Bengaluru: ಸ್ವಂತ ವಾಹನ ಹೊಂದಿರುವ ಶೇ.95ರಷ್ಟು ಮಂದಿಗೆ ಮೆಟ್ರೋದಲ್ಲಿ ಓಡಾಡಲು ಆಸಕ್ತಿ : ಸಮೀಕ್ಷೆ

ಬೆಂಗಳೂರು, ಸೆಪ್ಟೆಂಬರ್ 5 : ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿಪಿಎಸಿ) ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 95 ಪ್ರತಿಶತ ಜನರು ವೈಯಕ್ತಿಕ ಸಾರಿಗೆಯಿಂದ ಮೆಟ್ರೋ ರೈಲಿನಂತಹ ಸಾರ್ವಜನಿಕ ಸಾರಿಗೆಗೆ ಬದಲಾಯಿಸಲು ಬಯಸುತ್ತಾರೆ ಎಂದು ಬಹಿರಂಗಪಡಿಸಿದೆ.

ಈ ಸಂಸ್ಥೆಗಳ ಪ್ರತಿನಿಧಿಗಳು ತಿಂಗಳ ಅವಧಿಯ ಸಮೀಕ್ಷೆಯ ನಂತರ, ಈಗ ಅವರು ಬಸ್ ಮತ್ತು ಮೆಟ್ರೋ ಸಾರಿಗೆ ಸೇವೆಗಳಿಗೆ ಬದಲಾಯಿಸಲು ವೈಯಕ್ತಿಕ ಸಾರಿಗೆಯನ್ನು ಬಳಸುವ ಸಾರ್ವಜನಿಕರಿಗೆ ಶಿಕ್ಷಣ ಮತ್ತು ಪ್ರೇರೇಪಿಸಲು 'ಪರ್ಸನಲ್ 2 ಪಬ್ಲಿಕ್' ಅಭಿಯಾನವನ್ನು ಪ್ರಾರಂಭಿಸಲು ಬಯಸಿದ್ದಾರೆ.

Bengaluru: Survey Finds 95% Desire Shift to Namma Metro Rail Over Personal Transport

ಬಿಪಿಎಸಿಯ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ಮಾತನಾಡಿ, ''ನಗರದಾದ್ಯಂತ ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ 3,855 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಶೇಕಡಾ ತೊಂಬತ್ತೈದು ಮಂದಿ ಮೆಟ್ರೋ ರೈಲಿನಲ್ಲಿ ಓಡಾಸಲು ಸಿದ್ಧವಾಗಿದ್ದಾರೆ. ಮತ್ತು ಪ್ರತಿಕ್ರಿಯಿಸಿದವರಲ್ಲಿ 70 ಪ್ರತಿಶತದಷ್ಟು ಜನರು ಮನೆ ಮತ್ತು ಕೆಲಸದ ಸ್ಥಳದ ನಡುವೆ ಸಂಪರ್ಕವನ್ನು ಒದಗಿಸಿದರೆ ತಕ್ಷಣವೇ ಬದಲಾಯಿಸಲು ಬಯಸುತ್ತಾರೆ." ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟ್ರಾಫಿಕ್‌ ಸಮಸ್ಯೆಗೆ ಸಾರ್ವಜನಿಕ ಸಾರಿಗೆ ಪರಿಹಾರ

ಡಬ್ಲ್ಯುಆರ್‌ಐ ಇಂಡಿಯಾದ ಫೆಲೋ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, "ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ದೀರ್ಘಾವಧಿಯ ಪರಿಹಾರವೆಂದರೆ ಸಾರ್ವಜನಿಕ ಸಾರಿಗೆ. 2023 ರ ವರ್ಷವು ಬ್ರಾಂಡ್ ಬೆಂಗಳೂರಿಗೆ ಒಂದು ಮೈಲಿಗಲ್ಲು ವರ್ಷವಾಗಲಿದೆ, ಏಕೆಂದರೆ ಮೆಟ್ರೋ ವೈಟ್‌ಫೀಲ್ಡ್ ಅನ್ನು ನಗರದ ಉಳಿದ ಭಾಗಗಳಿಗೆ ಸಂಪರ್ಕಿಸುತ್ತದೆ. #Personal2Public ಎಂಬುದು ಕಾರ್ಪೊರೇಟ್‌ಗಳು, ಸ್ವಯಂ ಒಕ್ಕೂಟಗಳು ಮತ್ತು ನಾಗರಿಕ ಗುಂಪುಗಳಿಂದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ನಾಗರಿಕರ ಆಂದೋಲನವಾಗಿದೆ. ಸರ್ಕಾರಿ ಏಜೆನ್ಸಿಗಳೊಂದಿಗೆ ಸಹಕರಿಸುವ ಮೂಲಕ ಮೊದಲ ಮತ್ತು ಕೊನೆಯ ಮೈಲಿ ಪ್ರವೇಶವನ್ನು ಸುಧಾರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ." ಎಂದು ಹೇಳಿದ್ದಾರೆ.

ಔಟರ್ ರಿಂಗ್ ರೋಡ್ (ORR) ಗರಿಷ್ಠ ಸಂಖ್ಯೆಯ ದೈನಂದಿನ ಪ್ರಯಾಣಿಕರನ್ನು ಹೊಂದಿದೆ, ಆದ್ದರಿಂದ ಪರ್ಪಲ್ ಲೈನ್ ಮೆಟ್ರೋ ನಿಲ್ದಾಣಗಳಿಂದ ಔಟರ್ ರಿಂಗ್ ರೋಡ್‌ನಲ್ಲಿನ ಟೆಕ್ ಪಾರ್ಕ್‌ಗಳಿಗೆ ವೇಗವಾಗಿ ಫೀಡರ್ ಬಸ್‌ಗಳ ಸಂಪರ್ಕ ಒದಗಿಸುವುದರಿಂದ ದೊಡ್ಡ ವ್ಯತ್ಯಾಸವಾಗುತ್ತದೆ ಎಂದು ಅವರು ಹೇಳಿದರು. ವಾರದಲ್ಲಿ ಕನಿಷ್ಠ ಎರಡು ದಿನಗಳಿಂದ ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳಿ ಎನ್ನುವುದು ಪ್ರಯಾಣಿಕರಿಗೆ ನಮ್ಮ ಪ್ರಾಮಾಣಿಕ ಮನವಿಯಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಅಧ್ಯಕ್ಷ ವಿಕ್ರಮ ರೈ ಮಾತನಾಡಿ, "ಸಮೀಕ್ಷಾ ತಂಡವು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಅಭಿಯಾನಕ್ಕೆ ಸರ್ಕಾರದ ಬೆಂಬಲವನ್ನು ಕೋರಿತು ಮತ್ತು ವಾರಕ್ಕೆ ಎರಡು ಬಾರಿಯಾದರೂ ಸಾರ್ವಜನಿಕ ಸಾರಿಗೆಗೆ ಬದಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ". ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+