ಮೆಟ್ರೋ ಸುರಂಗ ಮಾರ್ಗ ಕಾಮಗಾರಿಯಿಂದ ಬರುವ ತ್ಯಾಜ್ಯ ಎಲ್ಲಿ ಹಾಕ್ತಾರೆ?
ಬೆಂಗಳೂರು, ಜೂನ್ 13: ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸುರಂಗ ಮೆಟ್ರೋ ನಿರ್ಮಾಣ ಕಾರ್ಯ ಇನ್ನೇನು ಆರಂಭವಾಗಲಿದೆ. ಆದರೆ ಸುರಂಗ ಕೊರೆದ ಬಳಿಕ ಮಣ್ಣನ್ನು ಎಲ್ಲಿ ಹಾಕುವುದು ಎನ್ನುವ ಸಮಸ್ಯೆಗೆ ಪರಿಹಾರವೂ ದೊರೆತಿದೆ.
25 ಲಕ್ಷ ಕ್ಯೂಬಿಕ್ ಮೀಟರ್ ತ್ಯಾಜ್ಯವನ್ನು ಎಲ್ಲಿ ಹಾಕುವುದು ಎನ್ನುವುದೇ ಬಿಎಂಆರ್ಸಿಎಲ್ಗೆ ದೊಡ್ಡ ತಲೆನೋವಾಗಿತ್ತು. ಬೆಂಗಲೂರಿನ ಹೊರವಲಯದಲ್ಲಿ ಒಟ್ಟು 6 ಸ್ಥಳಗಳನ್ನು ಗುರುತಿಸಲಾಗಿದೆ. ಒಟ್ಟು 14 ಕಿ.ಮೀ ಸುರಂಗ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳು ಬರಲಿವೆ. ಒಟ್ಟು ಎರಡು ಪ್ಯಾಕೇಜುಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಅಲ್ಲಿಂದ ಬರುವ 25 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಪರಿಸರಕ್ಕೆ ಹಾನಿಯಾಗದಂತೆ ಹೇಗೆ ಹಾಕುವುದು ಎನ್ನುವುದೂ ಸವಾಲಾಗಿದೆ.ಈ ತ್ಯಾಜ್ಯವನ್ನು ಹಾಕಲು 21 ಎಕರೆ ಜಾಗ ಬೇಕಾಗುತ್ತದೆ. ಬೆಂಗಳೂರು ನಗರ ಡಿಸಿಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ.

ಕಂದಾಯ ಇಲಾಖೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆಯಲಾಗಿದೆ. ಮೆಟ್ರೋ ಎರಡನೇ ಹಂತ ನಿರ್ಮಾಣಕ್ಕೆ 2014ರಲ್ಲೇ ಅನುಮತಿ ಸಿಕ್ಕಿದೆ. ಈ ಮೊದಲೇ ತಿಳಿಸಿದ ಹಾಗೆ ಈ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಬೇಕಿತ್ತು.












Click it and Unblock the Notifications