Bengaluru Mysuru Expressway: ಕಡಿಮೆ ದೂರದ ಸಂಚಾರಗಳಿಗೆ ಟೋಲ್ ದರಗಳ ಮರುನಿಗದಿ- ಇಲ್ಲಿದೆ ಮಾಹಿತಿ
Bengaluru Mysuru Expressway: ಕಡಿಮೆ ದೂರದ ಸಂಚಾರಗಳಿಗೆ ಟೋಲ್ ದರಗಳ ಮರುನಿಗದಿ- ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್ 15: ಭಾನುವಾರ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 'ಹೆಚ್ಚಿನ ಟೋಲ್ ದರ' ವಿರುದ್ಧ ಪ್ರತಿಭಟನೆಗಳು ನಡೆದಿವೆ. 119 ಕಿಲೋಮೀಟರ್ ಉದ್ದದ ಹೆದ್ದಾರಿಯಲ್ಲಿ ಕಡಿಮೆ ದೂರ ಪ್ರಯಾಣಿಸುವವರಿಗೆ ಹೆಚ್ಚು ತರ್ಕಬದ್ಧ ಟೋಲ್ ಅನ್ನು ನಿಗದಿಪಡಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೇಳಿದೆ.
ಎಕ್ಸ್ಪ್ರೆಸ್ವೇಯಲ್ಲಿ ಕಡಿಮೆ ದೂರ ಪ್ರಯಾಣಿಸುವವರಿಗೆ ಹೆಚ್ಚು ತರ್ಕಬದ್ಧ ಟೋಲ್ ಮೊತ್ತವನ್ನು ನಿರ್ಧರಿಸಲು ಅಧಿಕಾರಿಗಳು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ ಎಂದು ಬೆಂಗಳೂರು-ಮೈಸೂರು ವಿಭಾಗದ ಎನ್ಎಚ್ಎಐ ವ್ಯವಸ್ಥಾಪಕ ಶ್ರೀನಿವಾಸ್ ವಿಎ 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.

ಮಂಗಳವಾರ ಟೋಲ್ ಸಂಗ್ರಹ ಆರಂಭವಾದ ತಕ್ಷಣ ಶೇಷಗಿರಿಹಳ್ಳಿ ಮತ್ತು ಕಣಿಮಿಣಿಕೆ ಟೋಲ್ ಪ್ಲಾಜಾ ಸೇರಿದಂತೆ ಎಕ್ಸ್ಪ್ರೆಸ್ವೇಯ ಹಲವು ಸ್ಥಳಗಳಲ್ಲಿ ವಿರೋಧ ಪಕ್ಷಗಳು ಮತ್ತು ಕನ್ನಡ ಪರ ಹೋರಾಟಗಾರರು ಭಾರಿ ಪ್ರತಿಭಟನೆ ಕೈಗೊಂಡರು. ಅನೇಕ ಪ್ರಯಾಣಿಕರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದು ಹೈಸ್ಪೀಡ್ ಕಾರಿಡಾರ್ನಲ್ಲಿ ಅವ್ಯವಸ್ಥೆ ಮತ್ತು ದಟ್ಟಣೆಗೆ ಕಾರಣವಾಯಿತು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಎಕ್ಸ್ಪ್ರೆಸ್ವೇಯಲ್ಲಿನ ಟೋಲ್ ಪ್ಲಾಜಾವನ್ನು ನಾಶಪಡಿಸುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದರು. ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
Karnataka | Congress stage protest at Sheshagirihalli toll plaza in Ramnagar district over toll levied on motorists using the Mysuru-Bengaluru expressway pic.twitter.com/NPdgBKbMUs
— ANI (@ANI) March 14, 2023
ಎನ್ಎಚ್ಎಐ ಅಧಿಸೂಚನೆಯ ಪ್ರಕಾರ, ಬೆಂಗಳೂರು- ನಿಡಘಟ್ಟ ವಿಭಾಗದಲ್ಲಿ ಒಂದೇ ಪ್ರಯಾಣದ ಟೋಲ್ ದರವು ವಾಹನದ ಸಂಚಾರವನ್ನು ಅವಲಂಬಿಸಿ ರೂ 135 ರಿಂದ ರೂ 880 ವರೆಗೆ ಇರುತ್ತದೆ. ಬೆಂಗಳೂರು- ನಿಡಘಟ್ಟ ವಿಭಾಗದಲ್ಲಿ ಒಂದೇ ಟ್ರಿಪ್ಗೆ ಕಾರು ಮಾಲೀಕರು 135 ರೂಪಾಯಿ ಪಾವತಿಸಬೇಕಾಗುತ್ತದೆ. ಒಂದು ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ, ಮಿನಿ ಬಸ್ಗೆ ಟೋಲ್ ದರ 220 ರೂ ಮತ್ತು ಬಸ್ಗಳಿಗೆ 460 ರೂ (ಏಕ ಪ್ರಯಾಣ) ಇರುತ್ತದೆ.

ಈ ದರಗಳು ವಿಪರೀತವಾಗಿದ್ದು, ಟೋಲ್ ಪಾವತಿಸಲು ಹಲವಾರು ಪ್ರಯಾಣಿಕರು ನಿರಾಕರಿಸಿದ್ದಾರೆ. ಫಾಸ್ಟ್ಯಾಗ್ ಇಲ್ಲದವರು ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗಿತ್ತು.
ರಸ್ತೆ ನಿರ್ಮಿಸಿದ್ದು ಜನರ ಹಣದಲ್ಲೇ, ಓಡಾಡುವ ವಾಹನವೂ ಜನರದ್ದೇ, ಟೋಲ್ ಹಣ ನೀಡಬೇಕಾದವರೂ ಜನರೇ..
— Karnataka Congress (@INCKarnataka) March 14, 2023
ಪ್ರಚಾರ ಮಾತ್ರ ಕೈಬೀಸಿ ಹೋಗುವ ಮೋದಿಯದ್ದು!
ಬೆಲೆ ಏರಿಕೆಯಲ್ಲಿ ಬವಣೆಯಲ್ಲಿ ಟೋಲ್ ಬರೆ ಹಾಕಿದ ಬಿಜೆಪಿಯ ಹೆದ್ದಾರಿ ದರೋಡೆ ವಿರುದ್ಧ ನಿಜವಾದ ಜನಧ್ವನಿ ಇದು..
ಈ ಜನಕ್ರೋಶಕ್ಕೆ ಬಿಜೆಪಿ ಭಸ್ಮವಾಗುವುದು ನಿಶ್ಚಿತ. pic.twitter.com/lhF4fLkkCf
118 ಕಿಮೀ ಪ್ರವೇಶ-ನಿಯಂತ್ರಿತ ಹೆದ್ದಾರಿಯು ಆರು-ಪಥದ ವಿಸ್ತರಣೆಯಾಗಿದ್ದು, ಎಕ್ಸ್ಪ್ರೆಸ್ವೇಯ ಎರಡೂ ಬದಿಗಳಲ್ಲಿ ಎರಡು- ಪಥದ ಸರ್ವಿಸ್ ರಸ್ತೆಗಳನ್ನು ಹೊಂದಿದೆ. ಇದನ್ನು 10-ಲೇನ್ ಕಾರಿಡಾರ್ ಆಗಿ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಮುಖ ಭಾರತಮಾಲಾ ಪರಿಯೋಜನಾ (BMP) ಭಾಗವಾಗಿ ನಿರ್ಮಿಸಲಾದ ಎಕ್ಸ್ಪ್ರೆಸ್ವೇಯಲ್ಲಿ ಬೈಕ್ಗಳು, ಆಟೋಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳನ್ನು ಅನುಮತಿಸಲಾಗುವುದಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ, 'ರಸ್ತೆ ನಿರ್ಮಿಸಿದ್ದು ಜನರ ಹಣದಲ್ಲೇ, ಓಡಾಡುವ ವಾಹನವೂ ಜನರದ್ದೇ, ಟೋಲ್ ಹಣ ನೀಡಬೇಕಾದವರೂ ಜನರೇ. ಪ್ರಚಾರ ಮಾತ್ರ ಕೈಬೀಸಿ ಹೋಗುವ ಮೋದಿಯದ್ದು. ಬೆಲೆ ಏರಿಕೆಯಲ್ಲಿ ಬವಣೆಯಲ್ಲಿ ಟೋಲ್ ಬರೆ ಹಾಕಿದ ಬಿಜೆಪಿಯ ಹೆದ್ದಾರಿ ದರೋಡೆ ವಿರುದ್ಧ ನಿಜವಾದ ಜನಧ್ವನಿ ಇದು. ಈ ಜನಕ್ರೋಶಕ್ಕೆ ಬಿಜೆಪಿ ಭಸ್ಮವಾಗುವುದು ನಿಶ್ಚಿತ' ಎಂದು ಹೇಳಿದೆ. ಇದರೊಂದಿಗೆ ಜನರು ಪ್ರತಿಭಟಿಸುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿದೆ.












Click it and Unblock the Notifications