ಕರ್ನಾಟಕದಲ್ಲಿ ನೀತಿ ಸಂಹಿತೆ ಸಡಿಲಿಸಿದ ಆಯೋಗ
ಬೆಂಗಳೂರು, ಏ. 22 : ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಸಡಿಲಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ನೀತಿ ಸಂಹಿತೆ ಸಡಿಲಿಸಲು ಒಪ್ಪಿಗೆ ನೀಡಿದೆ. ನೀತಿ ಸಂಹಿತೆಯಲ್ಲಿನ ಕೆಲವು ಅಂಶಗಳನ್ನು ಸಡಿಲಿಸಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಮಂಗಳವಾರ
ಬೆಂಗಳೂರಿನಲ್ಲಿ
ಮಾತನಾಡಿದ
ಅನಿಲ್
ಕುಮಾರ್
ಝಾ,
ಕರ್ನಾಟಕದಲ್ಲಿ
ಏ.17ರಂದು
ಮತದಾನ
ಮುಗಿದಿದ್ದು
ಫಲಿತಾಂಶ
ಪ್ರಕಟಗೊಳ್ಳಲು
1
ತಿಂಗಳ
ಸಮಯವಿದೆ.
ಆದ್ದರಿಂದ
ನೀತಿ
ಸಂಹಿತೆ
ಸಡಿಲಿಸಿ
ರಾಜ್ಯದ
ಅಭಿವೃದ್ಧಿಗೆ
ಸಹಕರಿಸಬೇಕು
ಎಂದು
ವಿವಿಧ
ಪಕ್ಷಗಳು
ಮನವಿ
ಮಾಡಿದ್ದವು
ಎಂದು
ಹೇಳಿದರು.
ಕೇಂದ್ರ ಚುನಾವಣಾ ಆಯೋಗದೊಂದಿಗೆ ಸರ್ಕಾರ ಮತ್ತು ವಿವಿಧ ಪಕ್ಷಗಳ ಮನವಿ ಬಗ್ಗೆ ಮಾತುಕತೆ ನಡೆಸಿದ್ದು, ಚುನಾವಣಾ ನೀತಿ ಸಂಹಿತೆಯಲ್ಲಿ ಕೆಲವು ಅಂಶಗಳನ್ನು ಸಡಿಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಝಾ ವಿವರಿಸಿದರು. ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತಿಲ್ಲ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು. [ನೀತಿ ಸಂಹಿತೆ ಸಡಿಲಿಸಲು ಮನವಿ ]
ಸಡಿಲಿಸಲಾದ
ಅಂಶಗಳು
*
ಸಂಪುಟ
ಸಚಿವರು
ರಾಜ್ಯ
ಪ್ರವಾಸ
ಮಾಡಬಹುದು
*
ಇಲಾಖಾ
ಸಭೆಗಳನ್ನು
ನಡೆಸಬಹುದು
[ಕರ್ನಾಟಕದಲ್ಲಿ
ಎಷ್ಟು
ಮತದಾನವಾಗಿದೆ]
*
ಚುನಾವಣಾ
ಕರ್ತವ್ಯದಲ್ಲಿರುವ
ಅಧಿಕಾರಿಗಳು
ಸಭೆಯಲ್ಲಿ
ಭಾಗವಹಿಸುವಂತಿಲ್ಲ
*
ತುರ್ತು
ಸಂದರ್ಭದಲ್ಲಿ
ಅಗತ್ಯ
ಕ್ರಮ
ಕೈಗೊಳ್ಳಬಹುದು
*
ಆರಂಭವಾಗಿರುವ
ಕಾಮಗಾರಿಗಳ
ಪರಿಶೀಲನೆಯನ್ನು
ನಡೆಸಬಹುದು
*
ಚುನಾವಣೆಗೆ
ನಿಯೋಜಿತವಾಗಿರುವ
ಅಧಿಕಾರಿಗಳು
ಯಾವ
ಸಭೆಯಲ್ಲೂ
ಭಾಗವಹಿಸುವಂತಿಲ್ಲ