ಕೇವಲ 62 ನಿಮಿಷಗಳಲ್ಲಿ 10 ಕಿ.ಮೀ ಓಡಿದ ಗಟ್ಟಿಗಿತ್ತಿ ಈ 5 ತಿಂಗಳ ಗರ್ಭಿಣಿ
ಬೆಂಗಳೂರು, ಡಿಸೆಂಬರ್ 23: 62 ನಿಮಿಷಗಳಲ್ಲಿ 10 ಕಿ.ಮೀ ಓಡುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ 5 ತಿಂಗಳ ಗರ್ಭಿಣಿ 10ಕಿ.ಮೀ ದೂರವನ್ನು 62 ನಿಮಿಷಗಳಲ್ಲಿ ಓಡಿದ್ದಾಳೆ ಎಂದರೆ ಆಕೆಯ ಗಟ್ಟಿತನವನ್ನು ಮೆಚ್ಚಬೇಕಾಗಿದ್ದೆ.
ಹೌದು ಅಂಕಿತಾ ಗೌರ್ ಎಂಬುವವರು ಟಿಸಿಎಸ್ 10ಕೆ ರನ್ ಅಲ್ಲಿ ಭಾಗವಹಿಸಿ, 62 ನಿಮಿಷಗಳಲ್ಲಿ ಓಟವನ್ನು ಪೂರೈಸಿದ್ದಾರೆ.
ಅಂಕಿತಾ ಕಳೆದ 9 ವರ್ಷಗಳಿಂದ ನಿತ್ಯ ಓಡುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ರನ್ನಿಂಗ್ ಮಾಡುವುದು ನನ್ನ ಹವ್ಯಾಸ, ಆದರೆ ನಿಮಗೆ ಆರೋಗ್ಯ ಅರಿ ಇಲ್ಲ ಎಂದಾಗ ಒಂದು ಹೆಜ್ಜೆ ಹಿಂದಿಡುವುದು ಸಾಮಾನ್ಯ ಆದರೆ ನಾನು ಇಟ್ಟಿಲ್ಲ ಎನ್ನುತ್ತಾರೆ ಅಂಕಿತಾ.

ಗರ್ಭಿಣಿಯಾಗಿದ್ದಾಗ ಓಡುವುದು ಆರೋಗ್ಯಕ್ಕೆ ಒಳ್ಳೆಯದು, ಅಮೆರಿಕನ್ ಕೌನ್ಸಿಲ್ ಆಫ್ ಹೆಲ್ತ್ ಕೂಡ ಅದನ್ನೇ ಹೇಳುತ್ತದೆ. ನೀವು ಒಂದೊಮ್ಮೆ ರನ್ನರ್ ಆಗಿದ್ದರೆ, ಗರ್ಭಿಣಿಯಾದಾಗ ಓಡುವುದು ಒಳ್ಳೆಯದೇ ಎಂದು ಹೇಳಿದೆ.
ಅಂಕಿತಾ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, 2013ರಿಂದ ಟಿಸಿಎಸ್ 10ಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೇ 5-6 ಅಂತಾರಾಷ್ಟ್ರೀಯ ಮ್ಯಾರಥಾನ್ನಲ್ಲೂ ಪಾಲ್ಗೊಂಡಿದ್ದರು. ನಿತ್ಯ ತಾನು 5-6 ಕಿ.ಮೀ ಓಡುತ್ತೇನೆ, ಇದರಿಂದಾಗಿ ಈ 10ಕೆ ರನ್ಗೆ ಸಹಾಯವಾಗಿದೆ. ಗರ್ಭಿಣಿಯಾಗಿರುವ ಕಾರಣ ಓಡುವ ಮಧ್ಯೆ ಕೆಲವು ಬಾರಿ ವಿರಾಮ ತೆಗೆದುಕೊಳ್ಳುತ್ತೇನೆ ಎಂದರು.
ಈ ಮೊದಲು ಟಿಸಿಎಸ್ 10ಕೆ ರನ್ ವಿಜೇತಳಾಗಿದ್ದೆ, ಆದರೆ ಈ ಬಾರಿ ಸಾಧ್ಯವಾಗಿಲ್ಲ, ಆದರೆ ಈ ರನ್ನಿಂದ ಹಿಂದೆ ಬಂದಿಲ್ಲ. ವೈದ್ಯರು ಕೂಡ ನನಗೆ ಬೆಂಬಲ ನೀಡಿದ್ದಾರೆ. ಆದರೆ ವೇಗವಾಗಿ ಓಡದಂತೆ ಸಲಹೆ ನೀಡಿದ್ದರು.
ನನಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದ ಕಾರಣ, 10ಕೆ ಓಡಲು ತೀರ್ಮಾನಿಸಿದೆ. ಮೊದಲು ತನ್ನ ತಾಯಿ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದರು ಬಳಿಕ ಒಪ್ಪಿಗೆ ನೀಡಿದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications