ಬಿಎಂಟಿಸಿ ವೋಲ್ವೋ ಪ್ರಯಾಣ ದರ ಹೆಚ್ಚಳ
ಬೆಂಗಳೂರು, ಅ.3 : ಬಿಎಂಟಿಸಿ ವೋಲ್ವೋ ಪ್ರಯಾಣ ಮತ್ತಷ್ಟು ದುಬಾರಿ ಆಗಲಿದೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ ವಜ್ರ ಹಾಗೂ ಎ.ಸಿ.ಸುವರ್ಣ ಬಸ್ ಸೇವೆಗಳ ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿದೆ. ನೂತನ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಬಿಎಂಟಿಸಿ ವಜ್ರ ಮತ್ತು ಸುವರ್ಣ ಎ.ಸಿ. ಬಸ್ ಸೇವೆಯ ದರ ಹೆಚ್ಚಳದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ನಾನಾ ಹಂತಗಳಲ್ಲಿ ಪ್ರಯಾಣ ದರವನ್ನು 5 ರೂ.ನಿಂದ 10 ರೂ.ವರೆಗೆ ಏರಿಕೆ ಮಾಡಲಾಗಿದೆ.

ವಜ್ರ ಬಸ್ ಸೇವೆಯ ಮೂರು ಹಂತಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಆದರೆ 15 ಹಂತಗಳ ಪ್ರಯಾಣ ದರದಲ್ಲಿ 5 ರೂ. ಏರಿಕೆ ಮಾಡಲಾಗಿದೆ. ಉಳಿದ ಏಳು ಹಂತಗಳಲ್ಲಿ 10 ರೂ. ಏರಿಸಲಾಗಿದೆ.
ಎ.ಸಿ. ಸುವರ್ಣ ಬಸ್ ಪ್ರಯಾಣ ದರದಲ್ಲಿ ಆಯ್ದ ಆರು ಹಂತಗಳಲ್ಲಿ ಪ್ರಯಾಣ ದರ ಏರಿಕೆ ಮಾಡಿಲ್ಲ. ಉಳಿದ ಪ್ರತಿ ಹಂತಕ್ಕೆ ತಲಾ 5 ರೂ. ಹೆಚ್ಚಳ ಮಾಡಲಾಗಿದೆ. ಹವಾನಿಯಂತ್ರಿತ ಬಸ್ಗಳ ದಿನದ ಪಾಸ್ ದರವನ್ನು 10 ರೂ. ಹೆಚ್ಚಿಸಲಾಗಿದೆ.
ಇಂಧನಗಳ ದರ ಹೆಚ್ಚಳ, ಶೇ.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮುಂತಾದ ಆರ್ಥಿಕ ಹೊರೆಯನ್ನು ತಪ್ಪಿಸಲು ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯ ಬಸ್ ಗಳ ಪ್ರಯಾಣ ಮತ್ತು ಪಾಸ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈಗಾಗಲೇ ವಜ್ರ ಪ್ರಯಾಣ ದರ ದುಬಾರಿ ಎಂಬ ಕಾರಣಕ್ಕೆ ಜನರು ಅವುಗಳಿಂದ ದೂರವುಳಿದಿದ್ದಾರೆ. ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಬಿಎಂಟಿಸಿ ಸಾಮಾನ್ಯ ಜನರು ಹವಾನಿಯಂತ್ರಿತ ಬಸ್ಗಳಲ್ಲಿ ಪ್ರಯಾಣಿಸದಂತೆ ಮಾಡುತ್ತಿದೆ.
ವೋಲ್ವೋ ದರ ಹೆಚ್ಚಳದ ವಿವರ
* 1,2 ಹಾಗೂ 16ನೇ ಹಂತದಲ್ಲಿ ದರ ಹೆಚ್ಚಳವಿಲ್ಲ
* 3 ರಿಂದ 23ನೇ ಹಂತದ ವರೆಗೂ 5 ರೂ. ಹೆಚ್ಚಳ ಮಾಡಲಾಗಿದೆ.
* ಹಂತ 8,11,14,17,20,24 ಹಾಗೂ 25ರವರೆಗೆ 10 ರೂ. ಏರಿಕೆ
ಎ.ಸಿ. ಸುವರ್ಣ ಬಸ್ ಪ್ರಯಾಣ ದರ
* ಹಂತ 1,2,3,4,6 ಹಾಗೂ 9ರಲ್ಲಿ ದರ ಹೆಚ್ಚಳವಿಲ್ಲ
* ಉಳಿದ ಹಂತಗಳಲ್ಲಿ ಪ್ರತಿ ಹಂತಕ್ಕೆ 5 ರೂ. ಹೆಚ್ಚಳ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications