Get Updates
Get notified of breaking news, exclusive insights, and must-see stories!

Actor Darshan: ದರ್ಶನ್‌ಗೆ ಕಾಟೇರಾ ನಿರ್ದೇಶಕ ನೀಡಿರುವ ಆ ಎರಡು ಪುಸ್ತಕಗಳಲ್ಲಿ ಏನಿದೆ?

ನಟ ದರ್ಶನ್‌ ಅವರನ್ನು ಜೈಲಿನಲ್ಲಿ ಭೇಟಿ ಆಗಿ ಶುಭ ಸುದ್ದಿ ನೀಡಿ ಹೋಗ ಬೇಕು ಎಂದು ಕಾಟೇರಾ ನಿರ್ದೇಶಕ ತರುಣ್‌ ಸುಧೀರ್‌ ಅವರು ಆಗಮಿಸಿದ್ದರು. ಆದರೆ ಅವರಿಗೆ ನಿರಾಸೆ ಕಾದಿದೆ. ತರುಣ್‌ ಸುಧೀರ್‌ ಅವರಿಗೆ ಮದುವೆಯ ಆಮಂತ್ರಣವನ್ನೇ ನೀಡಲು ಅವಕಾಶ ನೀಡಲಿಲ್ಲ ಎಂದು ತರುಣ್‌ ತಿಳಿಸಿದ್ದಾರೆ.

ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಲ್‌ ಇಬ್ಬರೂ ಇದೇ ಆಗಸ್ಟ್‌ 10 ಹಾಗೂ 11 ರಂದು ಹಸೆ ಮಣೆ ಏರಲಿದ್ದಾರೆ. ಮದುವೆಯ ಆಮಂತ್ರಣದ ಮೊದಲ ಪ್ರತಿಯನ್ನು ತಮ್ಮ ಗಾಢ್‌ ಫಾದರ್‌ ದರ್ಶನ್‌ ಅವರಿಗೆ ನೀಡಬೇಕು ಎಂದು ನಿರ್ದೇಶಕ ತರುಣ್‌ ಸುಧೀರ್‌ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಆದರೆ ಅವರನ್ನು ಅಲ್ಲಿನ ಅಧಿಕಾರಿಗಳು ಒಳಗೆ ಬಿಡಲಿಲ್ಲ.

Director Tarun Sudhir Gifts Darshan Two Special Books

ಗಾಢ್‌ಫಾದರ್‌ ದರ್ಶನ ಪಡೆದ ತರುಣ್‌

ಶನಿವಾರ (ಜುಲೈ 19) ರಂದು ದರ್ಶನ್‌ ಅವರನ್ನು ಭೇಟಿ ಆಗಲು ನಿರ್ದೇಶಕ ತರುಣ್‌ ಸುಧೀರ್‌, ಯಶಸ್‌ ಸುರ್ಯ ಹಾಗೂ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ನಟ ದರ್ಶನ್‌ ಅವರನ್ನು ಭೇಟಿ ಆಗಿ ಆರೋಗ್ಯವನ್ನು ವಿಚಾರಿಸಿದ್ದಾರೆ. ದರ್ಶನ್‌ ಇವರ ಜೊತೆ ಕೆಲ ಕಾಲ ಮಾತನಾಡಿದ್ದಾರೆ. ಆದರೆ ದರ್ಶನ್ ಅವರಿಗೆ ಮೊದಲ ಆಮಂತ್ರಣ ನೀಡಬೇಕು ಎಂದು ಕನಸು ಕಂಡಿದ್ದ ಸುಧೀರ್‌ ಆಸೆಗೆ ಬ್ರೇಕ್ ಬಿದ್ದಿದೆ.

ಜೈಲು ಅಧಿಕಾರಿಗಳು ದರ್ಶನ್‌ ನೋಡಲು ಹೋಗುವಾಗ ಮದುವೆ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು ಬಿಟ್ಟಿಲ್ಲ. ಆದರೆ ದರ್ಶನ್‌ ಅವರಿಗೆ ತರುಣ್‌ ಸುಧೀರ್‌ ಅವರು ತಂದಿದ್ದ ಆ ಎರಡು ಪುಸ್ತಕಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ದರ್ಶನ್‌ಗೆ ನೀಡಿದ ಆ ಎರಡು ಪುಸ್ತಕಗಳು ಯಾವವು?

ದರ್ಶನ್‌ ಅವರನ್ನು ಭೇಟಿ ಆದ ಮೇಲೆ ಮಾಧ್ಯಮದ ಜೊತೆ ಮಾತನಾಡಿರುವ ತರುಣ್‌ ಸುಧೀರ್‌ ದರ್ಶನ್‌ ಅವರಿಗೆ ಎರಡು ಪುಸ್ತಕ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾರೆ. ದರ್ಶನ್‌ಗೆ ಓದುವುದಕ್ಕಾಗಿ ತರುಣ್‌ ಸುಧೀರ್‌ ಅವರು ದಿ ಅಲ್‌ಕೆಮಿಸ್ಟ್‌ ಕನ್ನಡ ಅನುವಾದ ಪುಸ್ತಕವನ್ನು ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಅರ್ಜುನ್ ಆನೆಯ ಬಗ್ಗೆ ಬರೆದಿರುವ ವಿಶೇಷ ಪುಸ್ತಕವನ್ನು ನೀಡಿ ಬಂದಿದ್ದಾಗಿ ತಿಳಿಸಿದ್ದಾರೆ.

Director Tarun Sudhir Gifts Darshan Two Special Books

ಆ ಪುಸ್ತಕದಲ್ಲಿ ಏನಿದೆ?

ದಿ ಅಲ್‌ಕೆಮಿಸ್ಟ್‌ ಇದು ಒಂದು ಜೀವನದ ಕಥೆ ಆಗಿದೆ. ಆ ಪುಸ್ತಕದಲ್ಲಿ ಒಂದು ಫಿಲಾಸಪಿ ಇದೆ. ಬುಕ್‌ ಓದುತ್ತಾ ಹೋದರೆ ಜೀವನಕ್ಕೆ ಪ್ರೇರಣೆ ಸಿಗಲಿದೆ. ಯಾವ ಸಂದರ್ಭದಲ್ಲಿ ಹೇಗೆ ಪಾಸಿಟಿವ್‌ ನೆಸ್‌ ಹುಡಕಬೇಕು ಎಂಬುದು ಆ ಪುಸ್ತಕದಲ್ಲಿ ನೀಡಲಾಗಿದೆ ಎಂದು ತರುಣ್‌ ಸುಧೀರ್‌ ವಿವರಿಸಿದ್ದಾರೆ. ಇನ್ನು ದರ್ಶನ್‌ಗೆ ಪ್ರಾಣಿಗಳೆಂದರೆ ತುಂಬ ಇಷ್ಟ ಹೀಗಾಗು ಆನೆಯ ಪುಸ್ತಕವನ್ನು ನೀಡಿದ್ದೇನೆ ಎಂದು ತರುಣ್‌ ಹೇಳಿದ್ದಾರೆ.

ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಲ್‌ ಅವರ ಪ್ರೀತಿ ಮೊದಲಿಗೆ ದರ್ಶನ್‌ ಅವರಿಗೆ ತಿಳಿದಿತ್ತು. ದರ್ಶನ್‌ ಹಸೆ ಮಣೆ ಏರಲು ಗ್ರೀನ್‌ ಸಿಗ್ನಲ್‌ ನೀಡಿದ್ದರು ಎನ್ನಲಾಗಿದೆ. ಇನ್ನು ದರ್ಶನ್‌ ಜೈಲಿನಲ್ಲಿರುವಾಗ ನಾನು ಮದುವೆ ಆಗಲಾರೆ ಎಂದು ತರುಣ್‌ ಹೇಳುತ್ತಿದ್ದರಂತೆ. ಆದರೆ ಹಿರಿಯರ ಒತ್ತಾಯಕ್ಕೆ ಮಣಿದು ಆಗಸ್ಟ್‌ನಲ್ಲಿ ಮದುವೆ ಆಗಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+