ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ
Recommended Video
ಬೆಂಗಳೂರು, ಜು.10:ಕಳೆದ ಆರು ತಿಂಗಳಿನಿಂದ ವೇತನ ಸಿಗದೇ ಬೆಂಗಳೂರಿನ ವೈಯಾಲಿ ಕಾವಲ್ ನಿವಾಸಿ ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಗೆ ಶರಣಾದ ಬೆನ್ನಲ್ಲೇ ಬೆಂಗಳೂರಿನ ಅನೇಕ ಪೌರ ಕಾರ್ಮಿಕರಿಗೆ ನಾಲ್ಕಾರು ತಿಂಗಳಿನಿಂದ ಸಂಬಳ ಆಗಿಲ್ಲ ಎನ್ನುವ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ವೇ ಆರಂಭಗೊಂಡಿದೆ.
ಪ್ರಜ್ವಲ್ ಮಣಿಪಾಲ್ ಎಂಬುವವರು ಇಂದಿರಾನಗರದ ಪೌರ ಕಾರ್ಮಿಕ ರಾದ ಲಕ್ಷ್ಮಿದೇವಿ, ಉಮಾ, ಶೋಭಾ, ಕೊಂಡಮ್ಮ ಎಂಬ ಪೌರ ಕಾರ್ಮಿಕರ ನೋವಿನ ಕತೆಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅನೇಕ ಪ್ರಜ್ಞಾವಂತ ನಾಗರಿಕರು ಪೌರ ಕಾರ್ಮಿಕರ ಸಮಸ್ಯೆಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ.
Lakshmi Devi. Uma, Shobha, Kondamma clean the streets in Indira Nagar, Bengaluru. They have not been paid salaries for six months. They've pawned off their jewellery, sold their utensils just so that they can continue paying rent. #PayPourakarmikas pic.twitter.com/5fn4bUyjB2
— Prajwal (@prajwalmanipal) July 9, 2018
ಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿ
ಇಂದಿರಾನಗರದ ಪೌರ ಕಾರ್ಮಿಕರಾದ ಲಕ್ಷ್ಮಿದೇವಿ, ಉಮಾ, ಶೋಭಾ, ಕೊಂಡಮ್ಮ ಕಳೆದ ಆರು ತಿಂಗಳಿನಿಂದ ವೇತನ ಇಲ್ಲದೇ ತಮ್ಮಮನೆ ಬಾಡಿಗೆ ಹಣ ಕಟ್ಟಲು ಇದ್ದಬಿದ್ದ ಒಡವೆ ಒತ್ತೆ ಇಟ್ಟು, ಕೆಲವು ಮನೆ ಸಾಮಾನಗಳನ್ನು ಮಾರಾಟ ಮಾಡಿ, ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಇದು ಕೇವಲ ಇಂದಿರಾನಗರದ ಪೌರ ಕಾರ್ಮಿಕರ ಬವಣೆ ಅಲ್ಲ, ಕೋರಮಂಗಲ, ಬಾಣಸವಾಡಿ, ಮಲ್ಲೇಶ್ವರ ಹೀಗೆ ನಗರದ ಅನೇಕ ವಾರ್ಡ್ ಗಳಲ್ಲಿ ಪೌರ ಕಾರ್ಮಿಕರು ಸಂಬಳ ಇಲ್ಲದೇ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕೆಂದು ಅನೇಕ ನಾಗರಿಕರು ಟ್ವಿಟರ್ ಖಾತೆಯಲ್ಲಿ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.