ನಾನು ಜಾತಿವಾದಿಯಾಗಿದ್ದರೆ ನನ್ನ ವಂಶ ನಿರ್ನಾಮವಾಗಲಿ: ಜಮೀರ್ ಅಹಮದ್ ಡೈಲಾಗ್!

ಬೆಂಗಳೂರು, ಏ. 14: 'ನಾನು ಜಾತಿ ಮಾಡಿದ್ದರೆ, ನನ್ನ ವಂಶ ನಿರ್ನಾಮವಾಗಲಿ, ನಾನು ಸತ್ಯ ಹೇಳುತ್ತಿದ್ದೇನೆ. ರಾಜಕೀಯಕ್ಕೆ ಬಂದ ಮೇಲೆ ನನಗೆ ಜಾತಿ ಗೊತ್ತಾಗಿರೋದು. ಅದಕ್ಕಿಂತ ಮುಂಚೆ ನನಗೆ ಅದು ಗೊತ್ತಿಲ್ಲ..!

ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಶಾಸಕ ಜಮೀರ್ ಅಹಮದ್ ಖಾನ್ ಹೊಡೆದ ಡೈಲಾಗ್ ಇದು.

ನಮಗೆ ಜಾತಿ ಬೇಡ, ನೆಮ್ಮದಿ ಬೇಕು. ನಾನು ಮುಸ್ಲಿಂ ಆಗಿರಬಹುದು. ಆದರೆ, ಅದಕ್ಕೂ ಮುಂಚೆ ನಾನು ಭಾರತೀಯ, ಹಿಂದೂಸ್ತಾನಿ, ನಾನು ಕನ್ನಡಿಗ ಎಂದು ಚಾಮರಾಜಪೇಟೆ ಶಾಸಕ ಬಿ. ಝಡ್ ಜಮೀರ್ ಅಹಮದ್ ಖಾನ್ ಹೇಳಿದರು.

Dr. B R Ambedkar Jayanthi Celebration in Chamarajpete

ನಿಮ್ಮ ತೊಂದರೆ, ನಿಮ್ಮ ಕಷ್ಟ ಎಲ್ಲವೂ ನನ್ನದು ಎಂದು ತಿಳಿದಿದ್ದೇನೆ. ಅದರಂತೆಯೇ ನಾನು ಬಾಳುತ್ತಿದ್ದೇನೆ. ಯಾರಲ್ಲೂ ಜಾತಿ ಬರುವುದು ಬೇಡ. ನಾನು ನೀವು ಆಯ್ಕೆ ಮಾಡಿದ ಸೇವಕ ನಿಮ್ಮ ಸೇವೆಯಲ್ಲಿ ಪ್ರತಿದಿನನೂ ಕಳೆಯುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಚಾಮರಾಜಪೇಟೆ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ‌ ಪ್ರಯುಕ್ತ ಇಂದು ಚಾಮರಾಜಪೇಟೆ ಕ್ಷೇತ್ರದ ಕೆ.ಆರ್ ಮಾರ್ಕೆಟ್ ವಾರ್ಡ್ ನ ಟಿಸಿಎಂ ಗ್ರ್ಯಾಂಡ್ ರಸ್ತೆಯಲ್ಲಿರೋ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

Dr. B R Ambedkar Jayanthi Celebration in Chamarajpete

Recommended Video

      ದಲಿತರನ್ನು ದೇವಸ್ಥಾನದಲ್ಲಿ ಈಗ್ಲೂ ಹೇಗೆ ನಡೆಸಿಕೊಳ್ತಾರೆ ಅನ್ನೋದನ್ನ ಹೇಳಿದ ಡಾ.ಜಿ ಪರಮೇಶ್ವರ್ | Oneindia Kannada

      ಸಂವಿಧಾನ ಶಿಲ್ಪಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಬಳಿಕ ವಾರ್ಡ್ ಸಂಖ್ಯೆ 136ರ ಜಗಜೀವನರಾಮ್ ನಗರದಲ್ಲಿ ಮುಖಂಡರಾದ ಪಿ.ಕೆ ಅಲ್ತಾಫ್ ಅವರು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+