ಹುತಾತ್ಮ 'ಮೀಸೆ ತಿಮ್ಮಯ್ಯ' ನಮ್ಮ ಟ್ರಾಫಿಕ್ ಪೊಲೀಸರ ಹೆಗ್ಗುರುತು
ಬೆಂಗಳೂರು, ಜೂನ್ 9: ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸದ್ಯದಲ್ಲೇ 'ಮ್ಯಾಸ್ಕಾಟ್' (ಹೆಗ್ಗುರುತು) ಸಿಗಲಿದೆ. ಹಿರಿಯ ಟ್ರಾಫಿಕ್ ಪೊಲೀಸ್ ಪೇದೆ ಮೀಸೆ ತಿಮ್ಮಯ್ಯ ಸ್ಮರಣಾರ್ಥ ಅವರದ್ದೇ ಮ್ಯಾಸ್ಕಾಟ್ ನ್ನು ಪಡೆಯಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಯಾರು ಈ ಮೀಸೆ ತಿಮ್ಮಯ್ಯ?
ಮೀಸೆ ತಿಮ್ಮಯ್ಯ ಜನರಿಗೆ ಪ್ರೀತಿ ಪಾತ್ರರಾಗಿದ್ದ, ಜನಮಾನಸದಲ್ಲಿ ಗೌರವಯುವ ಸ್ಥಾನ ಪಡೆದಿದ್ದ ಅಪರೂಪದ ಟ್ರಾಫಿಕ್ ಪೊಲೀಸ್ ಪೇದೆ. 1995ರಲ್ಲಿ ಸೇವಾ ಅವಧಿಯಲ್ಲೇ ಅವರು ಸಾವನ್ನಪ್ಪಿದ್ದರು. ಓರ್ವ ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ವ್ಯಾನ್ ಹರಿದಾಡಲಿರುವುದನ್ನು ಗಮನಿಸಿ ಮುನ್ನುಗ್ಗಿ ಮೀಸೆ ತಿಮ್ಮಯ್ಯ ಅವರ ಜೀವ ರಕ್ಷಿಸಿದ್ದರು. ಆದರೆ ದುರಾದೃಷ್ಟ ಅದೇ ಘಟನೆಯಲ್ಲಿ ಮೀಸೆ ತಿಮ್ಮಯ್ಯ ತಮ್ಮ ಜೀವ ಕಳೆದುಕೊಂಡರು. ಇಬ್ಬರ ಜೀವ ಉಳಿಸಿ ಮೀಸೆ ತಿಮ್ಮಯ್ಯ ತಮ್ಮ ಜೀವ ಕಳೆದುಕೊಂಡರು.
ಈ ಹಿಂದಿನ ಜನರಲ್ ಪೋಸ್ಟ್ ಆಫೀಸ್ ಜಂಕ್ಷನ್ ನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಇದೀಗ ತಿಮ್ಮಯ್ಯ ಸ್ಮರಣಾರ್ಥ ಆ ಜಂಕ್ಷನ್ ಗೆ 'ತಿಮ್ಮಯ್ಯ ಜಂಕ್ಷನ್' ಎಂದು ನಾಮಕರಣ ಮಾಡಲಾಗಿದೆ. ತಮ್ಮ ದಪ್ಪ ಮೀಸೆಯ ಅಡಿಯಲ್ಲೇ ತಿಮ್ಮಯ್ಯ ಯಾವತ್ತೂ ಸ್ನೇಹದ ನಗು ಬೀರುತ್ತಿದ್ದರು. ಅದಕ್ಕೆ ಅವರಿಗೆ 'ಮೀಸೆ ತಿಮ್ಮಯ್ಯ' ಎಂಬ ಹೆಸರು ಬಂದಿತ್ತು.

"ಅವರು ಮಕ್ಕಳ ವಲಯದಲ್ಲಿ ಭಾರೀ ಜನಪ್ರಿಯರಾಗಿದ್ದರು. ಅವರನ್ನು ನಗರದ ಎಲ್ಲರೂ ಪ್ರೀತಿಸುತ್ತಿದ್ದರು. ನಾವು ಅವರನ್ನು ಟ್ರಾಫಿಕ್ ಪೊಲೀಸರ ಮ್ಯಾಸ್ಕಾಟ್ ಗೆ ಪರಿಗಣಿಸಿದ್ದೇವೆ. ಆದರೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ," ಎಂದು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.
ತಿಮ್ಮಯ್ಯ ತಮ್ಮ ಮೀಸೆಯ ಕಾರಣಕ್ಕೆ ಮಾತ್ರ ಜನಪ್ರಿಯವಾಗಿರಲಿಲ್ಲ. ಗಿಜಿಗುಡುವ ವೃತ್ತದಲ್ಲಿ ಸುಲಲಿತವಾಗಿ ಟ್ರಾಫಿಕ್ ಮ್ಯಾನೇಜ್ ಮಾಡುವ ಮೂಲಕವೂ ಅವರು ಜನಪ್ರಿಯರಾಗಿದ್ದರು.
ಅವರು ಸಾವಿಗೀಡಾದ ನಂತರ ಅವರ ಕುಟುಂಬಕ್ಕೆ ಚಿನ್ನದ ಪದಕ ಪ್ರಧಾನ ಮಾಡಲಾಗಿತ್ತು. ಜತೆಗೆ ಅವರು ಕಾರ್ಯ ನಿರ್ವಹಿಸುತ್ತಿದ್ದ ವೃತ್ತಕ್ಕೆ 'ತಿಮ್ಮಯ್ಯ ವೃತ್ತ' ಎಂದು ನಾಮಕರಣ ಮಾಡಲಾಗಿತ್ತು.
ಮೀಸೆ ತಿಮ್ಮಯ್ಯರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರ ಮ್ಯಾಸ್ಕಾಟ್ ಆಗಿ ಪರಿಗಣಿಸುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಆದರೆ ಅವರ ಮ್ಯಾಸ್ಕಾಟ್ ಕೂಡಾ ಪರಿಶೀಲನೆಯಲ್ಲಿದೆ. ಒಂದೊಮ್ಮೆ ತಿಮ್ಮಯ್ಯ ಮ್ಯಾಸ್ಕಾಟ್ ಆದಲ್ಲಿ ಇದೊಂದು ಅಪರೂಪದ ನಿದರ್ಶನವಾಗಲಿದೆ. (ಒನ್ ಇಂಡಿಯಾ ಸುದ್ದಿ)
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications