ಮಲಯಾಳಿ ನಟಿಯನ್ನು ಕಾಡಿದ ಫ್ರಾಂಕ್ಲಿನ್ ಬಂಧಿಸಿದ ಮಡಿವಾಳದ ಪೊಲೀಸರು!
ಬೆಂಗಳೂರು, ಅಕ್ಟೋಬರ್ 30: ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ರೆಬಾರನ್ನು ಕಾಡಿಸಿ, ಪೀಡಿಸಿ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಫ್ರಾಂಕ್ಲಿನ್ ವ್ಹಿಸಿಲ್ ಎಂದು ಗುರುತಿಸಲಾಗಿದ್ದು, ಬಸವನಗುಡಿಯ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದಾನೆ. ಕಳೆದ ಒಂದು ವರ್ಷದಿಂದ ಬೆಂಗಳೂರು ಮೂಲದ ಮಲೆಯಾಳಂ ನಟಿ ರೆಬಾ ಮೋನಿಕಾರನ್ನು ಫ್ರಾಂಕ್ಲಿನ್ ಕಾಡುತ್ತಿದ್ದ.
ಕೋರಮಂಗಲದ ಮೊದಲ ಬ್ಲಾಕಿನಲ್ಲಿ ವಾಸವಾಗಿರುವ ರೆಬಾ ಅವರು ನೀಡಿದ ದೂರಿನ ಆಧಾರದ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಫ್ರಾಂಕ್ಲಿನ್ ನನ್ನು ಬಂಧಿಸಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಚಿತ್ರ ಜೋಕೊಬಿಂಟೆ ಸ್ವರ್ಗರಾಜ್ಯಂ ಚಿತ್ರದಲ್ಲಿ ನಟಿಸಿದ್ದ ರೆಬಾ ಅವರು ನೀಡಿದ ದೂರಿನ ಅನ್ವಯ ವ್ಹಿಸಿಲ್ ವಿರುದ್ಧ ಐಪಿಸಿ ಸೆಕ್ಷನ್ 354 ಡಿಯಂತೆ ಪ್ರಕರಣ ದಾಖಲಿಸಲಾಯಿತು.
ಆದರೆ, ಕೋರ್ಟಿಗೆ ಹಾಜರುಪಡಿಸಿದ ಬೆನ್ನಲ್ಲೆ ಜಾಮೀನಿನ ಮೇಲೆ ವ್ಹಿಸಿಲ್ ಹೊರ ಬಂದಿದ್ದಾನೆ.

13 ವರ್ಷಗಳಿಂದ ಬೆಂಗಳೂರಿನ ನಿವಾಸಿ
ರೆಬಾ ಸುಮಾರು 13 ವರ್ಷಗಳಿಂದ ಬೆಂಗಳೂರಿನ ನಿವಾಸಿ. 2013ರಲ್ಲಿ ಟಿವಿ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಪರಿಚಯವಾಗಿದೆ.

ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ನಟನೆ
ಸ್ಟಾರ್ ನಟ ನಿವಿನ್ ಪೌಲಿ ಅಭಿನಯದ ಚಿತ್ರದಲ್ಲಿ ನಟಿಸುವ ಮೂಲಕ ರೆಬಾ ಜನಪ್ರಿಯತೆ ಗಳಿಸಿದರು. ಚಿತ್ರರಂಗದ ತೊಡಗಿಕೊಂಡಿದ್ದರೂ ಭಾನುವಾರದಂದು ಚರ್ಚ್ ಗೆ ಹೋಗುವುದನ್ನು ಮಾತ್ರ ರೆಬಾ ತಪ್ಪಿಸುತ್ತಿರಲಿಲ್ಲ.

ಪ್ರತಿ ಭಾನುವಾರ ಸೈಂಟ್ ಅಂಟೋನಿ ಚರ್ಚ್ ಗೆ ಪ್ರಾರ್ಥನೆ ಸಲ್ಲಿಸಿ
ಹೊಸೂರು ರಸ್ತೆ ಮಡಿವಾಳದ ವ್ಯಾಪ್ತಿಯ ಸೈಂಟ್ ಅಂಟೋನಿ ಚರ್ಚ್ ಗೆ ಪ್ರತಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಬರುವಾಗ ರೆಬಾಳನ್ನು ಫ್ರಾಂಕ್ಲಿನ್ ನೋಡಿದ್ದಾನೆ. ಹೇಗೋ ಮಾಡಿ ರೆಬಾ ಫೋನ್ ನಂಬರ್ ಗಳಿಸಿದ ಫ್ರಾಂಕ್ಲಿನ್ ದಿನ ನಿತ್ಯ ಆಕೆಯನ್ನು ಕಾಡತೊಡಗಿದ್ದ.

ಫ್ರಾಂಕ್ಲಿನ್ ಗೆ ರೆಬಾ ಎಚ್ಚರಿಕೆ
ಒಮ್ಮೆ ಚರ್ಚ್ ಬಳಿ ಸಿಕ್ಕ ಫ್ರಾಂಕ್ಲಿನ್ ಗೆ ರೆಬಾ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೆಲ ತಿಂಗಳುಗಳ ಕಾಲ ಸುಮ್ಮನಿರುತ್ತಿದ್ದ ಫ್ರಾಂಕ್ಲಿನ್ ಮತ್ತೊಮ್ಮೆ ಅಶ್ಲೀಲ ಸಂದೇಶಗಳನ್ನು ಕಳಿಸುವುದು, ಕರೆ ಮಾಡಿ ತೊಂದರೆ ಕೊಡುವುದನ್ನು ಮಾಡುತ್ತಿದ್ದ. ಈಗ ತಪ್ಪೊಪ್ಪಿಗೆ ಬರೆದುಕೊಂಡಿದ್ದಾನೆ. ಹಾಗೂ ಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದಾನೆ.
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ









Click it and Unblock the Notifications