ಏ.28ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
ಬೆಂಗಳೂರು, ಏಪ್ರಿಲ್ 21: ರಂಗನಿರಂತರ ಸಾಂಸ್ಕೃತಿಕ ಸಂಘವು ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏ.28ರಿಂದ ಮೇ 4ರವರೆಗೆ ಹಮ್ಮಿಕೊಂಡಿದೆ.
ಸಿಜಿಕೆ ಎಂದೇ ಖ್ಯಾತರಾಗಿರುವ ಸಿಜಿ ಕೃಷ್ಣಸ್ವಾಮಿ ಅವರು ಸ್ಥಾಪಿಸಿರುವ ರಂಗನಿರಂತರ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಂಡಿದೆ.ಏಪ್ರಿಲ್ 28ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.45ಕ್ಕೆ ದಿಶಾ ರಮೇಶ್ ಅವರಿಂದ ರಂಗಗೀತೆಗಳು ಮೂಡಿಬರಲಿದೆ.
ಚಿಂತಕ ಡಾ. ರಾಜೇಂದ್ರ ಜೆನ್ನಿಯವರು ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಡಿ.ಕೆ. ಚೌಟ ಅಧ್ಯಕ್ಷತೆವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪ್ರತಿ ದಿನ ಸಂಜೆ 7ಗಂಟೆಗೆ ರಂಗೋತ್ಸವ ಆರಂಭವಾಗಲಿದೆ. ಏ.29ರಂದು ಎ. ಮಂಗೈ ನಿರ್ದೇಶನದ, ಇಂಕ್ವಿಲಾಬ್ ರಚಿತ ಅವ್ವೈ ತಮಿಳು ನಾಟಕವನ್ನು ಮರಪ್ಪಚ್ಚ ತಂಡವು ಪ್ರದರ್ಶಿಸುತ್ತಿದೆ. ಏಪ್ರಿಲ್ 30ರಂದು ಫಜಾ ಜಲಾಲಿ ರಚಿಸಿ ನಿರ್ದೇಶಿಸಿರುವ ಶಿಖಂಡಿ ಇಂಗ್ಲಿಷ್ ನಾಟಕವನ್ನು ಫಾಟ್ಸ್ ದ ಆರ್ಟ್ಸ್ ತಂಡ ಪ್ರದರ್ಶಿಸಲಿದೆ.

ಮೇ.1ರಂದು ಚಂದ್ರಕೀರ್ತಿ ನಿರ್ದೇಶಿಸಿದ, ಬರ್ಟೋಲ್ಡ್ ಬ್ರೇಕ್ಟ್ ರಚಿತ, ಜಿ.ಎನ್. ರಂಗನಾಥ ರಾವ್ ಅನುವಾದಿಸಿರುವ ಕಕೇಷಿಯನ್ ಚಾಕ್ ಸರ್ಕಸ್ ಕನ್ನಡ ನಾಟಕವನ್ನು ಥಿಯೇಟರ್ ಆರ್ಟಿಸ್ಟ್ರೀ ಅವರು ಅಭಿನಯಿಸಲಿದ್ದಾರೆ. ಮೇ.2ರಂದು ಶ್ರೀಕಾಂತ್ ಭೀಡೆ ನಿರ್ದೇಶನದ ದಿ ಟ್ರಾನ್ಸ್ ಫರೆಂಟ್ ಟ್ರಾಪ್ ಮರಾಠಿ ನಾಟಕವನ್ನು ದ್ಯಾಸ್ ತಂಡ ಅಭಿನಯಿಸುತ್ತಿದೆ.
ಮೇ 3ರಂದು ಡಾ. ಇಂದುದಿಪ ಸಿನ್ಹ ರಚಿಸ, ನಿರ್ದೇಶಿಸಿರುವ ಕೋಡ್ ರೆಡ್ ಮಂಗಾಳಿ ನಾಟಕವನ್ನು ಪ್ರಾಜೆಕ್ಟ್ ಪ್ರಾಮೊಥಿಯೇಸ್ ಅಭಿನಯಿಸುತ್ತಿದೆ. ಮೇ 4 ರಂದು ಅನುರೂಪ್ ರಾಯ್ ರಚಿಸಿ, ನಿರ್ದೇಶಿಸಿರುವ ಮಹಾಭಾರತ ನಾಟಕ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಠ್ ಕಥಾ ಪೊಪೆಟ್ ಆರ್ಟ್ಸ್ ಟ್ರಸ್ಟ್ ಪ್ರದರ್ಶಿಸುತ್ತಿದೆ.
-
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ











Click it and Unblock the Notifications