House Rent: ಬಾಡಿಗೆ ಮನೆ ಪಡೆಯುವವರಿಗೆ ಎದುರಾಗಿದೆ ದೊಡ್ಡ ಸಮಸ್ಯೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಪಡೆಯುವವರಿಗೆ ಹೊಸ ಸಮಸ್ಯೆ ಎದುರಾಗಿದೆ. ಈಗಾಗಲೇ ಬಾಡಿಗೆ ದರವು ಗಗನಕ್ಕೇರಿದೆ. ಹೀಗಾಗಿ ನಗರದಲ್ಲಿ ಬಾಡಿಗೆ ಮನೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ. ಸದ್ಯ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಿಸಿನೆಸ್ ಜೋರಾಗಿದ್ದು, ಬಾಡಿಗೆದಾರರ ಜೇಬು ಸುಡುತ್ತಿದೆ. ಸಾಮಾನ್ಯವಾಗಿ ಬಾಡಿಗೆ ಮನೆ ಪಡೆಯುವಾಗ ಮಾಲೀಕರ ಷರತ್ತುಗಳನ್ನು ಹಾಕುತ್ತಾರೆ. ಈ ಪೈಕಿ ಠೇವಣಿ ಕೂಡ ಒಂದು. ಇದೀಗ ಲಕ್ಷಗಟ್ಟಲೆ ಹಣವನ್ನು ಮಾಲೀಕರು ಮುಂಗಡವಾಗಿ ಕೇಳಿರುತ್ತಿರುವುದು ಗೊತ್ತೇ ಇದೆ. ಆದರೆ 2 ಬಿಹೆಚ್ಕೆ ಮನೆಗೆ ಮಾಲೀಕ ಇಟ್ಟಿರುವ ಡಿಮ್ಯಾಂಡ್ ನೋಡಿ ಬಾಡಿಗೆದಾರರು ಬೆಚ್ಚಿಬಿದ್ದಿದ್ದಾರೆ.
ಹೌದು ಬೆಂಗಳೂರಿನ ದುಬಾರಿ ಪ್ರದೇಶಗಳಲ್ಲಿ ಒಂದಾಗಿರುವ ಫ್ರೇಜರ್ ಟೌನ್ ಪ್ರದೇಶದಲ್ಲಿ 2 BHK ಫ್ಲ್ಯಾಟ್ವೊಂದಕ್ಕೆ ನೀಡಿರುವ ಜಾಹೀರಾತಿನಲ್ಲಿ ಭದ್ರತಾ ಠೇವಣಿ ನೋಡಿ ಜನ ಶಾಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿವೆ. 2 ಬಿಹೆಚ್ಕೆ ಮನೆಗೆ ಬರೋಬ್ಬರಿ 30 ಲಕ್ಷ ರೂಪಾಯಿ ಅಡ್ವಾನ್ಸ್ ಕೊಡುವಂತೆ ಜಾಹೀರಾತು ನೀಡಲಾಗಿದೆ. ಇದನ್ನು ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ಸದ್ಯದ ಬಾಡಿಗೆ ಮಾರುಕಟ್ಟೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

"ಬೆಂಗಳೂರಿನ ಮನೆ ಮಾಲೀಕರು ಕೈ ತಪ್ಪುತ್ತಿದ್ದಾರೆ" ಎಂದು ರೆಡ್ಡಿಟ್ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗಿದ್ದು, ಹೊಸ ಕಟ್ಟಡದಲ್ಲಿರುವ ಮನೆ ಬಾಡಿಗೆ 20,000 ರೂಪಾಯಿ ಮತ್ತು 30 ಲಕ್ಷ ರೂಪಾಯಿ ಠೇವಣಿ ಎಂದು ಉಲ್ಲೇಖಿಸಿರುವ ಜಾಹೀರಾತಿನ ಸ್ಕ್ರೀನ್ಶಾಟ್ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪೋಸ್ಟ್ನಲ್ಲಿ ಡಿಸೈನರ್ ಇಂಟೀರಿಯರ್ಗಳು, ಪ್ರೀಮಿಯಂ ಹಾಸಿಗೆ, ಮಾಡ್ಯುಲರ್ ಕಿಚನ್ ಉಪಕರಣ, ಇನ್-ಹೌಸ್ ಸೆಕ್ಯುರಿಟಿ ಮತ್ತು ಕಾರ್ ಪಾರ್ಕ್ ಹೊಂದಿರುವ 2 ಬಿಹೆಚ್ಕೆ ಮನೆ ಎಂದು ಉಲ್ಲೇಖಿಸಲಾಗಿದೆ.
ಈ ಠೇವಣಿ ಮೊತ್ತ ನೋಡಿ ಬೆಂಗಳೂರಿನ ನಿವಾಸಿಗಳು ಶಾಕ್ ಆಗಿದ್ದಾರೆ. 30 ಲಕ್ಷ ರೂ. ಠೇವಣಿ ಕಟ್ಟುವ ಬದಲು ನೀವು ಬಿಲ್ಡರ್ನ ಫ್ಲಾಟ್ ಖರೀದಿಸಿ ಬಾಡಿಗೆಗೆ ಬದಲಾಗಿ ಇಎಂಐ ಪಾವತಿಸಬಹುದು. 30 ಲಕ್ಷ ರೂಪಾಯಿ ಠೇವಣಿಯೊಂದಿಗೆ ಯಾರು ಹೋಗುತ್ತಾರೆ ಎಂದು ನಮಗೆ ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಈಗ ಬೆಂಗಳೂರಿನಲ್ಲಿ ಇದೇ ದೊಡ್ಡ ದಂಧೆ, ಬೆಂಗಳೂರಿನ ಮನೆ ಮಾಲೀಕರು ವಂಚಕರಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪಿಜಿಗೆ ಹೋಗುವುದು ಬೆಸ್ಟ್
ಕೆಲವರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿ, ನೀವು ಒಂಟಿಯಾಗಿದ್ದರೆ ಹಾಗೂ ಉದ್ಯೋಗದಲ್ಲಿದ್ದರೆ ಇಂತಹ ವಂಚನೆಗೆ ಒಳಗಾಗುವ ಬದಲು ಒಳ್ಳೆಯ ಸೌಕರ್ಯ ಇರುವ ಪಿಜಿಗಳಿಗೆ ಹೋಗಿ. ನಿಮ್ಮ ಹಣ ಉಳಿಯುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇದೇ ರೀತಿಯ ದಂಧೆ ನಡೆಯುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ











Click it and Unblock the Notifications