ಕರ್ನಾಟಕವೇ ಉಗ್ರರ ಸ್ಲೀಪರ್ ಸೆಲ್: ಡಿಜಿಪಿ ಸ್ಫೋಟಕ ಹೇಳಿಕೆ
ಬೆಂಗಳೂರು, ಸೆ.29: ಕರ್ನಾಟಕವು ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಎನ್ನುವ ಆತಂಕಕಾರಿ ಮಾಹಿತಿಯನ್ನು ಡಿಜಿಪಿ ನೀಲಮಣಿ ರಾಜು ಹೊರಹಾಕಿದ್ದಾರೆ.
ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ
ಉಗ್ರ ಚಟುವಟಿಕೆಗಳು, ವಿಧ್ವಂಸಕ ಕೃತ್ಯಗಳು ನಡೆಯದಿದ್ದರೂ ಕೂಡ ಕರ್ನಾಟಕ ಉಗ್ರರ ಆವಾಸ ಸ್ಥಾನವಾಗುತ್ತಿದೆ , ದಕ್ಷಿಣ ಭಾರತ ರಾಜ್ಯಗಳ ಡಿಜಿಪಿ ಸಭೆಯಲ್ಲಿ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಮತ್ತು ಪುದುಚೆರಿ ಡಿಜಿಪಿಗಳು ಭಾಗವಹಿಸಿದ್ದರು.
ಡ್ರಗ್ಸ್ ಗೆ ನೋ, ಬದುಕಿಗೆ ಯೆಸ್ ಹೇಳಿ ಅಂತಾರೆ ಬೆಂಗಳೂರು ಪೊಲೀಸರು
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಇಲ್ಲ, ಶಾಂತಿಯುತವಾಗಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಭಯೋತ್ಪಾದಕ ವಿಚಾರದಲ್ಲಿ ಹೆಚ್ಚಿನ ಚಟುವಟಿಕೆ ಕಂಡುಬಂದಿಲ್ಲ, ಆದರೆ ರಾಮನಗರ ಮತ್ತು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಜಮತ್ ಮುಜಾಯಿನ್ ಉಗ್ರ ಸಂಘಟನೆ ಸದಸ್ಯರು ಬಂಧನಕ್ಕೆ ಒಳಗಾಗಿದ್ದಾರೆ.
ಟ್ರಿಗರ್ ಎಳೆಯುವ ಮುನ್ನ ನಡೆದಿದ್ದೇನು? ಸುಪಾರಿ ಕಿಲ್ಲರ್ ಮನ ಕರಗಿದ್ದೇಕೆ?
ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್
ರಾಜ್ಯದಲ್ಲಿ ಉಗ್ರರಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಅದೇ ರೀತಿ ಐಸಿಸ್ ಬೆಂಬಲಿಗರೂ ಕೂಡ ಇದ್ದಾರೆ, ತುಮಕೂರಿನಲ್ಲಿ ಇಂತಹ ಜಾಲವನ್ನು ಪತ್ತೆ ಹಚ್ಚಲಾಗಿತ್ತು, ಸಿಮಿ ಸಂಘಟನೆ ಉಗ್ರರು ಇಲ್ಲೇ ಹುಟ್ಟಿದ್ದು, ನಿಗ್ರಹಕ್ಕೆ ಹೆಚ್ಚಿನ ಹೊಂದಾಣಿಕೆ ಬೇಕು ಮತ್ತು ನಿರಂತರ ಕಾರ್ಯಾಚರಣೆ ನಡೆಯಬೇಕು ಎಂದು ಡಿಜಿಪಿ ನೀಲಮಣಿ ರಾಜು ಹೇಳಿದರು.