ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಸುವಂತಿಲ್ಲ: ಕೋರ್ಟ್ ಸ್ಪಷ್ಟನೆ
ಬೆಂಗಳೂರು, ಜೂನ್ 7: ಇನ್ನುಮುಂದೆ ಪತ್ನಿಯ ಎಟಿಂಎ ಕಾರ್ಡ್ಗಳನ್ನು ಪತಿ ಬಳಸುವಂತಿಲ್ಲ, ಒಟ್ಟಿನಲ್ಲಿ ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಕೆ ಮಾಡುವಂತಿಲ್ಲ. ಒಂದೊಮ್ಮೆ ಬಳಕೆ ಮಾಡಿದಲ್ಲಿ ಅದರಿಂದಾಗುವ ನಷ್ಟಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ ಎಂದು ಗ್ರಾಹಕರ ನ್ಯಾಯಾಲಯ ಹೇಳಿದೆ.
ಈ ವಾದವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಡಿಸಿದ್ದು, ಇದಕ್ಕೆ ಗ್ರಾಹಕರ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಅಭಿಪ್ರಾಯವನ್ನು ನೀಡಿದೆ.
ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ಅನ್ವಯ ಪತಿ, ಪತ್ನಿ, ಸ್ನೇಹಿತ , ಸಂಬಂಧಿ ಯಾರೇ ಆಗಿರಲಿ ಕಾರ್ಡ್ ಅನ್ನು ಮೊತ್ತೊಬ್ಬರು ಬಳಕೆ ಮಾಡುವಂತಿಲ್ಲ, ಒಂದು ವೇಳೆ ಅನಧಿಕೃತವಾಗಿ ಅತೌಆ ಕಾರ್ಡ್ ಮಾಲೀಕನ ಒಪ್ಪೊಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಹೊಣೆಯಾಗಿರುತ್ತಾರೆ.

ಬೆಂಗಳೂರಿನ ನಿವಾಸಿಯಾದ ವಂದನಾ ಹೆರಿಗೆ ರಜೆ ವೇಳೆ ಪತಿಯ ಬಳಿ ಕಾರ್ಡ್ ನೀಡಿ 25 ಸಾವಿರ ರೂ. ಡ್ರಾ ಮಾಡುವಂತೆ ಕೇಳುತ್ತಾರೆ, ಪತಿ ರಾಜೇಶ್ ಅದರಂತೆ ಪತಿ ರಾಜೇಶ್ ಕುಮಾರ್ ಸಮೀಪದ ಎಸ್ ಬಿಐ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್ ಹಾಕಿ ಹಣ ವಿತ್ ಡ್ರಾ ಮಾಡಿದ್ದು, ಈ ವೇಳೆ ಎಟಿಎಂ ಮಷಿನ್ ನಿಂದ ಹಣ ಬಾರದೇ ಕೇವಲ ಸ್ಲಿಪ್ ಮಾತ್ರ ಬಂದಿದೆ.
ಆದರೆ ಸ್ಲಿಪ್ ನಲ್ಲಿ 25 ಸಾವಿರ ಹಣ ವಿತ್ ಡ್ರಾ ಆಗಿರುವ ಕುರಿತು ಪ್ರಿಂಟ್ ಆಗಿದ್ದು, ಇದರಿಂದ ಗಾಬರಿಯಾದ ಪತಿ ರಾಜೇಶ್ ಎಸ್ ಬಿಐ ಬ್ಯಾಂಕ್ ಗೆ ದೂರು ನೀಡಿದ್ದಾರೆ.
ಮೂರು ದಿನಗಳ ಬಳಿಕ ಈ ದೂರಿನ ಬಗ್ಗೆ ವಿಚಾರಿಸಲಾಗಿ ಬ್ಯಾಂಕ್ ಅಧಿಕಾರಿಗಳು ದೂರಿನ ವಿಚಾರಣೆ ಸಂಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಗ್ರಾಹಕರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ನಮೂದಾಗಿದೆ. ಆದರೆ ವಂದನಾ ಅವರ ಖಾತೆಗೆ ಹಣ ಮಾತ್ರ ಜಮೆಯಾಗಿಲ್ಲ.
ಈ ವೇಳೆ ಸಮಾರು 3.5 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ ಎಸ್ ಬಿಐ ನಿಂದ ಹೇಳಿಕೆ ಪಡೆದಿದ್ದು,. ವಂದನಾ ಅವರ ಪತಿ ಎಟಿಎಂ ಕಾರ್ಡ್ ನಿಂದ್ ವಿತ್ ಡ್ರಾ ಮಾಡುವ ವೇಳೆ ಮಷಿನ್ ನಲ್ಲಿ 25 ಸಾವಿರ ರೂಗಳಿಗಿಂತಲೂ ಹೆಚ್ಚು ಹಣವಿತ್ತು.
ಇನ್ನು ವಂದನಾ ಅವರ ಕಾರ್ಡ್ ಅನ್ನು ಅವರ ಪತಿ ಬಳಕೆ ಮಾಡುವಂತಿಲ್ಲ. ಇದು ಎಟಿಎಂ ಪಿನ್ ನಿಯಮ ಮತ್ತು ಬ್ಯಾಂಕ್ ಗ್ರಾಹಕ ಭದ್ರತಾ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ವಂದನಾ ಅವರು ಚೆಕ್ ನೀಡಿ ಹಣ ವಿತ್ ಡ್ರಾ ಮಾಡಲು ತಿಳಿಸಬಹುದಿತ್ತು, ಅಥವಾ ಒಂದು ಪತ್ರ ಬರೆದುಕೊಡಬೇಕಿತ್ತು ಎರಡನ್ನೂ ಅವರು ಮಾಡಿಲ್ಲ ಹಾಗಾಗು ಎಸ್ಬಿಐನ ವಾದ ಸರಿಯಾಗಿದೆ ಎಂದು ಹೇಳಿ ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications