ಬೆಂಗಳೂರಿನ ಈ ಭಾಗದಲ್ಲಿ ಯಾರೂ ಆಸ್ತಿ ಮಾರುತ್ತಿಲ್ಲ
ಸಿಲಿಕಾನ್ ಸಿಟಿ ಬೆಂಗಳೂರು ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೊದಲಾದರೆ ಬೆಂಗಳೂರು ಅಂದ್ರೆ ಹತ್ತಾರು ಏರಿಯಾಗಳ ಹೆಸರಷ್ಟೇ ಬಾಯಿಗೆ ಬರುತ್ತಿತ್ತು. ಆದರೆ ಈಗ ದಿನದಿಂದ ದಿನಕ್ಕೆ ಬೆಂಗಳೂರು ಬೃಹತ್ ಆಗಿ ಬೆಳೆಯುತ್ತಿದೆ. ಕಳೆದ ಒಂದು ದಶಕದಲ್ಲೇ ನಗರದ ಸ್ವರೂಪ ಸಂಪೂರ್ಣವಾಗಿ ಬದಲಾಗಿದ್ದು, ಅದರಂತೆ ಇಲ್ಲಿನ ಭೂಮಿಗೂ ಚಿನ್ನದ ಬೆಲೆ ಬಂದಿದೆ.
ಕಳೆದ ಎರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಭೂಮಿಗೆ ಅಷ್ಟೇನೂ ಡಿಮ್ಯಾಂಡ್ ಇರಲಿಲ್ಲ. ಸಾವಿರಾರು ರೂಪಾಯಿಗೆ ಸೈಟು, ಕೆಲವೇ ಲಕ್ಷಕ್ಕೆ ಎಕರೆಗಟ್ಟಲೆ ಜಮೀನು ಸಿಗುತ್ತಿತ್ತು. ಈಗ ಕೋಟಿಯಿದ್ದರೂ ಬೆಂಗಳೂರಿನಲ್ಲಿ ಆಸ್ತಿ ಮಾಡುವುದು ಕನಸಿನ ಮಾತಾಗಿದೆ. ದಿನಗಳು ಉರುಳಿದಂತೆ ಈಗ ಭೂಮಿಗೆ ಚಿನ್ನದ ಬೆಲೆ ಬಂದು ಏರುತ್ತಲೇ ಇದೆ. ಇದನ್ನು ಅರಿಯದ ಮೂಲ ಬೆಂಗಳೂರಿಗರು ತಮ್ಮ ಆಸ್ತಿಗಳನ್ನು ಕಳೆದುಕೊಂಡು ಕೈಸುಟ್ಟುಕೊಂಡಿದ್ದಾರೆ.

ಆದರೆ ಈಗಿನವರಿಗೆ ಆಸ್ತಿಯ ಮೌಲ್ಯ ಹಾಗೂ ಅದರ ಭವಿಷ್ಯದ ಅರಿವು ಸ್ವಲ್ಪವಾದರೂ ಇದೆ. ಹೀಗಾಗಿ ಕೋಟಿಯಿಟ್ಟರೂ ಆಸ್ತಿ ಮಾರಲ್ಲ ಎಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಏಕೆಂದರೆ ಒಂದು ಪುಟ್ಟ ಸೈಟು ಖರೀದಿಯೇ ಈಗ ಕೋಟಿಗಳ ವ್ಯವಹಾರ ನಡೆಸುತ್ತಿದೆ. ಈ ವಿಚಾರ ಮೊದಲೇ ಗೊತ್ತಿದ್ದರೆ ನಾವ್ಯಾರೂ ನಮ್ಮ ಆಸ್ತಿ ಮಾರುತ್ತಿರಲಿಲ್ಲ ಎನ್ನುತ್ತಾರೆ ಆಸ್ತಿ ಕಳೆದುಕೊಂಡವರು.
ಇದೀಗ ಬೆಂಗಳೂರಿನಲ್ಲಿ ನಿವೇಶನ ಖರೀದಿಸುವುದು ತುಂಬಾ ಕಷ್ಟ ಎಂದು ಅರಿತ ಜನ ಬೆಂಗಳೂರಿನಿಂದ ಚೂರು ಹೊರಗಿನ ಪ್ರದೇಶಗಳಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ. ಏಕೆಂದರೆ ಈ ಭಾಗಗಳೂ ಸಹ ಅಭಿವೃದ್ಧಿಯ ಹಾದಿಯಲ್ಲಿದ್ದು, ಮುಂದೊಂದು ದಿನ ಹಾಕಿರುವ ಬಂಡವಾಳಕ್ಕೆ ದುಪ್ಪಟ್ಟು ಹಣ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಈಗ ಎಂತಹ ಕಷ್ಟ ಬಂದರೂ ತಮ್ಮ ಆಸ್ತಿಗಳನ್ನು ಮಾರಲು ನಿರಾಕರಿಸುತ್ತಿದ್ದಾರೆ.

ಹಾಗಾಗಿ ರಿಯಲ್ ಎಸ್ಟೇಟ್ನವರು, ಬಿಲ್ಡರ್ಗಳು ಬಂದು ಎಷ್ಟೇ ಪಟ್ಟು ಹಿಡಿದರೂ ಆಸ್ತಿ ಮಾರಲು ಜನ ಒಪ್ಪುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ಸದ್ಯ ಪ್ರತಿ ಚದರ ಅಡಿ ಭೂಮಿಯೇ ಲಕ್ಷಗಟ್ಟಲೆ ಬೆಲೆ ಬಾಳುತ್ತಿದೆ. ಕೋರಮಂಗಲ ಪ್ರದೇಶವು ಬೆಂಗಳೂರಿನಲ್ಲಿರುವ ಅತಿ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಭೂಮಿ ಬೆಲೆ ಕೂಡ ಅಧಿಕ ಮೌಲ್ಯವನ್ನು ಹೊಂದಿದೆ.
ಇಂದಿರಾನಗರದಲ್ಲಿ ಈಗಿನ ಮಾರುಕಟ್ಟೆ ಮೌಲ್ಯ ಪ್ರತಿ ಚದರ ಅಡಿಗೆ 10,000 ರೂಪಾಯಿಯಿಂದ 20,000 ರೂಪಾಯಿ ಇದೆ. ಲ್ಯಾವೆಲ್ಲೆ ರಸ್ತೆಯಲ್ಲಿ ಪ್ರತಿ ಚದರ ಅಡಿಗೆ 20,000 ರೂಪಾಯಿಯಿಂದ 25,000 ರೂಪಾಯಿ ನಡುವೆ ಇದೆ. ಎಂಜಿ ರಸ್ತೆ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ 12,000 ರೂಪಾಯಿಯಿಂದ 30,000 ರೂಪಾಯಿವರೆಗೆ ಭೂಮಿಯ ಬೆಲೆ ಏರಿದೆ.
ಈ ಹಿನ್ನೆಲೆ ಈ ಭಾಗದ ಜನರು ತಮ್ಮ ಆಸ್ತಿಗಳನ್ನು ಮಾರುವ ಉದ್ದೇಶವೇ ಹೊಂದಿಲ್ಲ. ಈಗ ಇಲ್ಲಿ ಆಸ್ತಿಗಳನ್ನು ಉಳಿಸಿಕೊಂಡರೆ, ಮುಂದಿನ ಪೀಳಿಗೆಗೆ ಆಧಾರವಾಗಲಿದೆ ಎಂಬ ದೂರದೃಷ್ಟಿಯನ್ನು ಹೊಂದಿದ್ದಾರೆ. ಮೈತುಂಬಾ ಸಾಲವಿದ್ದರೂ ಕೂಡ ಈ ಪ್ರದೇಶಗಳಲ್ಲಿ ಆಸ್ತಿ ಇದೆಯಲ್ಲ ಎಂಬ ಧೈರ್ಯದಲ್ಲೇ ಇದ್ದಾರೆ ಇಲ್ಲಿನ ನಿವಾಸಿಗಳು. ಅಲ್ಲದೆ ಬಾಗಲೂರು ಪ್ರದೇಶದಲ್ಲಿ ಕೂಡ ನಿವೇಶನಗಳ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಐದಾರು ವರ್ಷದ ಹಿಂದೆ ತೀರಾ ಗ್ರಾಮೀಣ ಭಾಗ ಎನ್ನುವಂತಿದ್ದ ಈ ಪ್ರದೇಶವು ಈಗ ನವಬೆಂಗಳೂರಿನಂತೆ ಬದಲಾಗಿದೆ. ಹಾಗಾಗಿ ಇಲ್ಲಿ ಆಸ್ತಿ ಖರೀದಿ ಕೂಡ ಒಂದು ದೊಡ್ಡ ಸಾಧನೆಯೇ ಎಂಬಂತಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications