ಎಂಎನ್ ಸಿ-ದೇಶೀಯ ಕಂಪನಿಗಳಿಗೂ ಬೆಂಗಳೂರಲ್ಲೇ ಕಚೇರಿ ಬೇಕಂತೆ!
ಬೆಂಗಳೂರು, ಏಪ್ರಿಲ್ 12: ದೇಶದಲ್ಲಿ 2020ನೇ ಇಸವಿ ವೇಳೆಗೆ ಅತಿ ಹೆಚ್ಚು ವಿಶೇಷ ಆರ್ಥಿಕ ವಲಯಗಳನ್ನು ಹೊಂದಲಿರುವ ಬೆಂಗಳೂರಿನಲ್ಲಿ ಕಚೇರಿ ಜಾಗಗಳಿಗಾಗಿ ಭಾರಿ ಬೇಡಿಕೆ ಉಂಟಾಗಿದೆ.
ದೇಶದ ಅತಿ ಹೆಚ್ಚು ವಿವಿಧ ಕಂಪನಿಗಳ ಕಚೇರಿಗಳಿಗಾಗಿ ಬೇಡಿಕೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬೆಂಗಳೂರು ದೇಶದ ಒಟ್ಟು ಬೇಡಿಕೆಯ ಶೇ.39ರಷ್ಟು ಭಾಗನ್ನು ಹೊಂದಿದೆ. ಬೆಂಗಳೂರಿನಂತರ ದೆಹಲಿ ಹಾಗು ಹೈದರಾಬಾದ್ ನಂತರ ಸ್ಥಾನದಲ್ಲಿದ್ದು, ತಲಾ ಶೇ.14ರಷ್ಟು ಬೇಡಿಕೆಯನ್ನು ಹೊಂದಿದೆ. ತಮಿಳಿನಾಡಿನ ಚೆನ್ನೈ ಶೇ.13ರಷ್ಟು, ಮಹಾರಾಷ್ಟ್ರದ ಪುಣೆ ಶೇ. 12ರಷ್ಟನ್ನು ಹೊಂದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
2020ರ ವೇಳೆಗೆ ದೇಶದಲ್ಲಿ ಸ್ಥಾಪನೆಗೊಳ್ಳಬಹುದಾದ ವಿಶೇಷ ಆರ್ಥಿಕ ವಲಯಗಳ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳು ತಮ್ಮ ಕೇಂದ್ರ ಕಚೇರಿಗಳನ್ನು ಬೆಂಗಳೂರಿನಲ್ಲಿ ತೆರೆಯಲು ಹೆಚ್ಚು ಆಸಕ್ತಿಯನ್ನು ಹೊಂದಿವೆ. ಹೀಗಾಗಿ ಬೆಂಗಳೂರು ನಗರದಲ್ಲಿ ಸರಿ ಸುಮಾರು 15.6ಮಿಲಿಯನ್ ಚದರಡಿ ಜಾಗವನ್ನು ಈ ಕಂಪನಿಗಳಿಗಾಗಿ ನೀಡಲಿದ್ದು, ಒಟ್ಟು 40 ಮಿಲಿಯನ್ ಚದರಡಿಗಾಗಿ ಬೇಡಿಕೆ ಉಂಟಾಗಿದೆ.

ಈ ಕುರಿತು ಸಮೀಕ್ಷೆ ನಡೆಸಿರುವ ಕೊಲಾಯರ್ಸ್ ಇಂಟರ್ ನ್ಯಾಷನಲ್ ಇಂಡಿಯಾ ದೇಶದಲ್ಲಿ ಸ್ಥಾಪನೆಗೊಳ್ಳಬಹುದಾದ ವಿಶೇಷ ಆರ್ಥಿಕ ವಲಯಗಳು ಹಾಗೂ ಅವುಗಳಿಗೆ ಬೇಕಾದ ಕಚೇರಿ ಜಾಗ ಮೂಲ ಸೌಕರ್ಯ ಕುರಿತಂತೆ ಅಧ್ಯಯನ ನಡೆಸಿದೆ. ಈ ಅಧ್ಯಯನ ಪ್ರಕಾರ ಅನೇಕರು ಆದಾಯ ತೆರಿಗೆಯನ್ನು ಉಳಿಸಿಕೊಳ್ಳಲು ಕಟ್ಟಡಗಳನ್ನು ಬಾಡಿಗೆ ಆದಾರದ ಮೇಲೆ ನೀಡಲು ಮುಂದೆ ಬರುತ್ತಿದ್ದಾರೆ.
ವಿಶೇಷ ಆರ್ಥಿಕ ವಲಯಗಳೆಂದು ಗುರುತಿಸಲ್ಪಟ್ಟ ಜಾಗಗಳಲ್ಲಿ ಹೆಚ್ಚು ಆದಾಯ ತೆರಿಗೆ ಉಳಿತಾಯದ ಲಾಭಗಲನ್ನು ಸರ್ಕಾರ ಒದಗಿಸಿಸರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ ಎಂದು ವರದಿ ಬಹಿರಂಗ ಪಡಿಸಿದೆ.
ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ತಮ್ಮ ಕಚೇರಿಗಳನ್ನು ಬೆಂಗಳೂರಿನಂತಹ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿರುವ ನಗರಗಳಲ್ಲಿ ಸ್ಥಾಪಿಸಲು ಮುಂದೆ ಬರುತ್ತಿದ್ದು ಈ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ಅಚ್ಚುಮೆಚ್ಚಿನ ತಾಣವಾಗಿದೆ.
ಭಾರತದ ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತಲಾ 30 ವಿಶೇಷ ಆರ್ಥಿಕ ವಲಯಗಳಿದ್ದರೆ ಮಹಾರಾಷ್ಟ್ರದಲ್ಲಿ 27 ನಂತರ ಕರ್ನಾಟಕದಲ್ಲಿ ಒಟ್ಟು 27 ವಿಶೇಷ ಆರ್ಥಿಕ ವಲಯಗಳಿದ್ದು ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಬೆಂಗಳೂರಿನ ಮಾನ್ಯತಾ ಎಂಬಸ್ಸಿ ಬ್ಯುಸಿನೆಸ್ ಪಾರ್ಕ್, ಎಂಬಸ್ಸಿ ಟೆಕ್ ವಿಲೇಜ್, ಆರ್ಎಂಜಡ್ ಎಕೋ ವರ್ಲ್ಡ್ ಹಾಗೂ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಂತಹ ವಿಶೇಷ ವಲಯಗಳಲ್ಲಿ ಸಿಸ್ಕೋ ಇಂಟೆಲ್ ಲೋವೆಸ್ ಕಂಪನಿಗಳು ತಮ್ಮ ಕಚೇರಿಗಳನ್ನು ಹೊಂದಿವೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications