Bengaluru Property: ಬೆಂಗಳೂರಿನ 13,600 ಆಸ್ತಿಗಳ ಆಸ್ತಿ ಮಾಲೀಕರಿಗೆ ಶಾಕ್ ಕೊಟ್ಟ ಜಿಬಿಎ: 318 ಕೋಟಿ ರೂ. ತೆರಿಗೆ ಸಂಗ್ರಹ
Bengaluru Property: ಬೆಂಗಳೂರಿನಲ್ಲಿ ತೆರಿಗೆ ವಂಚನೆ ಮಾಡುವವರ ಮೇಲೆ ಹದ್ದಿನ ಕಣ್ಣಿರಿಸುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದುವರಿಸಿದೆ. ಬೆಂಗಳೂರಿನಲ್ಲಿ ಇ - ಖಾತಾ ಪ್ರಕ್ರಿಯೆಯ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಜಿಪಿಎಸ್ ಪರಿಶೀಲನೆ ಮಾಡುವ ಮೂಲಕ ಶಾಕ್ ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ತಪ್ಪು ಮಾಹಿತಿಗಳನ್ನು ಕೊಟ್ಟಿದ್ದರು. ಇದನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಇದೀಗ ಎರಡನೇ ಹಂತದ ಆಸ್ತಿಗಳ ಪರಿಶೀಲನೆಯನ್ನು ಪ್ರಾರಂಭಿಸಲಾಗಿದೆ. ಪ್ರಾಪರ್ಟಿ ಜಿಪಿಎಸ್ ಪರಿಶೀಲನೆ - 2ನೇ ಹಂತದಲ್ಲಿ 13,600 ಆಸ್ತಿಗಳಿಗೆ ತೆರಿಗೆ ಮರುಪರಿಶೀಲನೆ ಮಾಡಲಾಗಿತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದರಿಂದ ಜಿಬಿಎಗೆ ಕೋಟ್ಯಾಂತರ ರೂಪಾಯಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ನಗರ ಪಾಲಿಕೆಗಳ ಜಿಪಿಎಸ್ ತಂಡ, ಜಿಬಿಎ ಐಟಿ ಮತ್ತು National Informatics Centre (NIC) ಸಹಯೋಗದಲ್ಲಿ ಮನೆ - ಮನೆಗೆ ಭೇಟಿ ನೀಡಿ ಆಸ್ತಿ ತೆರಿಗೆ ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಪ್ರಾಪರ್ಟಿ ಜಿಪಿಎಸ್ ಮತ್ತು ಡ್ರೋನ್ ಚಿತ್ರಗಳನ್ನು ಬಳಸಿ, ಬೆಂಗಳೂರಿನಲ್ಲಿ ಅಂದಾಜು 13,600 ಆಸ್ತಿಗಳ ಆಸ್ತಿ ಮಾಲೀಕರು ತೆರಿಗೆ ವಂಚನೆ ಮಾಡಿರುವುದು ಪತ್ತೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೆಲವು ಆಸ್ತಿ ಮಾಲೀಕರು ಕಳೆದ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸುತ್ತಿರುವುದರಿಂದ ಅಂದಾಜು 318 ಕೋಟಿ ರೂಪಾಯಿ ತೆರಿಗೆ ತಪ್ಪಿಸಿಕೊಂಡಿರುವುದು ಕಂಡುಬಂದಿದೆ. ಇದಕ್ಕಾಗಿ ಒಟ್ಟು 67,000 ನೋಟಿಸ್ಗಳನ್ನು (ಪ್ರತಿ ವರ್ಷದಂತೆ ಪ್ರತ್ಯೇಕ ನೋಟಿಸ್) ಜಾರಿ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೀಗ ಪ್ರಾಧಿಕಾರ ಹಾಗೂ ಪಾಲಿಕೆಯ ಅಧಿಕಾರಿಗಳು ಈ ರೀತಿಯ ಆಸ್ತಿ ತೆರಿಗೆ ವಂಚನೆ ಮಾಡಿರುವ ಆಸ್ತಿದಾರರಿಗೆ ಬಿಸಿ ಮುಟ್ಟಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಈ ರೀತಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿರುವ ಆಸ್ತಿದಾರರಿಗೆ ಶೋಕಾಸ್ ನೋಟಿಸ್ಗಳನ್ನು SMS ಮತ್ತು IVRS ಮೂಲಕ ಕಳುಹಿಸಲಾಗಿದೆ. ನೋಟಿಸ್ ಪಡೆದವರು 15 ದಿನಗಳೊಳಗೆ ಆನ್ಲೈನ್ ಮೂಲಕ ಉತ್ತರ ನೀಡಬಹುದು ಅಥವಾ ಮೇಲ್ಮನವಿಯನ್ನೂ ಸಲ್ಲಿಸಬಹುದು ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಮನವಿ ಸಲ್ಲಿಸಲು:
https://BBMPenyaya.karnataka.gov.in
ತೆರಿಗೆ ಪಾವತಿಸಲು:
https://BBMPtax.karnataka.gov.in
ನೋಟಿಸ್ ಮತ್ತು ಪಾವತಿ ಮಾಹಿತಿ
* ಸಂಬಂಧಿತ ನಾಗರಿಕರಿಗೆ ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಲಾಗಿದ್ದು, SMS ಹಾಗೂ IVRS ಮುಖಾಂತರವೂ ಮಾಹಿತಿ ಕಳುಹಿಸಲಾಗಿದೆ.
* ನೋಟಿಸ್ ಪಡೆದ ಆಸ್ತಿದಾರರು 15 ದಿನಗಳೊಳಗಾಗಿ ಆನ್ಲೈನ್ ಮೂಲಕ ಮೇಲ್ಮನವಿ ಸಲ್ಲಿಸಬಹುದು: https://BBMPenyaya.karnataka.gov.in
* ಅಥವಾ ತಕ್ಷಣವೇ ತೆರಿಗೆ ಪಾವತಿಸಬಹುದು: https://BBMPtax.karnataka.gov.in
ನೋಟಿಸ್ನ ಮಾದರಿ ಪ್ರತಿಯನ್ನು ಕೂಡ ಇದರೊಂದಿಗೆ ಲಗತ್ತಿಸಲಾಗಿದೆ. ಇದರಲ್ಲಿ ಪಾರದರ್ಶಕವಾಗಿ ತೆರಿಗೆ ತಪ್ಪು ಪಾವತಿ ಹೇಗೆ ಪತ್ತೆಯಾಯಿತು ಎಂಬುದು ಸ್ಪಷ್ಟವಾಗಿ ವಿವರಿಸಲಾಗಿದೆ. ನಾಗರಿಕರು ಅದೇ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅಪೀಲ್ ಸಲ್ಲಿಸುವ ಅವಕಾಶವೂ ಇದೆ.
ವ್ಯವಸ್ಥೆಯ ಕಾರ್ಯವಿಧಾನ (System Process):
1. ಜಿಪಿಎಸ್ ತಂಡದ ಮನೆ-ಮನೆ ಭೇಟಿ ವೇಳೆ ಮೊಬೈಲ್ ಆಪ್ನಲ್ಲಿ ಆಸ್ತಿ ತೆರಿಗೆ ಮಾಹಿತಿಯನ್ನು ಬಳಸಲಾಗುತ್ತದೆ.
2. ಪ್ರತಿಯೊಂದು ಆಸ್ತಿಯ ಜಿಪಿಎಸ್ ಮೂಲಕ ಸೆರೆ ಹಿಡಿಯುತ್ತಾರೆ (GPS Location), ಬಳಕೆ (ವಸತಿ/ವಾಣಿಜ್ಯ/ಮಿಶ್ರ ಇತ್ಯಾದಿ...) ಬಳಕೆಯ ವಿಸ್ತೀರ್ಣ ಮುಂತಾದ ಮಾಹಿತಿಗಳನ್ನು ದಾಖಲಿಸಲಾಗುತ್ತದೆ.
3. ಆಸ್ತಿಯ ಮಹಡಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಮೊಬೈಲ್ ಆ್ಯಪ್ ಮೂಲಕ ಬ್ಯಾಕ್ ಎಂಡ್ ಗೆ ಕಳುಹಿಸಲಾಗುತ್ತದೆ.
4. ಗುಣಮಟ್ಟ ಪರಿಶೀಲನಾ (QC) ತಂಡವು 100% ಪರಿಶೀಲನೆ ನಡೆಸುತ್ತದೆ. ತಿರಸ್ಕರಿಸಲಾದ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ.
5. QC ಅನುಮೋದಿತ ಮಾಹಿತಿಯನ್ನು ಡ್ರೋನ್ ಚಿತ್ರಗಳು ಹಾಗೂ ಡಿಜಿಟಲ್ ನಿರ್ಮಿತ ವಿಸ್ತೀರ್ಣದ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಘೋಷಿತ ವಿಸ್ತೀರ್ಣಕ್ಕಿಂತ ಹೆಚ್ಚಿನ ನಿರ್ಮಾಣ ಅಥವಾ ಘೋಷಿಸದ ವಾಣಿಜ್ಯ ಬಳಕೆ (ಭಾಗಶಃ ಅಥವಾ ಸಂಪೂರ್ಣ) ಕಂಡುಬಂದಲ್ಲಿ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಬಡ್ಡಿ ಮತ್ತು ದಂಡದೊಂದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತದೆ.
ಜಿಪಿಎಸ್ ತಂಡವು ಪ್ರತಿದಿನ ಸುಮಾರು 10,000 ಆಸ್ತಿಗಳನ್ನು ಭೇಟಿ ಮಾಡುತ್ತಿದೆ. ತೆರಿಗೆ ತಪ್ಪು ಪಾವತಿಸಿದ ಪ್ರತಿಯೊಬ್ಬರೂ ಶೀಘ್ರದಲ್ಲೇ ಹೊಣೆಗಾರರಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು(ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications