RCB vs CSK: ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ ಇದು ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸುವ ನಿರೀಕ್ಷೆ ಇದೆ.
ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮೈದಾನಕ್ಕೆ ಇಳಿಯುವ ಕಾರಣ ಪಂದ್ಯವನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಕಾರಣಕ್ಕೆ ಈ ಪಂದ್ಯದ ಟಿಕೆಟ್ಗಳು ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿವೆ. ಆದರೆ, ಆನ್ಲೈನ್ ಟಿಕೆಟ್ ಮಾರಾಟದ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಹುಟ್ಟಿಕೊಂಡಿದೆ.

ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಲು ಹೋಗಿ ವ್ಯಕ್ತಿಯೊಬ್ಬ ಬರೋಬ್ಬರಿ ₹3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿಗೆ 'ipl_2024_tickets_24' ಹೆಸರಿನ ಹ್ಯಾಂಡಲ್ನಿಂದ ಟಿಕೆಟ್ ನೀಡುವ ಆಮಿಷ ಒಡ್ಡಲಾಗಿದೆ.
ಹ್ಯಾಂಡಲ್ನ ಹಿಂದಿನ ವ್ಯಕ್ತಿ, ಪದ್ಮ ಸಿಂಹ ವಿಜಯ್ ಕುಮಾರ್ ಎಂದು ತನ್ನನ್ನು ಪರಿಚಯಿಸಿಕೊಂಡು, ಅಧಿಕೃತ ಐಪಿಎಲ್ ಟಿಕೆಟ್ ಮಾರಾಟಗಾರನಂತೆ ಮಾತನಾಡಿದ್ದಾರೆ. ತಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲನೆಗಾಗಿ ನೀಡಿದ್ದು, ತಲಾ ₹ 2,300 ಮೌಲ್ಯದ ಟಿಕೆಟ್ಗಳನ್ನು ನೀಡಿದ್ದಾರೆ.
ಮೂರು ಟಿಕೆಟ್ಗಳಿಗೆ ₹7,900 ಕಳುಹಿಸಿದ್ದರೂ, ಸಂತ್ರಸ್ತರು ಇ-ಟಿಕೆಟ್ಗಳನ್ನು ಸ್ವೀಕರಿಸಲಿಲ್ಲ. ವಂಚಕನು ತಾಂತ್ರಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಪರಿಹಾರಕ್ಕಾಗಿ ಹೆಚ್ಚುವರಿ ₹ 67,000 ಕೋರಿದ್ದಾನೆ. ಟಿಕೆಟ್ಗಳ ಜೊತೆಗೆ ಮರುಪಾವತಿಯನ್ನು ಭರವಸೆ ನೀಡುತ್ತಾ, ವಂಚಕನು ಹೆಚ್ಚು ಬೇಡಿಕೆಯಿಡುವವರೆಗೂ ಬಲಿಪಶು ಹಣವನ್ನು ಕಳುಹಿಸುವುದನ್ನು ಮುಂದುವರೆಸಿದನು. ಅಂತಿಮವಾಗಿ ಒಟ್ಟು ₹3 ಲಕ್ಷ ಹಣ ದೋಚಿಚ್ಚಾರೆ.
ಎಚ್ಚರಿಕೆ ಕೊಟ್ಟ ಪೊಲೀಸರು
ಬೆಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹಗರಣಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಟಿಕೆಟ್ ಖರೀದಿಸಲು ಅಧಿಕಾರಿಗಳು ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಈ ಬಾರಿ ಐಪಿಎಲ್ನಲ್ಲೇ ಮಹತ್ವದ ಪಂದ್ಯ ಎನ್ನಲಾಗಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಗೆಲುವಿಗಾಗಿ ಕಾದಾಡಲಿವೆ.
18 ರನ್ ಅಂತರದಲ್ಲಿ ಅಥವಾ 18.1 ಓವರ್ ನಲ್ಲಿ ಸಿಎಸ್ಕೆ ತಂಡ ನೀಡುವ ಟಾರ್ಗೆಟ್ ಚೇಸ್ ಮಾಡಿದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ ಶನಿವಾರ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.












Click it and Unblock the Notifications