ಪ್ರಯಾಣಿಕನ ಬ್ಯಾಗ್ ವಾಪಸ್ ಕೊಡದ ಜೆಟ್ ಏರ್ ವೇಸ್ ಗೆ ದಂಡ
ಬೆಂಗಳೂರು, ಏಪ್ರಿಲ್ 17: ವಿಮಾನದಿಂದ ಇಳಿದಾಗ ತಮ್ಮ ಲಗೇಜ್ ಬ್ಯಾಗ್ ಕಳೆದುಕೊಂಡ ಗ್ರಾಹಕರೊಬ್ಬರಿಗೆ ಜೆಟ್ ಏರ್ವೇಸ್ ಇಂಡಿಯಾ ಕಂಪನಿ 26,415 ರೂ. ಮೊತ್ತ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಟಿ.ಶೋಭಾದೇವಿ, ಸದಸ್ಯರಾದ ಬಾಲಕೃಷ್ಣ ವಿ ಮಸಳಿ ಹಾಗೂ ವಿ.ಅನುರಾಧಾ ಈ ಕುರಿತಂತೆ ಆದೇಶಿಸಿದ್ದಾರೆ.
ಪ್ರಕರಣವೇನು?: ನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆರ್.ಶಂಕರನಾರಾಯಣನ್ ಎಂಬುವರು 2016ರ ಜುಲೈ 7ರಂದು ತಮ್ಮ ಬಡ್ತಿ ಸಂದರ್ಶನ ಎದುರಿಸಲು ಜೆಟ್ ಏರ್ವೇಸ್ ವಿಮಾನದಲ್ಲಿ ಬೆಂಗಳೂರಿನಿಂದ ಜುಲೈ 6 ರಂದು ಮುಂಬೈಗೆ ತೆರಳಿದ್ದರು.

ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರ ಲಗೇಜ್ ಬ್ಯಾಗ್ ಅದಲು ಬದಲಾಗಿತ್ತು. ಇದನ್ನು ಜೆಟ್ ವಿಮಾನ ಅಧಿಕಾರಿಗಳ ಗಮನಕ್ಕೆ ತಂದರು. ನಂತರ ಹೊಸಬಟ್ಟೆ, ಶೂ ಖರೀದಿಸಿ, ಸಂದರ್ಶನ ಎದುರಿಸಿದ್ದರು. ಮುಂಗಡ ಬುಕ್ಕಿಂಗ್ ನಂತೆ ಅದೇ ವಿಮಾನದಲ್ಲಿ 8ರಂದು ವಾಪಸು ಬೆಂಗಳೂರಿಗೆ ಬಂದಿದ್ದರು.
ಬ್ಯಾಗ್ ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಒಂದು ವಾರದ ನಂತರ, ನಿಮ್ಮ ಬ್ಯಾಗ್ ಸಿಕ್ಕಿಲ್ಲ ಎಂದು ಕೈಚೆಲ್ಲಿದ್ದರು. ಶಂಕರನಾರಾಯಣನ್ ವಿಮಾನ ಅಧಿಕಾರಿಗಳ ಜೊತೆ ಇ ಮೇಲ್ ಮುಖಾಂತರ ಪರಿಹಾರ ಕೇಳಿದ್ದರು. ಅಧಿಕಾರಿಗಳು 3,150ರೂ. ನೀಡುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೊಪ್ಪದ ಶಂಕರನಾರಾಯಣನ್ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ಉತ್ತಮ ಸೇವೆ ಗ್ರಾಹಕನ ಹಕ್ಕು: ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ 2018ರ ಏಪ್ರಿಲ್ 6ರಂದು ಆದೇಶ ನೀಡಿದೆ. ಗ್ರಾಹಕರ ರಕ್ಷಣಾ ಕಾಯ್ದೆ-1986ರ ಅನುಸಾರ ಪ್ರತಿಯೊಬ್ಬ ಗ್ರಾಹಕ ಉತ್ತಮ ಸೇವೆ ಪಡೆಯುವುದು ಅವನ ಹಕ್ಕು. ಈ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್ 2013ರಂದು ಎನ್ಸಿಡಿಆರ್ ಸಿ-346ರ ಪ್ರಕರಣದಲ್ಲಿ ಸ್ಪಷ್ಟವಾಗಿ ತೀರ್ಪು ನೀಡಿದೆ ಎಂದು ತಿಳಿಸಲಾಗಿದೆ.
ವಿಮಾನ ಕಂಪನಿ ಲೋಪ ಎಸಗಿದೆ. ಶಂಕರನಾರಾಯಣನ್ ಮಾನಸಿಕ ಕಿರುಕುಳ, ಒತ್ತಡ ಎದುರಿಸಿದ್ದಾರೆ ಎಂಬುದು ವೇದ್ಯವಾಗುತ್ತದೆ. ಅವರು ಕಳೆದುಕೊಂಡಿರುವ ವಸ್ತುಗಳ ಮೌಲ್ಯ ಭರಿಸಿಕೊಡಬೇಕು ಎಂದು ಆದೇಶಿಸಲಾಗಿದೆ. ಹೊಸ ಬಟ್ಟೆ, ಶೂ ಖರೀದಿಗೆ ವ್ಯಯಿಸಿದ 16,415 ರೂ. ಮತ್ತು ವ್ಯಾಜ್ಯದ ಖರ್ಚು ರೂಪದಲ್ಲಿ 10 ಸಾವಿರವನ್ನು ದೂರುದಾರರಿಗೆ ಮೂವತ್ತು ದಿನದಲ್ಲಿ ನೀಡಬೇಕು ಎಂದು ವಿವರಿಸಲಾಗಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications