ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮುಂಗಾರು ಮುಂದುವರಿಕೆ, ಬೆಂಗಳೂರಲ್ಲಿ 2 ದಿನ ತುಂತುರು ಮಳೆ

|
Google Oneindia Kannada News

ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಮುಂಗಾರು ಮುಂದುವರೆದಿದ್ದು ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ಇನ್ನೆರೆಡು ದಿನ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರದಲ್ಲಿ ಮುಂಗಾರಿನ ಪರಿಣಾಮ ಇನ್ನೂ ಎರಡು ದಿನ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲವಾಗಿದೆ. ಹೀಗಾಗಿ ನಗರದ ಹೊರವಲಯಗಳಲ್ಲಿ ತುಂತುರು ಮಳೆಯಾಗಿದ್ದು ಬಿಟ್ಟರೆ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ.

ಬೆಂಗಳೂರಲ್ಲಿ ಮಳೆ ಬಂದರೆ ಈ ರಸ್ತೆಗಳಲ್ಲಿ ಮಾತ್ರ ಹೋಗ್ಬೇಡಿ ಬೆಂಗಳೂರಲ್ಲಿ ಮಳೆ ಬಂದರೆ ಈ ರಸ್ತೆಗಳಲ್ಲಿ ಮಾತ್ರ ಹೋಗ್ಬೇಡಿ

ಆದರೂ ನಗರದ ಕೇಂದ್ರ ಭಾಗಗಳಲ್ಲಿ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಎಚ್‌ಎಎಲ್‌ನಲ್ಲಿ 30.2 ಡಿಗ್ರಿ ಸೆಲ್ಸಿಯಸ್, ಕೆಐಎಎಸಲ್‌ನಲ್ಲಿ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗದಗದ ನರಗುಂದದಲ್ಲಿ 7 ಸೆಂ.ಮೀನಷ್ಟು ಮಳೆಯಾಗಿದೆ.

Drizzling will continue for next two days in Bengaluru

ಬಾಗಲಕೋಟೆಯ ಜಮಖಂಡಿ 6 ಸೆಂ.ಮೀ, ಸೌಂದತ್ತಿ, ಇಂಡಿ, ಖಜೂರಿಯಲ್ಲಿ ತಲಾ 5 ಸೆಂ.ಮೀ, ಕೊಪ್ಪಳ, ಲೋಕಾಪುರದಲ್ಲಿ 4 ಸೆಂ.ಮೀ, ಬೀದರ್‌ 3 ಸೆಂ.ಮೀ, ಕೋಟಾ, ಯಲಬುರ್ಗಾ, ಬಬಲೇಶ್ವರ, ಚಿತ್ತಾಪುರ, ಲಿಂಗನಮಕ್ಕಿಯಲ್ಲಿ ತಲಾ 2ಸೆಂ.ಮೀನಷ್ಟು ಮಳೆಯಾಗಿದೆ.

English summary
Meteorological department gave indication that drizzling will continue in Bengaluru for next Two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X