Bengaluru Mysuru Expressway: ಡಿಕೆಶಿಗೂ ಟೋಲ್ ಬಿಸಿ- ಶುಲ್ಕದ ರಶೀದಿ ಹಂಚಿಕೊಂಡ ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಮೊದಲ ದಿನವೇ ಟೋಲ್ ಸಂಗ್ರಹಿಸಲಾಗುತ್ತಿದೆ. ಎಕ್ಸ್ಪ್ರೆಸ್ವೇ ಬಳಸುವ ವಾಹನ ಚಾಲಕರಿಗೆ 'ಹೆಚ್ಚಿನ ಟೋಲ್' ವಿಧಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು, ಮಾರ್ಚ್ 14: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಮೊದಲ ದಿನವೇ ಟೋಲ್ ಸಂಗ್ರಹಿಸಲಾಗುತ್ತಿದೆ. ಎಕ್ಸ್ಪ್ರೆಸ್ವೇ ಬಳಸುವ ವಾಹನ ಚಾಲಕರಿಗೆ 'ಹೆಚ್ಚಿನ ಟೋಲ್' ವಿಧಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಣಿಮಿಣಿಕೆ ಟೋಲ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇಂದು ಬೆಳಗ್ಗೆ 8 ಗಂಟೆಯಿಂದ ಎಕ್ಸ್ಪ್ರೆಸ್ವೇಯ ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಿದೆ.

ಅಧಿಸೂಚನೆಯ ಪ್ರಕಾರ, ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ ಒಂದೇ ಪ್ರಯಾಣದ ಟೋಲ್ ದರವು ವಾಹನದ ಸಂಚಾರವನ್ನು ಅವಲಂಬಿಸಿ ರೂ 135 ರಿಂದ ರೂ 880 ರ ವರೆಗೆ ಇರಲಿದೆ.
ವಾಹನಗಳನ್ನು ಆರು ವಿಧಗಳಾಗಿ ವಿಂಗಡಿಸಲಾಗಿದೆ. ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ ಒಂದೇ ಟ್ರಿಪ್ಗೆ ಕಾರು ಮಾಲೀಕರು 135 ರೂಪಾಯಿ ಪಾವತಿಸಬೇಕಾಗುತ್ತದೆ. ಒಂದು ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ ಶುಲ್ಕ ನೀಡಬೇಕಾಗುತ್ತದೆ. ಮಿನಿ ಬಸ್ಗೆ ಟೋಲ್ ದರ 220 ರೂ ಮತ್ತು ಬಸ್ಗಳಿಗೆ 460 ರೂ (ಏಕ ಪ್ರಯಾಣ) ಇರುತ್ತದೆ.
ನಿಡಘಟ್ಟದಿಂದ ಮೈಸೂರು ನಡುವಿನ ಎರಡನೇ ಪ್ಯಾಕೇಜ್ನ ಕಾಮಗಾರಿ ಪೂರ್ಣಗೊಂಡ ನಂತರ, ಟೋಲ್ಗಳ ದರವನ್ನು NHAI ಪರಿಷ್ಕರಿಸುವ ಸಾಧ್ಯತೆಯಿದೆ. ಬೂದನೂರು ಮುಂತಾದ ಕಡೆಗಳಲ್ಲಿ ಇನ್ನೂ ಕೆಲವು ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ.

ಕೇಂದ್ರ ಸರ್ಕಾರದ ಪ್ರಮುಖ ಭಾರತಮಾಲಾ ಪರಿಯೋಜನಾ (ಬಿಎಂಪಿ) ಭಾಗವಾಗಿ ನಿರ್ಮಿಸಲಾದ 118 ಕಿಮೀ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.
9000 ಕೋಟಿ ರೂಪಾಯಿ ವೆಚ್ಚದ ಈ ಕಾರಿಡಾರ್ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಕಡಿತಗೊಳಿಸುತ್ತದೆ.
ಕಾರಿಡಾರ್ ಆರು-ಪಥದ ವಿಸ್ತರಣೆಯಾಗಿದ್ದು, ಎಕ್ಸ್ಪ್ರೆಸ್ವೇಯ ಎರಡೂ ಬದಿಗಳಲ್ಲಿ ಎರಡು-ಪಥದ ಸೇವಾ ರಸ್ತೆಗಳನ್ನು ಹೊಂದಿದೆ, ಇದನ್ನು 10-ಲೇನ್ ಕಾರಿಡಾರ್ ಮಾಡುತ್ತದೆ ಮತ್ತು 69 ಬಸ್ ಬೇಗಳು, 49 ಅಂಡರ್ಪಾಸ್ಗಳು, 13 ಮೇಲ್ಸೇತುವೆಗಳು ಮತ್ತು ಎರಡೂ ಬದಿಗಳಲ್ಲಿ ಫೆನ್ಸಿಂಗ್ ಉಚಿತವಾಗಿದೆ. ಇದು ಅನಿರ್ಬಂಧಿತ ಪ್ರಯಾಣ ಸೇವೆಯನ್ನು ನೀಡುತ್ತದೆ.
ಟೋಲ್ ಕುರಿತು ಡಿಕೆ ಶಿವಕುಮಾರ್ ಟ್ವೀಟ್
'ಬೆಂಗಳೂರು - ಮೈಸೂರು ಟೋಲ್ ಕೇಂದ್ರದ ಬಳಿ ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಬೆಳಗಿನಿಂದ ಟಿವಿ, ಪತ್ರಿಕೆಯಲ್ಲಿ ನೋಡಿದ್ದೆ. ಇಂದು ಬಿಡದಿಯಿಂದ ರಾಮನಗರಕ್ಕೆ ತೆರಳುವ ವೇಳೆ ನನಗೂ ಅನುಭವಕ್ಕೂ ಬಂತು. ಬಿಡದಿಯಿಂದ ರಾಮನಗರಕ್ಕೆ ತೆರಳಲು ₹135 ಟೋಲ್ ಕೊಡಬೇಕಂತೆ, ಫಾಸ್ಟ್ಟ್ಯಾಗ್ ಸ್ಕ್ಯಾನರ್ ತೊಂದರೆ ನೆಪ ