Get Updates
Get notified of breaking news, exclusive insights, and must-see stories!

ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ವಿತರಣೆ ಯಾವಾಗಿನಿಂದ ಗೊತ್ತಾ?

ಬೆಂಗಳೂರು, ಡಿಸೆಂಬರ್‌ 8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಎಲ್ಲಾ ವಾರ್ಡ್‌ಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಲ್ಲಿ ಸಂಕ್ರಾಂತಿ ಹಬ್ಬದ ನಂತರ ಅದರ ಮೆನುವಿನಲ್ಲಿ ರಾಗಿ ಮುದ್ದೆ ಮತ್ತು ರೊಟ್ಟಿಯನ್ನು ನೀಡಲಾಗುತ್ತದೆ ಎಂದು ಟಿವಿ 9 ವರದಿ ಮಾಡಿದೆ.

ರಾಗಿ ಮುದ್ದೆ ಕ್ಯಾಂಟೀನ್‌ನ ಊಟ ಮತ್ತು ರಾತ್ರಿಯ ಮೆನುವಿನ ಭಾಗವಾಗಿರುತ್ತದೆ. ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ನೀಡಲು ಮತ್ತು ನಿರ್ವಹಣೆ ಕೊರತೆಯಿಂದ ತೊಂದರೆಗೊಳಗಾಗಿರುವ ನಗರದಲ್ಲಿ ಕ್ಯಾಂಟೀನ್‌ಗಳನ್ನು ನವೀಕರಿಸಲು ಪಾಲಿಕೆ ಟೆಂಡರ್‌ಗಳನ್ನು ನೀಡುವ ಸಾಧ್ಯತೆಯಿದೆ.

Do you know since when the Ragi mudde given in Indira canteen

ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಂದ್:

ಮೈಸೂರಿನ ಬನ್ನಿಮಂಟಪ ಮತ್ತು ಉದಯಗಿರಿಯಲ್ಲಿರುವ ಎರಡು ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣೆ ಕೊರತೆಯಿಂದ ಮುಚ್ಚಲ್ಪಟ್ಟಿವೆ. ಎರಡೂ ಕ್ಯಾಂಟೀನ್‌ಗಳು ಮುಚ್ಚಿ ತಿಂಗಳುಗಳೇ ಕಳೆದಿವೆ.

''ಕಳೆದ ಆರರಿಂದ ಏಳು ತಿಂಗಳಿಂದ ಕ್ಯಾಂಟೀನ್ ಮುಚ್ಚಲಾಗಿದೆ. ಕ್ಯಾಂಟೀನ್‌ಗಳನ್ನು ಹೊಸ ಗುತ್ತಿಗೆದಾರರು ವಹಿಸಿಕೊಂಡ ನಂತರ ಜನರಿಗೆ ಆಹಾರ ನೀಡುವುದನ್ನು ನಿಲ್ಲಿಸಿದರು. 8 ಸಾವಿರ ಸಂಬಳಕ್ಕೆ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದೆ. ತಿಂಗಳಾನುಗಟ್ಟಲೆ ಸಂಬಳ ಕೊಡದ ಕಾರಣ ಕೆಲಸ ನಿಲ್ಲಿಸಿದೆ. ನನಗೆ ಇನ್ನೂ 30,000 ರೂಪಾಯಿ ಬಾಕಿ ವೇತನ ಬಂದಿಲ್ಲ ಎಂದು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ದೇವೆರಮ್ಮ ತಿಳಿಸಿದರು.

2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. 2018 ರಲ್ಲಿ ಸರ್ಕಾರ ಬದಲಾದ ನಂತರ ಕ್ಯಾಂಟೀನ್‌ಗಳು ಕಾರ್ಯಾಚರಣೆ ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸಲಾರಂಭಿಸಿದವು. ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ 175 ಕ್ಯಾಂಟೀನ್‌ಗಳಲ್ಲಿ 163 ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+