Bengaluru Road Rage: ಬೆಚ್ಚಿ ಬೀಳುವ ರೋಡ್ ರೇಜ್ ವಿಡಿಯೋ ವೈರಲ್: ಕಾರು ಚಾಲಕ ಅರೆಸ್ಟ್, ಆಗಿದ್ದೇನು?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬನನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ಗಟ್ಟಲೇ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಎಚ್ಎಎಲ್ ರಸ್ತೆಯಲ್ಲಿ ನಡೆದಿದೆ. ಈ ಭೀಕರ ದೃಶ್ಯಗಳನ್ನು ದಾರಿಹೋಕರು ಸೆರೆ ಹಿಡಿದಿದ್ದು, ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಬೆಂಗಳೂರು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಾರಿನ ಚಾಲಕನನ್ನು ಬಂಧಿಸಿದ್ದಾಗಿ ಹಲಸೂರು ಪೊಲೀಸರು ಖಚಿತಪಡಿಸಿದ್ದಾರೆ. ವಿಡಿಯೋ ನೋಡಿದ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ.
ಕಾರು ಚಾಲಕ, ಆರೋಪಿ ಸುರೇಶ್ ನನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಪುಲಕೇಶಿ ನಗರ ನಿವಾಸಿ. ಕಾರಿನ ಬಾನೆಟ್ ಮೇಲಿದ್ದ ವ್ಯಕ್ತಿಯನ್ನು ಗೂಡ್ಸ್ ವಾಹನ ಚಾಲಕ ನಂಜುಂಡ ಎಂದು ಗುರುತಿಸಲಾಗಿದೆ. ನಗರದ ಟ್ರನಿಟಿ ವೃತ್ತ ಬಳಿ ಬುಧವಾರ ಗೂಡ್ಸ್ ವಾಹನಕ್ಕೆ ಕಾರು ತಾಗಿದೆ. ಈ ಸಂಬಂಧ ರಸ್ತೆಯಲ್ಲಿ ಗಾಡಿ ಸೈಡಿಗೆ ಹಾಕುವಂತೆ ಹೇಳಲಾಗಿದೆ. ಆದರೆ ಕಾರು ನಿಂತಿಲ್ಲ. ಅಲ್ಲಿಂದಲೇ ಶುರುವಾದ ಜಗಳ ಸಿಬಿ ಜಂಕ್ಷನ್, ಎಎಸ್ಸಿ ಸೆಂಟರ್ ಕಾಲೇಜುವರೆಗೆ ಜಗಳ ಮುಂದುವರಿದಿದೆ.

ಕೊನೆಗೆ ಕಾರು ನಿಲ್ಲಿಸಿ ಜಗಳಕ್ಕೆ ಇಳಿದಿದ್ದ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ತನ್ನ ಸರಕು ವಾಹನಕ್ಕೆ ಹಾನಿ ಆಗಿದ್ದು, ಪರಿಹಾರ ನೀಡಬೇಕು. ಇಲ್ಲವೇ ರಿಪೇರಿ ಮಾಡಿಸಿಕೊಡಬೇಕೆಂದು ನಂಜುಂಡ ಕಾರು ಚಾಲಕ ಸುರೇಶನನ್ನು ಒತ್ತಾಯಿಸಿದ್ದಾರೆ. ನೋಡ ನೋಡುತ್ತಲೇ ವಾಗ್ವಾದ ತಾರಕಕ್ಕೇರಿದೆ. ಕಾರಿನಿಂದ ಕೆಳಗೆ ಇಳಿಯದ ಸುರೇಶ್ ಅಲ್ಲಿಂದ ಹೊರಡಲು ಮುಂದಾಗಿದ್ದಾನೆ.
ಬಾನೆಟ್ ಮೇಲೆ ಬಿದ್ದರೂ ಕಾರು ನಿಲ್ಲಿಸದೇ ದರ್ಪ
ಈ ವೇಳೆ ಕಾರಿನ ಮುಂದೆ ನಿಂತ ಸುರೇಶ್ ದಾರಿ ಬಿಡುವುದಿಲ್ಲ ಎಂದಿದ್ದಾರೆ. ನಿಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳದೇ ಕಾರು ಚಾಲನೆ ಮಾಡಿದ ಸುರೇಶ್ ಕಾರಿನ ಬಾನೆಟ್ ಮೇಲೆ ಬಿದ್ದ ನಂಜುಂಡನನ್ನು ಒಂದು ಕಿಲೋ ಮೀಟರ್ ವರೆಗೆ ಹಾಗೆಯೇ ಹೊತ್ತೊಯ್ದು ದರ್ಪ ಮೆರೆದಿದ್ದಾನೆ. ಈ ವಿಡಿಯೋವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಈ ಘಟನೆ ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದೆ. ಹೀಗಾದರೆ ಏನ್ ಕಥೆ ಎಂದು ವಿಡಿಯೋ ಸೆರೆ ಹಿಡಿದ ಬೇರೊಂದು ವಾಹನ ಪ್ರಮಾಣಿಕರು ಮಾತನಾಡಿದ್ದು ಕೇಳಿಸುತ್ತದೆ. ಏ... ನಿಲ್ಲಿಸು ಎಂದು ನಂಜುಂಡ ಕೂಗಿದರೂ ಕಾರು ನಿಲ್ಲಿಸಿಲ್ಲ.
Shocking Road Rage Incident in Bengaluru! 🚨
— The Nalanda Index (@Nalanda_index) February 11, 2026
After a minor accident, an auto driver allegedly stood in front of the car to block it but the car driver moved forward, leaving the man clinging to the bonnet for dear life.
A case has been registered and the car driver has been… pic.twitter.com/r4nPUshMOa
ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ, ಕೊಲೆ ಯತ್ನದಡಿ ಕೇಸ್
ಇದೀಗ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎದ್ದಿದೆ. ಒಂದು ಜೀವಕ್ಕೆ ಬೆಲೆಯೇ ಇಲ್ಲವೇ. ಘಟನೆಯಲ್ಲಿ ಗೂಡ್ಸ್ ವಾಹನದ ಚಾಲಕನ ಜೀವಕ್ಕೆ ಏನಾದರೂ ಆಗಿದ್ದರೆ ಅವರ ಕುಟುಂಬದ ಗತಿ ಏನು? ಎಂದು ಸಾರ್ವಜನಿಕರು ಘಟನೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದಡಿ ದೂರು ದಾಖಲಾಗಿದೆ. ಕಾರು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಜನರು ವ್ಯಾಪಕವಾಗಿ ಖಂಡಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್













Click it and Unblock the Notifications