ಶಾಲೆಗಳು ಪುನರಾರಂಭಗೊಳ್ಳುವ ಮುನ್ನವೇ ಬೆಂಗಳೂರಿನಲ್ಲಿ ಮಕ್ಕಳಿಗೆ ಜ್ವರ
ಬೆಂಗಳೂರು ಮೇ 26: ಶಾಲೆಗಳು ಪುನರಾರಂಭಗೊಳ್ಳುವ ಮುನ್ನವೇ ಬೆಂಗಳೂರಿನಲ್ಲಿ ಹೆಚ್ಚು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದಾಗಿ ಪೋಷಕರು ಇನ್ಫ್ಲುಯೆನ್ಸ ಲಸಿಕೆ ಬಗ್ಗೆ ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ.
ವೈದ್ಯರ ಪ್ರಕಾರ, ಪ್ರಚಲಿತದಲ್ಲಿರುವ ವೈರಸ್ನ ಹೊಸ ತಳಿಗಳು ದುರ್ಬಲ ಮಕ್ಕಳ ದೇಹಕ್ಕೆ ಸೇರಿ ಹೆಚ್ಚು ಬಾದಿಸುತ್ತವೆ. ಇದರಿಂದ ಮಕ್ಕಳನ್ನು ದೂರವಿಡಲು ಫ್ಲೂ ಲಸಿಕೆ ಅನ್ನು ಒಂದು ತಿಂಗಳ ಅಂತರದಲ್ಲಿ (ಕನಿಷ್ಠ 6 ತಿಂಗಳ ವಯಸ್ಸಿನ ಮಕ್ಕಳು) ಎರಡು ಬಾರಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದರು. ಅದರ ನಂತರ ಇದು ವರ್ಷಕ್ಕೆ ಒಂದು ಡೋಸ್ ಆಗಿದೆ.

ಕಳೆದ ವರ್ಷ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ಎಲೆಕ್ಟ್ರಾನಿಕ್ಸ್ ಸಿಟಿಯ ನೀಲಿಮಾ ವಿಜಯ ಭಾಸ್ಕರ್ ಅವರು ತಮ್ಮ ಎರಡು ವರ್ಷದ ಮಗನಿಗೆ ಲಸಿಕೆ ಹಾಕಿದ್ದಾರೆ. "ನಾನು ಕೆಲಸದಲ್ಲಿರುತ್ತೇನೆ ಮತ್ತು ಜೂನ್ನಿಂದ ನನ್ನ ಮಗ ಇತರ ಮಕ್ಕಳೊಂದಿಗೆ ಡೇಕೇರ್ನಲ್ಲಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ನಾವು ಅವನಿಗೆ ಫ್ಲೂ ಶಾಟ್ ಅನ್ನು ಪಡೆಯಲು ಬಯಸಿದ್ದೇವೆ. ನಮ್ಮ ಕಟ್ಟಡದಲ್ಲಿ ಬಹಳಷ್ಟು ಪೋಷಕರು ಅದನ್ನೇ ಆರಿಸಿಕೊಳ್ಳುತ್ತಿದ್ದಾರೆ, ಏಕೆಂದರೆ ಮಕ್ಕಳು ಚಳಿಯಿಂದ ಹೆಚ್ಚು ಜ್ವರ ಸೇರಿದಂತೆ ಸಾಂಕ್ರಾಮಿ ರೋಗಕ್ಕೆ ಒಳಗಾಗುವುದನ್ನ ನಾವು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು.
ಈ ವರ್ಷ ಶಾಲೆ ಪ್ರಾರಂಭವಾಗುವ ಮೊದಲು ಪ್ರತಿ ವಾರ ಸುಮಾರು 20 ಪೋಷಕರು ಜ್ವರ ಸೇರಿದಂತೆ ಕೆಮ್ಮು ಮತ್ತು ಶೀತ ಇತರ ರೋಗ ಲಕ್ಷಣಗಳಿಂದ ಬರುವುದನ್ನು ಕಂಡ ಆಸ್ಟರ್ ಸಿಎಂಐನ ಶಿಶುವೈದ್ಯ-ನಿಯೋನಾಟಾಲಜಿಸ್ಟ್ ಡಾ ಪರಿಮಳಾ ತಿರುಮಲೇಶ್, ಈ ಸಂಖ್ಯೆ ಕಳೆದ ವರ್ಷಕ್ಕಿಂತ ದ್ವಿಗುಣವಾಗಿದೆ ಎಂದು ಹೇಳಿದರು.

"ಕಳೆದ ವರ್ಷದಲ್ಲಿ ಕೆಮ್ಮು ಮತ್ತು ಶೀತದ ತೀವ್ರತೆ ಹೆಚ್ಚಿತ್ತು. ಎರಡು ವರ್ಷಗಳ ಹಿಂದೆ ನಾವು ತಮ್ಮ ಮಕ್ಕಳಿಗೆ ಫ್ಲೂ ಶಾಟ್ಗಳ ಬಗ್ಗೆ ಪೋಷಕರಿಗೆ ಹೇಳಬೇಕಾಗಿತ್ತು, ಈ ವರ್ಷ ಅವರೇ ಪ್ರಶ್ನೆಗಳೊಂದಿಗೆ ಬರುತ್ತಿದ್ದಾರೆ. ಫ್ಲೂ ಶಾಟ್ ನಿಮಗೆ ಜ್ವರ ಬರುವುದಿಲ್ಲ ಎಂದು ಅರ್ಥವಲ್ಲವಾದರೂ, ಕೋವಿಡ್ಗೆ ಲಸಿಕೆ ಕೆಲಸ ಮಾಡುವಂತೆಯೇ ಇದು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.
ಈ ಸಮಯದಲ್ಲಿ ಪೋಷಕರು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತಿಸಾರ, ಮಾನ್ಸೂನ್ನಲ್ಲಿ ಡೆಂಗ್ಯೂ ಮತ್ತು ಚಳಿಗಾಲದಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ನೋಡುತ್ತಾರೆ. ಕಳೆದ ವರ್ಷ ಜ್ವರ ಪ್ರಕರಣಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿ ಮತ್ತು ಮಾನ್ಸೂನ್ ವೇಳೆಯೂ ಮುಂದುವರೆಯಿತು. ಇದು ಕೋವಿಡ್ ನಂತರದ ವಿದ್ಯಮಾನವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಮಕ್ಕಳನ್ನು ಬಿಟ್ಟು ದುರ್ಬಲವಿರುವ ಮಕ್ಕಳನ್ನು ಹೆಚ್ಚು ಬಾದಿಸಿತು ಎಂದು ವೈದ್ಯರು ಹೇಳಿದರು.

