ಐಷಾರಾಮಿ ಕಾರಿನಲ್ಲಿ ಬಂದು ಹೈಟೆಕ್ ಕಳ್ಳತನ ಮಾಡುತ್ತಿದ್ದ ಜಂಗ್ಲಿ ಸೆರೆ
ಬೆಂಗಳೂರು, ಜೂನ್. 30: ಇವನನ್ನು ಶೋಕಿಲಾಲ ಅನ್ನಬೇಕೋ, ರಿಯಲ್ ರೋಮಿಯೋ ಅನ್ನಬೇಕು ಪೊಲೀಸರಿಗೆ ಗೊತ್ತಾಗುತ್ತಿಲ್ಲ. ಇಡೀ ಜೀವನವನ್ನೇ ಕಳ್ಳತನಕ್ಕೆ ಮುಡಿಪಾಗಿಟ್ಟಿದ್ದ. ಎಲ್ಲವೂ ಮಾಡಿದ್ದು ಆನು ಪ್ರೀತಿಸುತ್ತಿದ್ದ ಲವ್ವರ್ ಗಾಗಿ ಮಾತ್ರ ಅಷ್ಟೇ !
ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಐಷಾರಾಮಿ ಕಳ್ಳ ಬಸವರಾಜ್ ಅಲಿಯಾಸ್ ಜಗ್ಲಿಯ ರೋಚಕನ ಕಹಾನಿ. ಈತನೊಬ್ಬ ನಟೋರಿಯಸ್ ಕಳ್ಳ. ನಗರದಲ್ಲಿ ವಿಪರೀತ ಹಾವಳಿ ಇಟ್ಟಿದ್ದ. ಕಾರು ಎತ್ತಿಕೊಂಡು ಫೀಲ್ಡ್ ಗೆ ಇಳಿದಿರೆ ಒಂದಲ್ಲಾ ಒಂದು ಮನೆಯ ಲಾಕ್ ಮುರಿದು ದೋಚುತ್ತಿದ್ದ. ಸತತ ಎಂಟು ವರ್ಷದಿಂದ ಕಳ್ಳತನ ಮಾಡಿ ಐಶರಾಮಿ ಜೀವನ ಮಾಡುತ್ತಿದ್ದ ಕಳ್ಳ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತನಿಂದ 80 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನ ಹಾಗೂ ಎರಡೂ ಕಾರು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಮತ್ತು ತಂಡ ಜಂಗ್ಲಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.

ದಶಕದಿಂದ ಕಳ್ಳತನ: ವಿಪರೀತ ಶೋಕಿಲಾಲನಾಗಿದ್ದ 2013 ರಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಜಂಗ್ಲಿ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇಬ್ಬರೂ ಮದುವೆಯಾಗಿದ್ದರು. ನಿನ್ನನ್ನು ರಾಯಲ್ ಆಗಿ ಸಾಕ್ತೀನಿ ಎಂದಿದ್ದ ಜಂಗ್ಲಿ ತನ್ನ ಲವ್ವರ್ ಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮೈತುಂಬಾ ಸಾಲ ಮಾಡಿಕೊಂಡಿದ್ದ.
ಮಾಡಿದ್ದ ಸಾಲ ತೀರಿಸಲು ಮೊದಲು ಸಣ್ಣಪುಟ್ಟ ಕಳ್ಳತನಕ್ಕೆ ಇಳಿದಿದ್ದ. ಪೊಲೀಸರ ಕೈಗೆ ಸಿಗುತ್ತಿರಲಿಲ್ಲ. ಕೊನೆಗೆ ಇದನ್ನೇ ಮುಂದುವರೆಸಿದ. ಮೊದಲು ಕುಟುಂಬ ನಿರ್ವಹಣೆಗೆ ಕದಿಯುತ್ತಿದ್ದವನು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ಅನಂತರ ಅಂತರ ರಾಜ್ಯ ಕಳ್ಳನಾಗಿ ಪರಿವರ್ತನೆಯಾದ.

ಕಾರಿನಲ್ಲೇ ಬಂದು ಕಳ್ಳತನ :
ಬಿಡದಿ ,ವಿಜಯನಗರ ,ಕೊಡಿಗೇಹಳ್ಳಿ ಸೇರಿದಂತೆ ನಗರದ ಒಟ್ಟು 11 ಕಡೆ ಕಳ್ಳತನ ಮಾಡಿದ್ದ. ಈತನ ಕದಿಯುವ ಸಂದರ್ಭದಲ್ಲಿ ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಪೊಲೀಸರು ನೆಟ್ವರ್ಕ್ ಬೇಸ್ ಮೇಲೆ ಫಾಲೋ ಮಾಡಬಹುದೇನೋ ಎಂಬ ಆತಂಕದಲ್ಲಿ ಒಂದು ಕಡೆ ಕಳ್ಳತನ ಮಾಡಿದ್ರೆ ತಪ್ಪಿಸಿಕೊಳ್ಳೊದಕ್ಕೆ ಊರೆಲ್ಲಾ ತಿರುಗಿ ಪೊಲೀಸರಿಗೆ ದಾರಿ ತಪ್ಪಿಸುತ್ತಿದ್ದ. ಇನ್ನು ಐಶರಾಮಿ ಕಾರಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ. ಬೇರೆಯವರ ಹೆಸರಿನಲ್ಲಿ ಖರೀದಿಸಿ ಸಾಕ್ಷಿಯೇ ಸಿಗದ ರೀತಿಯಲ್ಲಿ ಮಾಡುತ್ತಿದ್ದ.
ಹೊಸ ಕಾರಿನಲ್ಲಿ ಬಂದು ಕದಿಯುತ್ತಿದ್ದರಿಂದ ಈತನ ಕಾರನ್ನು ಯಾರೂ ಮುಟ್ಟುತ್ತಿರಲಿಲ್ಲ. ಹೀಗೆ ಬೆಂಗಳೂರಿನಲ್ಲಿ ಅಪರಾಧ ಕೃತ್ಯ ಎಸಗಿ ಹೈದರಾಬಾದ್ ಗೆ ಪರಾರಿಯಾಗುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಹೆಬ್ಬಾಳದ ಬಳಿ ಚೇಸಿಂಗ್ ಮಾಡಿ ಬಂಧಿಸಿದ್ದಾರೆ.
Recommended Video
ಬಂಧಿತನಿಂದ ಎರಡು ಕಾರು ಮತ್ತು 80 ಕೆ.ಜಿ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈತ ಹೈದರಾಬಾದ್ ನಲ್ಲಿ ಇಟ್ಟಿರುವ ಕಾರುಗಳನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ. ಅಂತೂ ಒಂದು ದಶಕದಿಂದ ಕಳ್ಳತನ ಮಾಡಿದ್ದ ಜಂಗ್ಲಿ ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications