ಬಿಎಂಟಿಸಿ ವೋಲ್ವೋ ಪ್ರಯಾಣ ದರ ಹೆಚ್ಚಳ
ಬೆಂಗಳೂರು, ಅ.3 : ಬಿಎಂಟಿಸಿ ವೋಲ್ವೋ ಪ್ರಯಾಣ ಮತ್ತಷ್ಟು ದುಬಾರಿ ಆಗಲಿದೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ ವಜ್ರ ಹಾಗೂ ಎ.ಸಿ.ಸುವರ್ಣ ಬಸ್ ಸೇವೆಗಳ ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿದೆ. ನೂತನ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಬಿಎಂಟಿಸಿ ವಜ್ರ ಮತ್ತು ಸುವರ್ಣ ಎ.ಸಿ. ಬಸ್ ಸೇವೆಯ ದರ ಹೆಚ್ಚಳದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ನಾನಾ ಹಂತಗಳಲ್ಲಿ ಪ್ರಯಾಣ ದರವನ್ನು 5 ರೂ.ನಿಂದ 10 ರೂ.ವರೆಗೆ ಏರಿಕೆ ಮಾಡಲಾಗಿದೆ.

ವಜ್ರ ಬಸ್ ಸೇವೆಯ ಮೂರು ಹಂತಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಆದರೆ 15 ಹಂತಗಳ ಪ್ರಯಾಣ ದರದಲ್ಲಿ 5 ರೂ. ಏರಿಕೆ ಮಾಡಲಾಗಿದೆ. ಉಳಿದ ಏಳು ಹಂತಗಳಲ್ಲಿ 10 ರೂ. ಏರಿಸಲಾಗಿದೆ.
ಎ.ಸಿ. ಸುವರ್ಣ ಬಸ್ ಪ್ರಯಾಣ ದರದಲ್ಲಿ ಆಯ್ದ ಆರು ಹಂತಗಳಲ್ಲಿ ಪ್ರಯಾಣ ದರ ಏರಿಕೆ ಮಾಡಿಲ್ಲ. ಉಳಿದ ಪ್ರತಿ ಹಂತಕ್ಕೆ ತಲಾ 5 ರೂ. ಹೆಚ್ಚಳ ಮಾಡಲಾಗಿದೆ. ಹವಾನಿಯಂತ್ರಿತ ಬಸ್ಗಳ ದಿನದ ಪಾಸ್ ದರವನ್ನು 10 ರೂ. ಹೆಚ್ಚಿಸಲಾಗಿದೆ.
ಇಂಧನಗಳ ದರ ಹೆಚ್ಚಳ, ಶೇ.5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮುಂತಾದ ಆರ್ಥಿಕ ಹೊರೆಯನ್ನು ತಪ್ಪಿಸಲು ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯ ಬಸ್ ಗಳ ಪ್ರಯಾಣ ಮತ್ತು ಪಾಸ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈಗಾಗಲೇ ವಜ್ರ ಪ್ರಯಾಣ ದರ ದುಬಾರಿ ಎಂಬ ಕಾರಣಕ್ಕೆ ಜನರು ಅವುಗಳಿಂದ ದೂರವುಳಿದಿದ್ದಾರೆ. ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಬಿಎಂಟಿಸಿ ಸಾಮಾನ್ಯ ಜನರು ಹವಾನಿಯಂತ್ರಿತ ಬಸ್ಗಳಲ್ಲಿ ಪ್ರಯಾಣಿಸದಂತೆ ಮಾಡುತ್ತಿದೆ.
ವೋಲ್ವೋ ದರ ಹೆಚ್ಚಳದ ವಿವರ
* 1,2 ಹಾಗೂ 16ನೇ ಹಂತದಲ್ಲಿ ದರ ಹೆಚ್ಚಳವಿಲ್ಲ
* 3 ರಿಂದ 23ನೇ ಹಂತದ ವರೆಗೂ 5 ರೂ. ಹೆಚ್ಚಳ ಮಾಡಲಾಗಿದೆ.
* ಹಂತ 8,11,14,17,20,24 ಹಾಗೂ 25ರವರೆಗೆ 10 ರೂ. ಏರಿಕೆ
ಎ.ಸಿ. ಸುವರ್ಣ ಬಸ್ ಪ್ರಯಾಣ ದರ
* ಹಂತ 1,2,3,4,6 ಹಾಗೂ 9ರಲ್ಲಿ ದರ ಹೆಚ್ಚಳವಿಲ್ಲ
* ಉಳಿದ ಹಂತಗಳಲ್ಲಿ ಪ್ರತಿ ಹಂತಕ್ಕೆ 5 ರೂ. ಹೆಚ್ಚಳ
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications