇಳಿಕೆ: ಸಂಕಷ್ಟದಲ್ಲಿ ರೈತರು ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರ್ ಇಳಿಕೆ: ಸಂಕಷ್ಟದಲ್ಲಿ ರೈತರು

ಒಂದು ಕೆ.ಜಿ ಸೇಬಿನ ಬೆಲೆ ಮೂರು ದಿನಗಳ ಹಿಂದೆ 100 ರೂಪಾಯಿ ಇತ್ತು. ಇವತ್ತು ಕೆ.ಜಿ ಸೇಬಿನ ದರ 190 ಆಗಿದೆ. 80 ರೂಪಾಯಿ ಇದ್ದ ಕೆ.ಜಿ ದಾಳಿಂಬೆ ಬೆಲೆ ಇಂದು 140ಕ್ಕೆ ಏರಿದೆ. 80 ರೂಪಾಯಿ ಇದ್ದ ದ್ರಾಕ್ಷಿ ಬೆಲೆ 100 ರೂಪಾಯಿ ಆಗಿದೆ. ಇಂದು ರಸಪುರಿ ಮಾವಿನ ಬೆಲೆ 100 ರೂಪಾಯಿ, ಸಪೋಟ ಬೆಲೆ 70 ರೂಪಾಯಿ, ಪಚ್ಚ ಬಾಳೆಹಣ್ಣಿನ ಬೆಲೆ ಕೆ.ಜಿಗೆ 30 ರೂಪಾಯಿ ಆಗಿದೆ.

Fruits And Vegetables Prices Increased In Bengaluru

ಎರಡು ದಿನಗಳ ಹಿಂದೆ ಬೀನ್ಸ್ ಬೆಲೆ ಕೆ.ಜಿಗೆ 60 ರೂಪಾಯಿ ಇತ್ತು. ಇಂದು 70 ರೂಪಾಯಿ ಆಗಿದೆ. 60 ರೂಪಾಯಿ ಇದ್ದ ಕೆ.ಜಿ ಕ್ಯಾರೆಟ್ ಬೆಲೆ ಈಗ 80 ರೂಪಾಯಿ ಆಗಿದೆ. 40 ರೂಪಾಯಿ ಇದ್ದ ಆಲೂಗೆಡ್ಡೆ ಬೆಲೆ 50 ಆಗಿದೆ. ಹೀರೇಕಾಯಿ 50 ರೂಪಾಯಿ, ಬೆಳ್ಳುಳ್ಳಿ 80 ರೂಪಾಯಿ, ಟೊಮ್ಯಾಟೊ 20 ರೂಪಾಯಿ, ಶುಂಠಿ 30 ರೂಪಾಯಿ, ಲಿಂಬೆ 10 ರೂಪಾಯಿ, ಈರುಳ್ಳಿ 50 ರೂಪಾಯಿಗೆ ಏರಿಕೆಯಾಗಿದೆ.

English summary
Fruits and Vegetables prices increased in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X