ಬೋಗಿ- ಸಿಹಿಕಹಿ ಚಂದ್ರು ಭಿನ್ನ ಪಾತ್ರಗಳ ನಾಟಕ
ಬೆಂಗಳೂರು, ಆಗಸ್ಟ್ 27: ಪ್ರಕಸಂ ಅರ್ಪಿಸುವ "ಬೋಗಿ - ನಮ್ಮ ಜೀವನದ ಪಯಣ: ನಾಟಕ ಆಗಸ್ಟ್ 28ರ ಶುಕ್ರವಾರ ಕೆಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಟ ಸಿಹಿಕಹಿ ಚಂದ್ರು ಅವರು 6 ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ವಿಶಿಷ್ಟಪ್ರಯೋಗ ನೋಡಿ ಆನಂದಿಸಿ.
ಬೋಗಿ - ನಮ್ಮ ಜೀವನದ ಪಯಣ: ಕಲಾರಸಿಕರ ಮನಸ್ಸು ಹಾಗು ಮನಸ್ಸಿನ ಪದರಗಳ ಜೊತೆಗೆ ಕೆಲಕಾಲ ಸ್ಪಂದಿಸುವ ನಾಟಕ ಇದಾಗಿದ್ದು ಈ ಬಾರಿಯು ಹೊಸತನ ಹಾಗು ವಿಭಿನ್ನತೆಯನ್ನು ಹೊರಹೊಮ್ಮಿಸುವ ತವಕದಲ್ಲಿದ್ದಾರೆ ಪ್ರ.ಕ.ಸಂ ತಂಡದವರು. ಪ್ರಕಸಂ ನಿಂದ ಹೊರಬಂದಿರುವ ಈವರೆಗಿನ ನಾಟಕಗಳು ಮನೋರಂಜನೆಯ ಅಡಿಪಾಯದ ಮೇಲೆ ಹೊರಬಂದವಾದರು.
ಈ ಎಲ್ಲಾ ನಾಟಕಗಳಲ್ಲೂ ಹೊಸತನವನ್ನು ಹಾಗು ಹೊಸಬರನ್ನು ಕನ್ನಡ ರಂಗಭೂಮಿಗೆ ಪರಿಚಯಿಸುತ್ತ ಬಂದಿರುವುದು ಹೆಮ್ಮಯ ವಿಶಯ. ಬೋಗೀ ಕೂಡ ಈ ಪ್ರತೀತಿಯನ್ನು ಉಳಸಿಕೊಳ್ಳಲಿದ್ದು ರಂಗಾಸಕ್ತರ ಮನಸ್ಸನ್ನು ಮುಟ್ಟುವಲ್ಲಿ ಹಾಗು ತಟ್ಟುವಲ್ಲಿ ಯಶಸ್ವಿಯಾಗಲಿದೆ.

ಸಿಹಿ ಕಹಿ ಚಂದ್ರು: ರಂಗಭೂಮಿ ನನ್ನ ಮೊದಲನೇ ಪ್ರೀತಿ. ನಾನು ಯಾವಾಗಲೂ ನಾಟಕಗಳಲ್ಲಿ ಅಭಿನಯಿಸುವ ಆಸೆ ಉಳ್ಳವನು. ಒಂದೇ ನಾಟಕದಲ್ಲಿ 6 ಪಾತ್ರಗಳನ್ನು ಅಭಿನಯಿಸಬೇಕು ಎಂದು ಪಿ.ಡಿ (ಸತೀಶ್) ಹೇಳಿದಾಗ ನನ್ನ ಆಸಕ್ತಿ ಹಚ್ಚಾಯಿತು. ನನ್ನ ನಟನೆಯನ್ನು ನೋಡುವವರು ಆನಂದಿಸುವಷ್ಟೇ ನಾನು ಕೂಡ ಆನಂದಿಸುತ್ತೇನೆ ಎಂದು ಸಿಹಿ ಕಹಿ ಚಂದ್ರು ಅವರು ನುಡಿದರು.
ನಾಟಕದ ವಿಶೇಷತೆ: ನಾಟಕದಲ್ಲಿ 6 ವಿಶೇಷ ಪಾತ್ರಗಳಿದ್ದು ಈ 6 ಪಾತ್ರಗಳನ್ನು, ರಂಗಭೂಮಿಯ ಹಿರಿಯ ಹಾಗು ಅನುಭವೀ ನಟ ಸಿಹಿ ಕಹಿ ಚಂದ್ರು ಅವರು ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸ್ಟೇಜಿನ ಮೇಲೆ ಒಂದು ಟೈಮರ್ ಇರಿಸಲಾಗಿದ್ದು ನಡೆಯುವ ಎಲ್ಲಾ ದೃಶ್ಯಗಳು ನೇರ ಪ್ರಸಾರದಂತೆ ಮೂಡಿಬರುತ್ತದೆ. ಇದೊಂದು ನೈಜ ಅನುಭವ ನೀಡುವ ಹೊಸ ಪ್ರಯತ್ನ
ರಂಗಸಜ್ಜಿಕೆಗೆ ಸಾಕಷ್ಟು ಒತ್ತು ನೀಡಲಾಗಿದ್ದು ಇದರ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಿಜವಾದ ಬೋಗಿಯ ಅಳತೆಯನ್ನು ರಂಗದ ಮೇಲೆ ರೂಪಿಸುವ ತಂತ್ರ ಸಜ್ಜಾಗಿದೆ.

ಪಿ.ಡಿ.ಸತೀಶ್ ಚಂದ್ರ: ಸತೀಶ್ರವರು ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಬೇಕೆಂದು ಬಯಕೆಯಿಂದ ಪ್ರ.ಕ.ಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ.
ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ದೇಶಕರಾಗಿ ಯುವ ಹಾಗು ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಇವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾಂಡುರಂಗ ವಿಠ್ಠಲ ಹಾಸ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರದರ್ಶನ ಕಲಾ ಸಂಸ್ಥೆ: ಪ್ರಕಸಂ ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications