ಸಿದ್ದರಾಮಯ್ಯ ಸಹ ಆಪರೇಷನ್ ಕಾಂಗ್ರೆಸ್ನಿಂದ ಹುಟ್ಟಿದ ಕೂಸು: ಬಿಎಸ್ವೈ
ಬೆಂಗಳೂರು, ಜನವರಿ 18: ಸಿದ್ದರಾಮಯ್ಯ ಸಹ ಆಪರೇಷನ್ ಕಾಂಗ್ರೆಸ್ಗೆ ಮೂಲಕವೇ ಕಾಂಗ್ರೆಸ್ ಪಕ್ಷ ಸೇರಿದವರು ಎಂಬುದನ್ನು ಅವರು ಮರೆಯಬಾರದು ಎಂದು ಬಿಎಸ್.ಯಡಿಯೂರಪ್ಪ ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, 4 ಶಾಸಕರು ಗೈರು
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಅದರ ಸೃಷ್ಠಿಕರ್ತ ತಾನೇ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಭ್ರಷ್ಟಾಚಾರದ ಪಿತಾಮಹ ಬಿಎಸ್ವೈಗಿಂತ ಸಿದ್ದರಾಮಯ್ಯ ಮೇಲು: ಕಾಂಗ್ರೆಸ್
ಶಾಸಕರಿಗೆ ಆಮಿಷ ಒಡ್ಡಿ ಪಕ್ಷಕ್ಕೆ ಎಳೆದುಕೊಳ್ಳುವ ಸಂಪ್ರದಾಯ ಹುಟ್ಟುಹಾಕಿದ್ದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪ. ಪಕ್ಷಾಂತರಕ್ಕೆ ಹೆಸರಾಗಿದ್ದ ಗಯಾ ರಾಮ್ ಘಟನೆಯನ್ನು ಮಾಧ್ಯಮಗಳ ಮುಂದೆ ಹೇಳಿದರು.
ಕಾಂಗ್ರೆಸ್ ಪಕ್ಷವು ಅತೃಪ್ತ ಶಾಸಕರನ್ನು ಕಟ್ಟಿಹಾಕಿ ಶಾಸಕಾಂಗ ಸಭೆ ನಡೆಸುತ್ತಿದೆ. 3:30 ಕ್ಕೆ ಆರಂಭವಾಗಬೇಕಾಗಿದ್ದ ಸಭೆ ಇಷ್ಟು ತಡವಾಗಿ ಆರಂಭವಾಗಲು ಅದೇ ಕಾರಣ. ಬರದವರನ್ನು ಸಹ ಹೆದರಿಸಿ ಸಭೆಗೆ ಕರೆತರಲಾಗುತ್ತಿದೆ ಎಂದು ಅವರು ದೂರಿದರು.