ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಬೆಂಗಳೂರಿನ ಫುಡ್ ಡೆಲಿವರಿ ಬಾಯ್
ಬೆಂಗಳೂರು, ಮೇ 7: ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ಫುಡ್ ಡೆಲಿವರಿ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮರ್ಡರ್ ಮಾಡಿದ್ದಾನೆ.
ಕಿಶೋರ್ ಕೊಲೆಯಾದ ವ್ಯಕ್ತಿ. ಇತನನ್ನು ರಾಜೇಶ್ ಎಂಬುವವನು ಹತ್ಯೆ ಮಾಡಿದ್ದಾನೆ. ರಾಜೇಶ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತ ಕುಡಿದ ಮತ್ತಿನಲ್ಲಿ ಕಿಶೋರ್ನನ್ನು ಕೊಲೆ ಮಾಡಿದ್ದಾನೆ. ಕಿಶೋರ್ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮಠದಹಳ್ಳಿಯ ಕಬೀರ್ ಆಶ್ರಮದ ಬಳಿ ಈ ಘಟನೆ ನಡೆದಿದೆ. ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣ ಏನು?, ರಾಜೇಶ್ ಹಾಗೂ ಕಿಶೋರ್ಗೆ ಏನು ಸಂಬಂಧ ಎನ್ನುವುದು ತನಿಖೆಯ ನಂತರ ತಿಳಿಯಲಿದೆ.

ಲಾಕ್ಡೌನ್ ಸಡಿಲಿಕೆ ನಂತರ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಜನ ಕ್ಯೂ ನಿಂತು ಮದ್ಯ ಸೇವನೆ ಮಾಡುತ್ತಿದ್ದಾರೆ. ಸರ್ಕಾರಕ್ಕೂ ಹಣ ಬರುತ್ತಿದೆ. ಆದರೆ, ಕುಡಿದ ಮತ್ತಿನಲ್ಲಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗುತ್ತಿವೆ.












Click it and Unblock the Notifications