ಮಕ್ಕಳ ದತ್ತು ಪಡೆಯುವಲ್ಲೂ ಬೆಂಗಳೂರು 'ಸಾಫ್ಟ್' ಮನಸು!
ಬೆಂಗಳೂರು, ನವೆಂಬರ್ 26: ಮಕ್ಕಳನ್ನು ದತ್ತು ಪಡೆಯುವಲ್ಲಿ ಕೂಡ ಬೆಂಗಳೂರು ಮುಂದಿದೆ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ನಡೆದಿದೆ.
2014ರಲ್ಲಿ ರಾಜ್ಯದಲ್ಲಿ ಕೇವಲ 77 ಮಕ್ಕಳು ದತ್ತು ಪಾಲಕರನ್ನು ಸೇರಿದ್ದರು. ಆದರೆ, ಕೇಂದರ ದತ್ತು ಸಂಪನ್ಮೂಲ ಪ್ರಾಧಿಕಾರ 2005ರಲ್ಲಿ ತಂದ ನೂತನ ದತ್ತು ಮಾರ್ಗಸೂಚಿ ರಾಜ್ಯದಲ್ಲಿ ಮಕ್ಕಳ ಭಾಗ್ಯದಿಂದ ವಂಚಿತರಾಗಿದ್ದ ದಂಪತಿಗಳಿಗೆ ವರದಾನವಾಗಿದೆ. 2018-19 ನೇ ಸಾಲಿನಲ್ಲಿ 282 ಮಕ್ಕಳು ಕೌಟುಂಬಿಕ ಪ್ರೀತಿ ಪಡೆಯಲು ಸಾಧ್ಯವಾಗಿದೆ.
ಬೆಂಗಳೂರಲ್ಲಿ 76 ಮಕ್ಕಳು ದತ್ತು ಪಾಲಕರ ಮಡಿಲು ಸೇರಿದ್ದಾರೆ, ಚಿಕ್ಕಮಗಳೂರು-38, ರಾಮನಗರ-28, ಹಾಸನ-16, ದಕ್ಷಿಣ ಕನ್ನಡ -16 ಮಂದಿಯನ್ನು ದತ್ತು ತೆಗೆದುಕೊಂಡಿದ್ದಾರೆ.

ಮಗುವನ್ನು ದತ್ತು ತೆಗೆದುಕೊಳ್ಳಲು ಅರ್ಹತೆ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 29 ವಿಶೇಷ ದತ್ತು ಕೇಂದ್ರಗಳಿದ್ದು, 563 ಮಕ್ಕಳು ನೆಲೆ ಕಂಡುಕೊಂಡಿದ್ದಾರೆ. ಯಾವುದೇ ಮಕ್ಕಳನ್ನು ದತ್ತು ನೀಡುವಾಗ ಸೆಂಟ್ರಲ್ ಅಡಾಪ್ಟೇಷನ್ ರಿಸೋರ್ಸ್ ಅಥಾರಿಟಿಯ ನಿಯಮ ಪಾಲಿಸಬೇಕಾಗುತ್ತದೆ.

ಬಂಜೆತನ ಸಂಖ್ಯೆ ಹೆಚ್ಚಳ
ಹೆಣ್ಣುಮಕ್ಕಳಲ್ಲಿ ಬಂಜೆ ತನ ಹೆಚ್ಚಾಗಿದೆ, ಬದಲಾದ ಆಹಾರ ಪದ್ಧತಿ ಇನ್ನಿತರೆ ಕಾರ್ಯಗಳಿಂದಾಗಿ ಕೂಡ ಬಂಜೆತನದ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಮಾಡಿಕೊಳ್ಳುವುದರಲ್ಲಿ ಸಮಯ ಮುಂದೂಡಿಕೆ, ಆಧುನಿಕ ಜೀವನ ಶೈಲಿಯೂ ಒಂದು ಕಾರಣ, ವಿಚ್ಛೇದನ, ವಿವಾಹ ವಿಳಂಬ, ನಾನಾ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡವರು ಕೂಡ ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ದತ್ತು ಸ್ವೀಕಾರಕ್ಕೆ ಏನೇನು ದಾಖಲೆಗಳು ಬೇಕು
ದತ್ತು ಸ್ವೀಕಾರಕ್ಕೆ ವೈದ್ಯರ ಅರ್ಹತಾ ದೃಢೀಕರಣ ಪತ್ರ, ಉದ್ಯೋಗ ಮತ್ತು ಆದಾಯ ದೃಢೀಕರಣ ಪತ್ರ, ಸಂಪತಿಗ ಜನ್ಮ ದಿನಾಂಕ ದೃಢೀಕರಣ ಪತ್ರ, ವಿವಾಹದ ಪುರಾವೆ, ಇತ್ತೀಚಿನ ಭಾವಚಿತ್ರ, ಆಸ್ತಿ ವಿವರಗಳನ್ನು ನೀಡಬೇಕು.

ಮಕ್ಕಳಿಗೆ ಏನೇನು ಅರ್ಹತೆ ಇರಬೇಕು
ಮಗುವಿನ ಪಾಲಕರು-ಪೋಷಕರು ಸ್ವ ಇಚ್ಛೆಯಿಂದ ಮಕ್ಕಳನ್ನು ನೀಡುತ್ತಿದ್ದೇವೆ ಎಂದು ಲಿಖಿತ ರೂಪದಲ್ಲಿ ಬರೆದು ಕೊಡಬೇಕು, ದತ್ತು ಕಾರ್ಯಕ್ರಮ ನಡೆಸಲು ಮನ್ನಣೆ ಪಡೆದ ಸಂಸ್ಥೆಯಲ್ಲಿ ದಾಖಲಾದ ಮಕ್ಕಳ ವಯಸ್ಸು 18ರ ಒಳಗಿರಬೇಕು. ವಾಲೆಂಟರಿ ಕೋ-ಆರ್ಡಿನೇಟಿಂಗ್ ಏಜೆನ್ಸಿಯಲ್ಲಿ ದತ್ತು ನೀಡುವ ಪಟ್ಟಿಯಲ್ಲಿ ದಾಖಲಾಗಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದಾಗಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications