ನಮ್ಮ ಮೆಟ್ರೋ ಆಸ್ತಿ ತೆರಿಗೆ ಬದಲು 4 ರೀತಿ ಸೇವಾ ಶುಲ್ಕ ಕಟ್ಟಬೇಕು
ಬೆಂಗಳೂರು,ಫೆಬ್ರವರಿ15: ನಮ್ಮ ಮೆಟ್ರೋ ಆಸ್ತಿ ತೆರಿಗೆ ಬದಲು 4 ಮಾದರಿಯ ಸೇವಾ ಶುಲ್ಕವನ್ನು ಕಟ್ಟಬೇಕಾಗಿದೆ.
ಉನ್ನತ ಮಟ್ಟದ ಸಮಿತಿಯು ಶುಲ್ಕವನ್ನು ನಿಗದಿಪಡಿಸಿದೆ. ಬಿಬಿಎಂಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿದ ಮಾದರಿಯಲ್ಲಿಯೇ ನಮ್ಮ ಮೆಟ್ರೋನಿಲ್ದಾಣ, ಕಟ್ಟಡ ಸೇರಿದಂತೆ ಇನ್ನಿತರೆ ಆಸ್ತಿಗಳಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ಕಟ್ಟಬೇಕಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಬಿಬಿಎಂಪಿ ಆಸ್ತಿ ತೆರಿಗೆ ವಿನಾಯಿತಿ ನೀಡಿಸೇವಾ ಶುಲ್ಕ ನಿಗದಿ ಮಾಡಿದೆ.ಆದರೂ ಸರ್ಕಾರಿ ಇಲಾಖೆಗಳು ಪ್ರತಿವರ್ಷ ಸೇವಾ ಶುಲ್ಕವನ್ನು ಪಾವತಿ ಮಾಡದೇ ಬಾಕಿಉಳಿಸಿಕೊಂಡಿವೆ.
2020-21ನೇ ಸಾಲಿನಲ್ಲಿ ಸರ್ಕಾರಿ ಕಟ್ಟಡಗಳಿಂದ ಸುಮಾರು 100 ಕೋಟಿಗೂ ಅಧಿಕ ಮೊತ್ತದ ಸೇವಾ ಶುಲ್ಕ ವಸೂಲಿ ಮಾಡಬೇಕಿದೆ.

ಸರ್ಕಾರಿ ಕಟ್ಟಡ,ಮೆಟ್ರೋಗೂ ವಿಧಿಸುತ್ತಿರುವ ಶುಲ್ಕದಲ್ಲಿ ವ್ಯತ್ಯಾಸವಿದೆ
ಸರ್ಕಾರಿ ಕಟ್ಟಡಗಳಿಗೂ,ನಮ್ಮ ಮೆಟ್ರೋಗೂ ವಿಧಿಸುತ್ತಿರುವ ಸೇವಾ ಶುಲ್ಕದಲ್ಲಿ ವ್ಯತ್ಯಾಸವಿದೆ. ಮೆಟ್ರೋಗೆ ಅದು ನಡೆಸುತ್ತಿರುವ ಚಟುವಟಿಕೆ ಆಧರಿಸಿ ಧರವನ್ನು ನಿಗದಿಪಡಿಸಲಾಗಿದೆ. ನಮ್ಮ ಮೆಟ್ರೋತನ್ನ ಸ್ವತ್ತಿನಲ್ಲಿ ಹೋಟೆಲ್,ಖಾಸಗಿ ಕಚೇರಿ,ವ್ಯಾಪಾರ ಮಳಿಗೆ ,ಪಾರ್ಕಿಂಗ್ ಶುಲ್ಕ ಸೇರಿದಂತೆ ಹಲವು ಚಟುವಟಿಕೆಗಳಿಗೆ ಜಾಗ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಆಸ್ತಿಗಳಿವೆ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದ 400ಕ್ಕೂ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳಿಗೆ ಪ್ರತಿವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಶೇ.25ರಷ್ಟುಮಾತ್ರ ಸೇವಾ ಶುಲ್ಕ ವಸೂಲಿ ಮಾಡಲಾಗುತ್ತದೆ.ಅದೇ ಮಾದರಿಯಲ್ಲಿ ನಮ್ಮ ಮೆಟ್ರೋಗೆ ಸೇರಿದಕಟ್ಟಡ,ನಿವೇಶನಗಳಿಗೆ ಆಸ್ತಿ ತೆರಿಗೆ ವಿನಾಯಿತಿನೀಡಿ ಸೇವಾ ಶುಲ್ಕ ವಸೂಲಿ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಸಭೆ ಕರೆಯಲಾಗಿದೆ.

ನಿಲ್ದಾಣದ ಹೊರಗಿರುವ ಮೆಟ್ರೋಗೆ ಸೇರಿದ ಜಮೀನು
ನಿಲ್ದಾಣದಿಂದ ಹೊರಗಡೆ ಇರುವ ಮೆಟ್ರೋಗೆ ಸೇರಿದ ಜಮೀನು ಮತ್ತು ಕಟ್ಟಡಗಳಿಗೆ ಶೇ.75ರಷ್ಟು ಸೇವಾ ಶುಲ್ಕ ವಿಧಿಸಿ, ಶೇ.25ರಷ್ಟು ವಿನಾಯಿತಿ ನೀಡಿದೆ. ಮೆಟ್ರೋ ನಿಲ್ದಾಣದ ಹೊರ ಮತ್ತು ಒಳಗೆಇರುವ ಮಳಿಗೆ ಅಂಗಡಿ,ಕಿಯೋಸ್ಕ್,ನಿಲ್ದಾಣದಲ್ಲಿರುವ ಪಾರ್ಕಿಂಗ್ ಜಾಗಕ್ಕೆ ರಿಯಾಯಿತಿ ಇಲ್ಲ. ಶೇ.100ರಷ್ಟು ಸೇವಾ ಶುಲ್ಕ ವಿಧಿಸಲಾಗಿದೆ.
Recommended Video

ನಾಲ್ಕು ಮಾದರಿಯ ಸೇವಾ ಶುಲ್ಕಗಳು ಯಾವುವು?
ನಮ್ಮ ಮೆಟ್ರೋ ನಿಲ್ದಾಣದ ಸೀಮಿತ ಪ್ರದೇಶ,ಡಿಪೋಗಳು,ಕಾರ್ಯಾಗಾರ,ಆಡಳಿತ ಕಚೇರಿ ಹಾಗೂ ತರಬೇತಿ ಕಚೇರಿಗಳಿಗೆ ಮಾತ್ರ ಶೇ.25ರಷ್ಟು ಸೇವಾ ಶುಲ್ಕ ವಿಧಿಸಿ ಶೇ.70ರಷ್ಟು ರಿಯಾಯಿತಿ ನೀಡಿದೆ.
ಇನ್ನು ಸಿಬ್ಬಂದಿ ವಾಸಿಸುವ ಮನೆಗಳಿಗೆ ಶೇ.50ರಷ್ಟು ಸೇವಾ ಶುಲ್ಕ ವಿಧಿಸಿ ಉಳಿದ ಶೇ.50ರಷ್ಟು ಪಾವತಿಗೆ ಸೂಚಿಸಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications