ನೆಲಮಂಗಲದಲ್ಲಿ ನೀರು ನುಗ್ಗಿ ಕೆಟ್ಟುನಿಂತ ಇಪ್ಪತ್ತೆಂಟು ಕಾರು
ಬೆಂಗಳೂರು, ಅಕ್ಟೋಬರ್ 12: ಅದೊಂದು ಕಾರು ಷೋ ರೂಮ್. ಮಾರುತಿ ಸುಜುಕಿ ಕಂಪನಿಯವರ ಆ ಷೋ ರೂಮ್ ನಲ್ಲಿ ಹನ್ನೊಂದು ಕಾರು ಒಂದೇ ಕಾರಣಕ್ಕಾಗಿ ರಿಪೇರಿಗೆಂದು ಬಂದಿವೆ. ಇದೆಂಥ ಸ್ಥಿತಿ ಅಂದರೆ, ಮಳೆಯಲ್ಲಿ ನೆನೆದ ಮಕ್ಕಳು ಶೀತದ ಕಾರಣಕ್ಕೆ ಏಕ ಕಾಲಕ್ಕೆ ಆಸ್ಪತ್ರೆಗೆ ಬಂದಂತೆ.
ಆಯಾ ಕಾರಿನ ಮಾಲೀಕರಿಗೆ ಕನಿಷ್ಠ ಇಪ್ಪತ್ತು ದಿನಗಳ ಕಾಲ ಹಿಂತಿರುಗಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚು ಕಡಿಮೆ ಆದರೆ ರಿಪೇರಿಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಕೆಲವರು ಇನ್ಷೂರೆನ್ಸ್ ಕ್ಲೇಮ್ ಮಾಡಿರುವುದರಿಂದ ಆ ಕಂಪನಿಯಿಂದ ಬಂದು, ಕಾರನ್ನು ನೋಡಿ, ಫೋಟೋ ತೆಗೆದುಕೊಂಡು ಹೋಗುವವರೆಗೆ ರಿಪೇರಿ ಆರಂಭಿಸಲು ಸಾಧ್ಯವಿಲ್ಲ.
ಹಾಗಂತ ಎಲ್ಲರೂ ಇನ್ಷೂರೆನ್ಸ್ ಕ್ಲೇಮ್ ಮಾಡಿಲ್ಲ. ಮೊನ್ನೆ ನೆಲಮಂಗಲದಲ್ಲಿ ಬಿದ್ದ ಮಳೆಗೆ ಹನ್ನೊಂದು ಕಾರುಗಳು ಹಾಳಾಗಿವೆ. ಮೂರು ಎರ್ಟಿಗಾ, ಒಂದು ಬ್ರೀಜಾ, ಎರಡು ಸ್ವಿಫ್ಟ್, ಆಲ್ಟೋ ಕೆ ಟೆನ್, ಆಲ್ಟೋ 800, ಇಕೋ ತಲಾ ಒಂದೊಂದು ರಿಪೇರಿಗಾಗಿ ಬಂದಿವೆ. ಒಂದು ಕಾರಿಗೆ ಕನಿಷ್ಠ ಮೂವತ್ತು ಸಾವಿರ ರುಪಾಯಿ ಖರ್ಚು ಬರಬಹುದು.

ಎಷ್ಟು ನೀರು ಹೋಗಿದೆ, ಅಷ್ಟು ಖರ್ಚು
ಅದೆಷ್ಟು ನೀರು ಹೋಗಿದೆ, ಏನೇನು ಹಾಳಾಗಿವೆ ಎಂಬುದನ್ನು ನೋಡಿದ ಮೇಲೇನೆ ಇಷ್ಟು ಖರ್ಚು ಅಂತ ಹೇಳೋಕೆ ಸಾಧ್ಯ. ಕೆಲವರು ಕಾರನ್ನ ಸ್ಟಾರ್ಟ್ ಮಾಡಿಬಿಡ್ತಾರೆ. ಹಾಗೆ ಮಾಡುವುದರಿಂದ ಇನ್ನೂ ಜಾಸ್ತಿ ಸಮಸ್ಯೆಯಾಗುತ್ತದೆ. ನೀರು ಹೋಗಿದೆ ಅಂತ ಗೊತ್ತಾದ ಕೂಡಲೇ ಮತ್ತೊಂದು ವಾಹನದ ಮೂಲಕವೇ ಷೋ ರೂಮಿಗೆ ತರಬೇಕು ಎಂದರು ಕಾರಿನ ರಿಪೇರಿ ವಿಚಾರದಲ್ಲಿ ತಜ್ಞರಾದ ಅನಿಲ್ ಕುಮಾರ್.

ಮೂವತ್ತರಿಂದ ಮೂವತ್ತೈದು ಸಾವಿರ ಖರ್ಚು
ದಸರಾಗೆ ಮುಂಚೆ ಒಂದು ಸಲ ಭಾರೀ ಮಳೆಯಾಗಿತ್ತು. ಆಗಲೂ ನೀರು ತುಂಬಿಕೊಂಡಿದ್ದ ಮೂರು ಕಾರನ್ನು ಷೋ ರೂಮಿಗೆ ತಂದಿದ್ದರು. ಒಂದೊಂದಕ್ಕೆ ಮೂವತ್ತರಿಂದ ಮೂವತ್ತೈದು ಸಾವಿರ ಖರ್ಚಾಗಿತ್ತು. ಮಳೆ ಬಂದಾಗ ನೀರು ಜಾಸ್ತಿ ನಿಲ್ಲುವ ಜಾಗದಲ್ಲಿ ಗಾಡಿ ಇರಬಾರದು. ಗಾಡಿಯ ಎತ್ತರದ ಅರ್ಧಕ್ಕಿಂತ ಹೆಚ್ಚಿನ ಭಾಗ ನೀರು ತುಂಬಿಕೊಂಡರೆ ಸಮಸ್ಯೆ ಖಂಡಿತ ಆಗುತ್ತದೆ ಎನ್ನುತ್ತಾರೆ ಅನಿಲ್.

ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು
ಇನ್ನು ಈ ರೀತಿಯ ಸಮಸ್ಯೆಯಾದಾಗ ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು. ಆದರೆ ಬಹಳ ಜನಕ್ಕೆ ಗೊತ್ತಿರಲ್ಲ. ಯಾವ ಬಿಡಿ ಭಾಗಕ್ಕೆ ಇನ್ಷೂರೆನ್ಸ್ ಕವರ್ ಆಗಿರುತ್ತದೆ ಮತ್ತು ಕ್ಲೇಮ್ ಮಾಡುವುದಕ್ಕೆ ಇರುವ ನಿಯಮಗಳೇನು ಅಂತ ತಿಳಿದುಕೊಟ್ಟು ಕೊಳ್ಳುವುದು ಒಳ್ಳೆಯದು. ಆಗುವ ಖರ್ಚಿನಲ್ಲಿ ಸ್ವಲ್ಪ ಭಾಗವಾದರೂ ಇನ್ಷೂರೆನ್ಸ್ ಕಂಪನಿಯವರಿಂದ ಬರುತ್ತದೆ ಎಂದು ಸಲಹೆ ನೀಡುತ್ತಾರೆ.

ಕಾರಿನಲ್ಲಿ ನೀರು ಹೋಗಿದೆ ಎಂದಾಕ್ಷಣ ಏನು ಮಾಡಬೇಕು?
ಕಾರಿನಲ್ಲಿ ನೀರು ಹೋಗಿದೆ ಅಂತ ಗೊತ್ತಾದ ತಕ್ಷಣ ಯಾವ ಕಾರಣಕ್ಕೂ ಸ್ಟಾರ್ಟ್ ಮಾಡಬಾರದು. ಹೀಗೆ ಮಾಡಿದರೆ ಎಂಜಿನ್, ವೈರಿಂಗ್ ಹಾಗೂ ಸೈಲೆನ್ಸರ್ ಕೂಡ ಹಾನಿಯಾಗುತ್ತವೆ. ಅಷ್ಟೇ ಅಲ್ಲ, ಹೊಗೆ ಬರುವುದು ಜಾಸ್ತಿಯಾಗುತ್ತದೆ. ರಿಪೇರಿ ಖರ್ಚು ತುಂಬ ಹೆಚ್ಚಾಗುತ್ತದೆ. ಮೊದಲನೆಯದಾಗಿ ನೀರು ಕಾರೊಳಗೆ ನುಗ್ಗದಂತೆ ಇರುವ ಜಾಗದಲ್ಲಿ ನಿಲ್ಲಿಸಬೇಕು. ಒಂದು ವೇಳೆ ನೀರು ಹೋಗಿಬಿಟ್ಟರೆ ಮತ್ತೊಂದು ವಾಹನದ ಸಹಾಯದಿಂದಲೇ ಷೋ ರೂಮ್ ಗೆ ತರಬೇಕು.
ಇನ್ಷೂರೆನ್ಸ್ ಕ್ಲೇಮ್ ಮಾಡಿಕೊಳ್ಳುವ ಹಾಗಿದ್ದರೆ ಅದಕ್ಕೆ ಇರುವ ನಿಯಮಾವಳಿಗಳನ್ನು ತಿಳಿದುಕೊಂಡಿರಬೇಕು.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ












Click it and Unblock the Notifications