Cyber Fraud Alert: ಆನ್ಲೈನ್ ಹೂಡಿಕೆ ಹೆಸರಲ್ಲಿ ಅಧಿಕಾರಿಗೆ 5.14 ಕೋಟಿ ರೂ. ವಂಚನೆ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ಬಹುರಾಷ್ಟ್ರೀಯ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಅತ್ಯಧಿಕ ಲಾಭ ಆಸೆಗೆ ಹೂಡಿಕೆ ಆಮೀಷ ಒಡ್ಡಿದವರ ಮಾತು ಕೇಳಿ ಬರೋಬ್ಬರಿ 5.14 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆನ್ಲೈನ್ ಹೂಡಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಕಳೆದ ವರ್ಷ 2025ರ ನವೆಂಬರ್ನಲ್ಲಿ 'LKP VIP' ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಇವರನ್ನು ಈ ವಂಚನೆಗೆ ಒಳಗಾದ ಎಂಎನ್ಸಿ ಕಂಪನಿಯ ಅಧಿಕಾರಿಯನ್ನು ಸಂಪರ್ಕಿಸಲಾಗಿತ್ತು. ದೀಪಾ ಮತ್ತು ದಿನೇಶ್ ಎಂಬುವವರು ತಾವು ಹೂಡಿಕೆ ತಜ್ಞರೆಂದು ನಂಬಿಸಿ, 'LKPNHWL' ಎಂಬ ನಕಲಿ ಮೊಬೈಲ್ ಆಪ್ ಡೌನ್ಲೋಡ್ ಮಾಡಲು ತಿಳಿಸಿದ್ದರು. ವಂಚಕರು ಹೇಳಿದ್ದನ್ನು ನಂಬಿಕ ಇವರು ಹಣ ಕಳೆದುಕೊಂಡಿದ್ದಾರೆ.

ದೀಪಾ ಮತ್ತು ದಿನೇಶ್ ಕೆ ವಾಘೇಲಾ ಅವರು ಅಧಿಕಾರಿಯನ್ನು ಸಂಪರ್ಕಿಸಿದರು, ಅವರು ನಕಲಿ ಗುರುತಿನ ಚೀಟಿ ತೋರಿಸಿ ನಂಬಿಸಿದ್ದರು. ನಂಬಿದ ಅಧಿಕಾರಿಯು ನವೆಂಬರ್ 12 ರಿಂದ ಜನವರಿ 7ರ ನಡುವೆ ವರೆಗೆ ಆಪ್ ಮೂಲಕ ವಂಚಕರು ಹೇಳಿದಂತೆ ಹಣ ವರ್ಗಾಯಿಸಿದ್ದಾರೆ. ಒಟ್ಟು 5,14,85,000 ರೂಪಾಯಿ ಹಣ ವರ್ಗಾಯಿಸಿದ್ದರು. ಹಣ ಕಟ್ಟಿದ ಬಳಿಕ ಈ ಆಪ್ನಲ್ಲಿ ನಿಮ್ಮ ಹಣವು 19 ಕೋಟಿ ರೂಪಾಯಿಗೆ ಬೆಳೆದಿದೆ ಎಂದು ತೋರಿಸಲಾಗಿದೆ.
ಹಣ ಪಡೆಯಲು ₹2 ಕೋಟಿ ತೆರಿಗೆ ಕಟ್ಟಿ
ಹಣ ಮೂರರಷ್ಟು ಬೆಳೆದಿದೆ ಎಂದು ಅಧಿಕಾರಿ ವಿತ್ಡ್ರಾ ಮಾಡಿಕೊಳ್ಳಲು ಹೋದಾಗ, "2 ಕೋಟಿ ರೂ. ತೆರಿಗೆ ಪಾವತಿಸಿ" ಬೇಕೆಂದು ವಂಚಕರು ತಿಳಿಸಿದ್ದಾರೆ. ಇದನ್ನು ನೋಡಿದ ಅಧಿಕಾರಿಗೆ ಆಘಾತವಾಗಿದೆ. ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನವರಿ 12ರಂದು ಎಫ್ಐಆರ್ ದಾಖಲಿಸಲಾಗಿದೆ.
"ವಂಚನೆಯ ಪ್ರಮುಖ ಭಾಗವೆಂದರೆ ಬಲಿಪಶುಗಳಿಗೆ ಆರಂಭದಲ್ಲಿ ತಾವು ಲಾಭ ಗಳಿಸುತ್ತಿದ್ದೀರಿ ಎಂದು ಮನವೊಲಿಸಲು ಚಾಕಚಕ್ಯತೆಯಿಂದ ಮಾಡಿದ ನಕಲಿ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಇಲ್ಲಿ ಯಾವುದೇ ಕಾಗದದ ವಹಿವಾಟುಗಳು ನಡೆದಿರುವುದಿಲ್ಲ. ಆದ್ದರಿಂದ ಇಂತಹ ವಂಚನೆ, ಕರೆಗಳು, ಸಂದೇಶಗಳಿಂದ ಜಾಗರೂಕರಾಗಿರುವಂತೆ ಪೊಲೀಸರು ಹೇಳಿದ್ದಾರೆ.
ವೃದ್ಧರಿಗೆ 95 ಲಕ್ಷ ರೂ. ವಂಚನೆ
ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗೆ ವೃದ್ಧರಿಗೆ ಇಂಥದ್ದೆ ವಂಚನೆ ಮಾಡಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 69 ವರ್ಷದ ವ್ಯಕ್ತಿಯೊಬ್ಬರು ಆನ್ಲೈನ್ ಸಾರ್ವಜನಿಕ ಹಾಗೂ ಸುರಕ್ಷಿತ ವೇದಿಕೆಯಲ್ಲಿ ಹೂಡಿಕೆ ಮಾಡುತ್ತಿದ್ದೇನೆ ಎಂದು ನಂಬಿ 95 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ವಹಿವಾಟುಗಳನ್ನು ವಂಚಕರು ಅನುಮಾನ ಬಾರದಂತೆ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರು ನಕಲಿ ಅಪ್ಲಿಕೇಶನ್ಗಳನ್ನು ಬಳಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವೃದ್ಧರು 75 ಲಕ್ಷ ರೂಪಾಯಿ ಹೂಡಿಕೆಯಿಂದ 1.33 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ ಎಂದು ನಕಲಿ ಆಪ್ನಲ್ಲಿ ತೋರಿಸಲಾಗಿದೆ. ಅವರು ಸಹ ಅಧಿಕಾರಿಯಂತೆ ಹಣ ಪಡೆಯಲು ಮುಂದಾದಾಗ 18 ಲಕ್ಷ ರೂ. ತೆರಿಗೆ ಪಾವತಿಸುವಂತೆ ಕೇಳಲಾಗಿದೆ. ಬಳಿಕವೇ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಸುಧಾ ಮೂರ್ತಿ ಆನ್ಲೈನ್ ವಂಚನೆ ವಿಡಿಯೋ, ಜಾಗೃತಿ
ಇತ್ತೀಚೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಡೀಪ್ ಫೇಕ್ ವಿಡಿಯೋ ಮಾಡಿ, ಹಣ ಪಾವತಿಸಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ವಂಚಕರು ನಂಬಿಸಿದ್ದರು. ಅವರೇ ವಿಡಿಯೋದಲ್ಲಿ ಮಾತನಾಡಿ ಹಣ ಹೂಡಿಕೆ ಮಾಡಲು ಪ್ರೋತ್ಸಾಹ ನೀಡಿರುವಂತೆ ವಿಡಿಯೋ ಸೃಷ್ಟಿಸಿದ್ದರು. ಈ ವಿಡಿಯೋ ಆನ್ಲೈನ್ನಲ್ಲಿ ಹರಿದಾಡಿ ಸುದ್ದಿಯಾಗಿತ್ತು. ವಿಡಿಯೋ ನೋಡಿದ ಕೆಲವರು ಹಣ ಕಟ್ಟಿ ಮೋಸ ಹೋಗಿದ್ದಾರೆ. ಎಚ್ಚೆತ್ತ ಸುಧಾಮೂರ್ತಿ ಅವರು ಕೂಡಲೇ ಇಂತಹ ವಂಚಕರ ಜಾಲಕ್ಕೆ ಬೀಳದಂತೆ, ಫೇಕ್ ವಿಡಿಯೋ ನಂಬದಂತೆ ಜಾಗೃತಿ ಮೂಡಿಸಿದ್ದರು.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications