ಏ.28ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
ಬೆಂಗಳೂರು, ಏಪ್ರಿಲ್ 21: ರಂಗನಿರಂತರ ಸಾಂಸ್ಕೃತಿಕ ಸಂಘವು ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏ.28ರಿಂದ ಮೇ 4ರವರೆಗೆ ಹಮ್ಮಿಕೊಂಡಿದೆ.
ಸಿಜಿಕೆ ಎಂದೇ ಖ್ಯಾತರಾಗಿರುವ ಸಿಜಿ ಕೃಷ್ಣಸ್ವಾಮಿ ಅವರು ಸ್ಥಾಪಿಸಿರುವ ರಂಗನಿರಂತರ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಂಡಿದೆ.ಏಪ್ರಿಲ್ 28ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.45ಕ್ಕೆ ದಿಶಾ ರಮೇಶ್ ಅವರಿಂದ ರಂಗಗೀತೆಗಳು ಮೂಡಿಬರಲಿದೆ.
ಚಿಂತಕ ಡಾ. ರಾಜೇಂದ್ರ ಜೆನ್ನಿಯವರು ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಡಿ.ಕೆ. ಚೌಟ ಅಧ್ಯಕ್ಷತೆವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪ್ರತಿ ದಿನ ಸಂಜೆ 7ಗಂಟೆಗೆ ರಂಗೋತ್ಸವ ಆರಂಭವಾಗಲಿದೆ. ಏ.29ರಂದು ಎ. ಮಂಗೈ ನಿರ್ದೇಶನದ, ಇಂಕ್ವಿಲಾಬ್ ರಚಿತ ಅವ್ವೈ ತಮಿಳು ನಾಟಕವನ್ನು ಮರಪ್ಪಚ್ಚ ತಂಡವು ಪ್ರದರ್ಶಿಸುತ್ತಿದೆ. ಏಪ್ರಿಲ್ 30ರಂದು ಫಜಾ ಜಲಾಲಿ ರಚಿಸಿ ನಿರ್ದೇಶಿಸಿರುವ ಶಿಖಂಡಿ ಇಂಗ್ಲಿಷ್ ನಾಟಕವನ್ನು ಫಾಟ್ಸ್ ದ ಆರ್ಟ್ಸ್ ತಂಡ ಪ್ರದರ್ಶಿಸಲಿದೆ.

ಮೇ.1ರಂದು ಚಂದ್ರಕೀರ್ತಿ ನಿರ್ದೇಶಿಸಿದ, ಬರ್ಟೋಲ್ಡ್ ಬ್ರೇಕ್ಟ್ ರಚಿತ, ಜಿ.ಎನ್. ರಂಗನಾಥ ರಾವ್ ಅನುವಾದಿಸಿರುವ ಕಕೇಷಿಯನ್ ಚಾಕ್ ಸರ್ಕಸ್ ಕನ್ನಡ ನಾಟಕವನ್ನು ಥಿಯೇಟರ್ ಆರ್ಟಿಸ್ಟ್ರೀ ಅವರು ಅಭಿನಯಿಸಲಿದ್ದಾರೆ. ಮೇ.2ರಂದು ಶ್ರೀಕಾಂತ್ ಭೀಡೆ ನಿರ್ದೇಶನದ ದಿ ಟ್ರಾನ್ಸ್ ಫರೆಂಟ್ ಟ್ರಾಪ್ ಮರಾಠಿ ನಾಟಕವನ್ನು ದ್ಯಾಸ್ ತಂಡ ಅಭಿನಯಿಸುತ್ತಿದೆ.
ಮೇ 3ರಂದು ಡಾ. ಇಂದುದಿಪ ಸಿನ್ಹ ರಚಿಸ, ನಿರ್ದೇಶಿಸಿರುವ ಕೋಡ್ ರೆಡ್ ಮಂಗಾಳಿ ನಾಟಕವನ್ನು ಪ್ರಾಜೆಕ್ಟ್ ಪ್ರಾಮೊಥಿಯೇಸ್ ಅಭಿನಯಿಸುತ್ತಿದೆ. ಮೇ 4 ರಂದು ಅನುರೂಪ್ ರಾಯ್ ರಚಿಸಿ, ನಿರ್ದೇಶಿಸಿರುವ ಮಹಾಭಾರತ ನಾಟಕ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಠ್ ಕಥಾ ಪೊಪೆಟ್ ಆರ್ಟ್ಸ್ ಟ್ರಸ್ಟ್ ಪ್ರದರ್ಶಿಸುತ್ತಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications