ಅಪಾರ್ಟ್ಮೆಂಟ್ ಬಳಿ ಬಿಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿದ ಊಬರ್ ಚಾಲಕ
ಬೆಂಗಳೂರು, ಮಾರ್ಚ್ 26: ಅಪಾರ್ಟ್ಮೆಂಟ್ ಹತ್ತಿರದವರೆಗೆ ಬಿಡಿ ಎಂದಿದ್ದಕ್ಕೆ ಊಬರ್ ಚಾಲಕನೊಬ್ಬ ಪ್ರಯಾಣಿಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಲ್ಲಿ ವರದಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಕುರಿತು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ವೈಟ್ ಫೀಲ್ಡ್ ನಿವಾಸಿಯಾಗಿರುವ ಸಿದ್ಧಾರ್ಥ್ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ತೊಡೆಯ ಮೇಲೆ ಬಂದೂ ಕೂಡು ಅಂದನೆ ಊಬರ್ ಡ್ರೈವರ್?
ಸಿದ್ಧಾರ್ಥ್ ಅವರ ಪತ್ನಿ ಆರೋಗ್ಯ ಸರಿ ಇಲ್ಲದ ಕಾರಣ ಅಪಾರ್ಟ್ಮೆಂಟ್ ಒಳಗೆ ಕಾರು ತರುವಂತೆ ಹೇಳಿದ್ದಕ್ಕೆ ಜಗಳ ಮಾಡಿದ್ದಷ್ಟೇ ಅಲ್ಲದೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ತಕ್ಷಣ ಕಾರಿನಿಂದ ಇಳಿದು ಅಪಾರ್ಟ್ಮೆಂಟ್ ಗೇಟ್ ಬಳಿ ಓಡಿ ಹೋಗಿದ್ದಾರೆ. ಸೆಕ್ಯುರಿಟಿ ಗಾರ್ಡ್ ಹೊರಗಡೆ ಬಂದ ಕಾರಣ ಚಾಲಕ ಅಲ್ಲಿಂದ ಓಡಿಹೋಗಿದ್ದಾಗಿ ಬರೆದುಕೊಂಡಿದ್ದಾರೆ.
ಊಬರ್ ಕ್ಯಾಬ್ನಲ್ಲಿ ಹೋಗುವುದೆಂದರೆ ಒಂದು ರೀತಿಯ ಭಯ, ಇದು ಎಷ್ಟು ಸೆನ್ಸಿಟೀವ್ ವಿಷಯ ಅವರಿಗೆ ದೂರು ನೀಡಿ ಎರಡು ತಾಸು ಕಳೆದ ಮೇಲೆ ಪ್ರತಿಕ್ರಿಯೆ ಬಂದಿದೆ. ಊಬರ್ ಸ್ಪೋಕ್ಸ್ ಪರ್ಸನ್ ಪ್ರತಿಕ್ರಿಯೆ ನೀಡಿದ್ದು ನಿಮಗೆ ಆಗಿರುವ ಈ ಅನುಭವಕ್ಕೆ ನಾವು ಕ್ಷಮೆ ಕೇಳುತ್ತೇವೆ ತಕ್ಷಣವೇ ಚಾಲಕನನ್ನು ಸೇವೆಯಿಂದ ವಜಾ ಂಆಡಿರುವುದಾಗಿ ತಿಳಿಸಿದ್ದಾರೆ.