ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಕೇಳಿದ ತಿಲಕ್ ನಗರ ಠಾಣೆ ಇನ್ಸ್‌ಪೆಕ್ಟರ್ ಅಮಾನತು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ವೈನ್ ಶಾಪ್ ವಿರುದ್ಧ ಕೇಸು ದಾಖಲಿಸದೇ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಅಮಾನತು ಗೊಂಡಿದ್ದಾರೆ. ಬೆಂಗಳೂರಿನ ತಿಲಕ್ ನಗರ ಠಾಣೆ ಇನ್ಸ್‌ಪೆಕ್ಟರ್ ತನ್ವೀರ್ ಸೇಠ್ ಅಮಾನತುಗೊಂಡವರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ತ್ವನೀರ್ ಸೇಠ್ ಅವರನ್ನು ಅಮಾನತು ಮಾಡಿದ್ದಾರೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆಯಂತೆ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

 Demand for bribe, Tilak Nagar police inspector suspended

ಇನ್ಸ್‌ಪೆಕ್ಟರ್ ತನ್ವೀರ್ ಸೇಠ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಅವುಗಳನ್ನು ಗಮನಿಸಿ ಗೃಹ ಸಚಿವರ ಗಮನಕ್ಕೆ ತರಲಾಗಿತ್ತು. ಇಲಾಖಾ ಮಟ್ಟದಲ್ಲಿ ನಡೆಸಿದ ರಹಸ್ಯ ತನಿಖೆಯಲ್ಲಿ ಅಕ್ರಮಗಳು ಸಾಬೀತಾಗಿತ್ತು. ಆದ್ದರಿಂದ, ಅಮಾನತು ಮಾಡಲಾಗಿದೆ.

ಮಂಗಳೂರು: ಲಂಚ ಸ್ವೀಕರಿಸಿದ ಪೇದೆಗೆ 2 ವರ್ಷ ಜೈಲುಮಂಗಳೂರು: ಲಂಚ ಸ್ವೀಕರಿಸಿದ ಪೇದೆಗೆ 2 ವರ್ಷ ಜೈಲು

ಕೆಲವು ದಿನಗಳ ಹಿಂದೆ ವೈನ್ ಶಾಪ್ ಮಾಲೀಕ ಸೇರಿದಂತೆ ಮೂವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದ ತನ್ವೀರ್ ಸೇಠ್, ಅಕ್ರಮವಾಗಿ ಅವರನ್ನು ಒಂದು ದಿನ ಠಾಣೆಯಲ್ಲಿಟ್ಟುಕೊಂಡಿದ್ದರು. 2 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಮಿಂತ್ರಾ ಸಿಇಒ ಅನಂತ್ 'ಮನೆಗಳ್ಳರ' ಪ್ರೇಮ ಕಥೆಮಿಂತ್ರಾ ಸಿಇಒ ಅನಂತ್ 'ಮನೆಗಳ್ಳರ' ಪ್ರೇಮ ಕಥೆ

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರು ಎಲ್ಲಾ ಪೊಲೀಸರಿಗೆ 20 ಅಂಶಗಳ ವಿಚಾರವನ್ನು ತಿಳಿಸಿದ್ದರು. ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

English summary
Bengaluru city police commissioner T.Suneel Kumar has suspended Tilak Nagar police inspector Tanveer Sait. Tanveer Sait demanding for a bribe of Rs 2 lakh from a bar owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X