ಸಾಗರ್ ಹಾಸ್ಪಿಟಲ್ಸ್ನ ಮಕ್ಕಳ ತಜ್ಞರ ಸಲಹೆಗಾರ ಡಾ.ರಘುನಾಥ್ ಸಿಎನ್ ಅವರು ಮಾತನಾಡಿ, 'ವಾರಕ್ಕೆ 15 ರೋಗಿಗಳು ಫ್ಲೂ ಶಾಟ್ಗಳ ಬಗ್ಗೆ ಕೇಳಿಕೊಂಡು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ' ಎಂದು ಹೇಳಿದರು. "ಕಳೆದ ವರ್ಷ ಬಹುತೇಕ ಪ್ರತಿ ತಿಂಗಳು ಮಳೆಯಾಗಿರುವುದರಿಂದ, ಡೆಂಗ್ಯೂ ಜ್ವರದಿಂದ ವೈರಲ್ ಸೋಂಕಿನವರೆಗೆ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಹೀಗಾಗಿ ಎರಡು ಮತ್ತು 10 ವರ್ಷದೊಳಗಿನ ಮಕ್ಕಳ ಪೋಷಕರಿಂದ ಈ ಬಗ್ಗೆ ಹೆಚ್ಚು ವಿಚಾರಣೆಗಳು ಹೆಚ್ಚಾಗಿ ಬರುತ್ತಿವೆ ಎಂದು ವೈದ್ಯರು ಹೇಳಿದರು.
ಇಲೆಕ್ಟ್ರಾನಿಕ್ಸ್ ಸಿಟಿಯ ಮದರ್ಹುಡ್ ಹಾಸ್ಪಿಟಲ್ಸ್ನ ಸಲಹೆಗಾರ ಮಕ್ಕಳ ತಜ್ಞ ಡಾ.ಕೃಷ್ಣ ಪ್ರಸಾದ್ ಮಾತನಾಡಿ, ಪೋಷಕರು ಶಾಲೆ ಪ್ರಾರಂಭವಾಗುವ ಮೊದಲು ಲಸಿಕೆ ವೇಳಾಪಟ್ಟಿಯನ್ನು ಪೂರ್ಣಗೊಳಿಸಲು ಬಯಸುತ್ತಾರೆ. ಹೀಗಾಗಿ ಅವರು ಪ್ರತಿದಿನ 5-6 ವಿಚಾರಣೆಗಳನ್ನು ಪೋಷಕರಿಂದ ಸ್ವೀಕರಿಸುತ್ತಿರುವುದಾಗಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಸ್ಪರ್ಶ್ ಆಸ್ಪತ್ರೆಯ ಸಲಹೆಗಾರ ನಿಯೋನಾಟಾಲಜಿಸ್ಟ್ ಡಾ.ಪರಾಸ್ ಕುಮಾರ್ ಜೆ ಮಾತನಾಡಿ, ಫ್ಲೂ ಶಾಟ್ಗಳ ಬಗ್ಗೆ ಪೋಷಕರಲ್ಲಿ ಸಾಮಾನ್ಯ ಜಾಗೃತಿಯು ಮೊದಲ ಬಾರಿಗೆ ಶಾಲಾ ಮಕ್ಕಳ ವಿಷಯದಲ್ಲಿ ಹೆಚ್ಚು ಕಂಡುಬರುತ್ತಿದೆ.
"ಕಳೆದ ವರ್ಷ, ಎರಡು ವರ್ಷಗಳ ಅಂತರದ ನಂತರ (ಸಾಂಕ್ರಾಮಿಕ ನಂತರ) ಶಾಲೆಗಳು ಪ್ರಾರಂಭವಾದಾಗ ನಾವು ಸಾಂಕ್ರಾಮಿಕ ಸೋಂಕುಗಳ ಹಠಾತ್ ಉಲ್ಬಣವನ್ನು ನೋಡಿದ್ದೇವೆ. ಈ ವರ್ಷ, ಪೋಷಕರು ಹೆಚ್ಚು ಜಾಗರೂಕರಾಗಿದ್ದಾರೆ. ಪ್ರತಿ ವಾರ, ನಾವು ಫ್ಲೂ ವ್ಯಾಕ್ಸಿನೇಷನ್ಗಳನ್ನು ಕೇಳುವ 5-6 ಪೋಷಕರನ್ನು ನೋಡುತ್ತಿದ್ದೇವೆ. ಹಿಂದಿನದಕ್ಕೆ ಹೋಲಿಸಿದರೆ ಕೋವಿಡ್ ನಂತರ ವಿಚಾರಣೆಗಳು ಹೆಚ್ಚಾಗಿವೆ" ಎಂದು ವೈದ್ಯರು ಹೇಳಿದರು.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications