ಐಟಿ ಕಾಯ್ದೆಯಲ್ಲಿ ಗೌಪ್ಯತೆಯ ಹಕ್ಕಿಗೆ ಬೆಲೆ ಇಲ್ಲವೇ? : ರೋಯ್ ಆತ್ಮಹತ್ಯೆ ಎಬ್ಬಿಸಿದ ಸಾಂವಿಧಾನಿಕ ಪ್ರಶ್ನೆ
ಬೆಂಗಳೂರು: ನಗರದ ಪ್ರತಿಷ್ಠಿತ ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿಜೆ ರೋಯ್ ಅವರು ಆದಾಯ ತೆರಿಗೆ (ಐಟಿ) ಇಲಾಖೆಯ ಶೋಧನಾ ಕಾರ್ಯಾಚರಣೆಯ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿರುವುದು ದೇಶವ್ಯಾಪಿ ಅಹಿತಕರ ಚರ್ಚೆಯೊಂದಕ್ಕೆ ನಾಂದಿ ಹಾಡಿದೆ. ತೆರಿಗೆ ವಂಚನೆಯ ಆರೋಪ ಏನೇ ಇರಲಿ, ಅಧಿಕಾರಿಯೊಬ್ಬರು ಮನೆಯಲ್ಲಿ ಶೋಧ ನಡೆಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಳ್ಳುವುದು ವ್ಯವಸ್ಥೆಯ ಅತಿರೇಕವನ್ನು ಪ್ರಶ್ನಿಸುವಂತೆ ಮಾಡಿದೆ. ಈ ಘಟನೆಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬರುವ 'ಬದುಕುವ ಹಕ್ಕು' ಮತ್ತು 'ಗೌಪ್ಯತೆಯ ಹಕ್ಕು'ಗಳ ಉಲ್ಲಂಘನೆಯಾಗುತ್ತಿದೆಯೇ ಎಂಬ ಗಂಭೀರ ಸಾಂವಿಧಾನಿಕ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
ತೆರಿಗೆ ವಂಚನೆಯನ್ನು ತಡೆಯಲು ಕಠಿಣ ಕ್ರಮಗಳು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132ರ ಅಡಿಯಲ್ಲಿ ಐಟಿ ಇಲಾಖೆಗೆ ನೀಡಲಾಗಿರುವ ಅಧಿಕಾರವು ಅಸಮತೋಲನದಿಂದ ಕೂಡಿದೆ. ಸಾಮಾನ್ಯವಾಗಿ ಇಂತಹ ದಾಳಿಗಳಿಗೆ ನ್ಯಾಯಾಲಯದ ಅನುಮತಿ ಅಥವಾ ವಾರಂಟ್ ಅಗತ್ಯವಿರುವುದಿಲ್ಲ. ಕೇವಲ ಹಿರಿಯ ಅಧಿಕಾರಿಗಳ "ನಂಬಿಕೆಗೆ ಕಾರಣ" (Reason to believe) ಎಂಬ ಆಧಾರದ ಮೇಲೆ, ಅಧಿಕಾರಿಗಳು ಯಾರ ಮನೆಗಾದರೂ ನುಗ್ಗಿ, ಖಾಸಗಿ ದಾಖಲೆಗಳನ್ನು ಪರಿಶೀಲಿಸುವ ಮತ್ತು ಅನಿರ್ದಿಷ್ಟಾವಧಿಯವರೆಗೆ ಅಲ್ಲಿಯೇ ಬೀಡುಬಿಡುವ ಅಧಿಕಾರವನ್ನು ಹೊಂದಿದ್ದಾರೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

48 ಗಂಟೆಗಳ ನಿಯಮ ಎಂಬ ಭ್ರಮೆ
ಐಟಿ ದಾಳಿಗಳು ಗರಿಷ್ಠ 48 ಗಂಟೆಗಳಲ್ಲಿ ಮುಗಿಯುತ್ತವೆ ಎಂಬುದು ಸಾರ್ವಜನಿಕರಲ್ಲಿರುವ ಒಂದು ತಪ್ಪು ಕಲ್ಪನೆ. ವಾಸ್ತವದಲ್ಲಿ, ಆದಾಯ ತೆರಿಗೆ ಕಾಯ್ದೆಯಲ್ಲಾಗಲಿ ಅಥವಾ ಇಲಾಖೆಯ ನಿಯಮಗಳಲ್ಲಾಗಲಿ ದಾಳಿಗೆ ಇಷ್ಟೇ ಸಮಯದ ಮಿತಿ ಇರಬೇಕೆಂಬ ಉಲ್ಲೇಖವಿಲ್ಲ. ಅಧಿಕಾರಿಗಳು ತಮಗೆ ಬೇಕಾದಷ್ಟು ಸಮಯ ಶೋಧನೆ ನಡೆಸಬಹುದು. ಅನೇಕ ಬಾರಿ ದಾಳಿಗಳು ದಿನಗಟ್ಟಲೆ ಮುಂದುವರಿಯುತ್ತವೆ. ತಕ್ಷಣಕ್ಕೆ ಜಪ್ತಿ ಮಾಡಲು ಸಾಧ್ಯವಾಗದಿದ್ದರೆ, 'ನಿಷೇಧಾಜ್ಞೆ'ಗಳನ್ನು ಹೊರಡಿಸಿ ಕೊಠಡಿಗಳು, ಕಪಾಟುಗಳು ಮತ್ತು ಲಾಕರ್ಗಳನ್ನು ಸೀಲ್ ಮಾಡಲಾಗುತ್ತದೆ. ಇದರಿಂದ ಸ್ವಂತ ಮನೆಯೇ ಒಂದು "ವಶಪಡಿಸಿಕೊಂಡ ವಲಯ"ವಾಗಿ (Occupied Zone) ಬದಲಾಗುತ್ತದೆ.
ಕುಟುಂಬ ಮತ್ತು ಮಹಿಳೆಯರ ಮೇಲಿನ ಪರಿಣಾಮ
ಐಟಿ ದಾಳಿಯ ಅತಿದೊಡ್ಡ ದುಷ್ಪರಿಣಾಮ ಬೀರುವುದು ಕುಟುಂಬದ ಸದಸ್ಯರ ಮೇಲೆ. ದಾಳಿ ನಡೆಯುವಾಗ ಮನೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಪರೋಕ್ಷವಾಗಿ ಗೃಹಬಂಧನದಲ್ಲಿ ಇರಬೇಕಾಗುತ್ತದೆ. ಅವರ ದಿನನಿತ್ಯದ ದಿನಚರಿ ಅಸ್ತವ್ಯಸ್ತಗೊಳ್ಳುತ್ತದೆ ಮತ್ತು ಗೌಪ್ಯತೆ ಸಂಪೂರ್ಣವಾಗಿ ನಾಶವಾಗುತ್ತದೆ. ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಪಾಸ್ವರ್ಡ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುವುದರಿಂದ ಇಂದಿನ ಡಿಜಿಟಲ್ ಯುಗದಲ್ಲಿ ವ್ಯಕ್ತಿಯೊಬ್ಬನ ಸಮಗ್ರ ಮಾಹಿತಿಯು ಅಸುರಕ್ಷಿತವಾಗುತ್ತದೆ. ಸುಪ್ರೀಂ ಕೋರ್ಟ್ ಹೇಳಿರುವಂತೆ, "ಗೌಪ್ಯತೆ" ಎಂಬುದು ಬದುಕುವ ಹಕ್ಕಿನ ಅವಿಭಾಜ್ಯ ಅಂಗ. ಆದರೆ ಅನಿರ್ದಿಷ್ಟಾವಧಿಯ ದಾಳಿಗಳು ಈ ಹಕ್ಕನ್ನು ದಮನ ಮಾಡುತ್ತಿವೆ.
ಇನ್ನೂ ವ್ಯಾಪಾರಸ್ಥರ ದೃಷ್ಟಿಕೋನದಲ್ಲಿ ನೋಡುವುದಾದರೆ, ಇಂತಹ ದೀರ್ಘಕಾಲದ ದಾಳಿಗಳು ಉದ್ಯಮವನ್ನೇ ಸ್ತಬ್ಧಗೊಳಿಸುತ್ತವೆ. ವ್ಯವಹಾರಕ್ಕೆ ಅಗತ್ಯವಿರುವ ದಾಖಲೆಗಳು, ಬ್ಯಾಂಕ್ ಖಾತೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಸೀಲ್ ಮಾಡುವುದರಿಂದ ಕಂಪನಿಯ ಕಾರ್ಯನಿರ್ವಹಣೆ ನಿಂತುಹೋಗುತ್ತದೆ. ದಾಳಿ ಮುಗಿದ ನಂತರವೂ ಸೀಲ್ ಆಗಿರುವ ಕೊಠಡಿಗಳು ಅಥವಾ ಫ್ರೀಜ್ ಆಗಿರುವ ಖಾತೆಗಳು ಉದ್ಯಮಿಗಳ ಪಾಲಿಗೆ ಉರುಳಾಗುತ್ತವೆ. ಸುಲಲಿತ ವ್ಯವಹಾರ ಎಂದು ಹೇಳುವ ಸರ್ಕಾರ, ಇಂತಹ ಹಳೆಯ ಮತ್ತು ಕಠೋರ ಕಾನೂನುಗಳನ್ನು ಮರುಪರಿಶೀಲಿಸಬೇಕಿದೆ.
ಸುಧಾರಣೆಯ ಅಗತ್ಯವೇನು?
ಸಿಜೆ ರೋಯ್ ಅವರ ಸಾವು ವ್ಯವಸ್ಥೆಗೆ ಒಂದು ಎಚ್ಚರಿಕೆಯಾಗಬೇಕು. ತೆರಿಗೆ ವಂಚಕರನ್ನು ರಕ್ಷಿಸುವುದು ಇದರ ಉದ್ದೇಶವಲ್ಲ, ಬದಲಿಗೆ ತನಿಖಾ ಪ್ರಕ್ರಿಯೆಯು ಮಾನವೀಯವಾಗಿರಬೇಕು ಎಂಬುದು ಮುಖ್ಯ. ಕಾನೂನಿನಲ್ಲಿ ಸ್ಪಷ್ಟವಾದ ಬದಲಾವಣೆ ತರುವ ಮೂಲಕ, ಐಟಿ ಶೋಧನೆಗೆ ನಿಗದಿತ ಸಮಯದ ಮಿತಿಯನ್ನು ವಿಧಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹಿರಿಯ ಅಧಿಕಾರಿಗಳ ಲಿಖಿತ ಅನುಮತಿಯೊಂದಿಗೆ ಸಮಯ ವಿಸ್ತರಿಸಲು ಅವಕಾಶ ನೀಡಬೇಕು. ಅಧಿಕಾರವು ಕರ್ತವ್ಯ ಪ್ರಜ್ಞೆಯಿಂದ ಕೂಡಿರಬೇಕೇ ಹೊರತು, ದಬ್ಬಾಳಿಕೆಯ ರೂಪ ಪಡೆಯಬಾರದು ಎಂಬುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳ ನಡುವೆ ಸಮತೋಲನವಿದ್ದಾಗ ಮಾತ್ರ ಇಂತಹ ದುರಂತಗಳನ್ನು ತಡೆಯಲು ಸಾಧ್ಯ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications