ಚಿನ್ನದ ದರೋಡೆಯಲ್ಲಿ ಬೆಂಗ್ಳೂರಿನ ನೈಜೀರಿಯಾ ಪ್ರಜೆಗಳ ಷಾಮೀಲು
ಹೈದರಾಬಾದ್ ನಲ್ಲಿ ಏಪ್ರಿಲ್ 16ರಂದು ನಡೆದಿದ್ದ ಚಿನ್ನದ ದರೋಡೆಯಲ್ಲಿ ಬೆಂಗಳೂರಿನಲ್ಲಿರುವ ನಾಲ್ವರು ನೈಜೀರಿಯಾ ಪ್ರಜೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್, ಜೂನ್ 4: ಇದೇ ವರ್ಷ ಏಪ್ರಿಲ್ 16ರಂದು ಹೈದರಾಬಾದ್ ನಲ್ಲಿ ನಡೆದಿದ್ದ 1.5 ಕೋಟಿ ರು. ಮೌಲ್ಯದ ಚಿನ್ನಾಭರಣ ಲೂಟಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ನಾಲ್ವರು ನೈಜೀರಿಯಾ ಪ್ರಜೆಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಈ ಬಂಧನದ ಮೂಲಕ, ಈ ಲೂಟಿ ಪ್ರಕರಣದ ಹಿಂದಿನ ಕೆಲವಾರು ಆಘಾತಕಾರಿ ಅಂಶಗಳು ಬಯಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಹಿಂದೆ ಪೆರು ದೇಶದಲ್ಲಿನ ಕುಖ್ಯಾತ ಗ್ಯಾಂಗ್ ಒಂದರ ತಂತ್ರಗಾರಿಕೆ ಅಡಗಿರುವುದು ತಿಳಿದುಬಂದಿದೆ ಎಂದು ಹೇಳಿರುವ ಪೊಲೀಸರು, ಇಡೀ ಲೂಟಿ ಪ್ರಕರಣದ ಸ್ಕೆಚ್ ಪೆರುವಿಲ್ಲೇ ತಯಾರಾಗಿತ್ತೆಂಬ ಆಘಾತಕಾರಿ ಸತ್ಯವನ್ನೂ ಹೊರಗೆಡವಿದ್ದಾರೆ.
ಏನಿದು ಪ್ರಕರಣ?
ಹೈದರಾಬಾದ್ ನ ಚಿನ್ನದ ವ್ಯಾಪಾರಿಯಾಗಿರುವ ಅಭಿಷೇಕ್ ಅಗರ್ವಾಲ್ ಅವರು, ಏಪ್ರಿಲ್ 16ರಂದು ತಮ್ಮೊಂದಿಗೆ ಒಂದೂವರೆ ಕೋಟಿ ಮೌಲ್ಯದ ಬಂಗಾರವನ್ನು ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಮೊಳೆಗಳನ್ನು ರಸ್ತೆಯಲ್ಲಿ ಚೆಲ್ಲುವ ಮೂಲಕ ಅವರು ಪ್ರಯಾಣಿಸುತ್ತಿದ್ದ ಕಾರು ಪಂಕ್ಚರ್ ಆಗುವಂತೆ ಮಾಡಿತ್ತು ಈ ಗ್ಯಾಂಗ್.
ಆಗ, ಅಭಿಷೇಕ್ ಅಗರ್ವಾಲ್ ಅವರ ಡ್ರೈವರ್ ಕಾರಿನ ಚಕ್ರವನ್ನು ಬದಲಾಯಿಸುವ ಸಲುವಾಗಿ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಟೈರು ಬದಲಾಯಿಸವಲ್ಲಿ ನಿರತರಾಗಿದ್ದರು. ಆಗ, ಪೆರು ಮೂಲದ ಇಬ್ಬರು ಮಹಿಳೆಯರು ಕಾರಿನ ಬಾಗಿಲನ್ನು ತೆರೆದು ಸುಮಾರು 3.5 ಕೆ.ಜಿ. ಚಿನ್ನ ಇಟ್ಟಿದ್ದ ಪೆಟ್ಟಿಗೆಯನ್ನು ನೋಡನೋಡುತ್ತಿದ್ದಂತೆಯೇ ಎತ್ತಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅಗರ್ವಾಲ್ ಪ್ರಯಾಣಿಸುತ್ತಿದ್ದ ಕಾರನ್ನು ಮತ್ತೊಂದು ಕಾರೊಂದು ಬೆಂಗಳೂರಿನಿಂದ ಹಿಂಬಾಲಿಸುತ್ತಿದ್ದನ್ನು ಪತ್ತೆ ಹಚ್ಚಿದ್ದರು. ಆಗ ಕಾರಿನ ಜಾಡನ್ನು ಹಿಡಿದು ಸಾಗಿದ ಪೊಲೀಸರಿಗೆ, ದರೋಡೆ ಮುಗಿನ ನಂತರ ಆ ಕಾರು ಬೆಂಗಳೂರಿನ ದೇವನ ಹಳ್ಳಿ ಚೆಕ್ ಪೋಸ್ಟ್ ಕಡೆಯಿಂದ ಹಾದು ಹೋಗಿರುವುದು ಖಾತ್ರಿಯಾಯಿತು.
ಆ ಕಾರಿನ ಸಂಖ್ಯೆನ್ನು ಜಾಲಾಡಿದಾಗ ಆ ಕಾರಿನ ಮಾಲೀಕ ಪಂಕಜ್ ಸತ್ಯನಾರಾಯಣ ಸರಾಫ್ ಎಂಬಾತನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.
ಆದರೆ, 2015ರಲ್ಲೇ ಆ ಕಾರನ್ನು ಸರಾಫ್ ಮಾರಾಟ ಮಾಡಿದ್ದಾಗಿ ಹೇಳಿದ್ದ. ಮೈಕಲ್ ಹಾಗೂ ಬಾಲ್ಕಿನ್ಸ್ ಎಂಬ ಇಬ್ಬರು ನೈಜೀರಿಯಾ ಪ್ರಜೆಗಳಿಗೆ ಕಾರನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದ ಸರಾಜ್.
ಈ ಮಾಹಿತಿ ಆಧಾರಿಸಿ ಜಾಲಾಡಿದ ಪೊಲೀಸರಿಗೆ ಬೆಂಗಳೂರಿನಲ್ಲಿ ಅಡಗಿದ್ದ ಈ ಮೈಕಲ್, ಬಾಲ್ಕಿನ್ಸ್ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಮೂಲಕ, ಇಡೀ ಜಾಲವೇ ಬಹಿರಂಗಗೊಂಡಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications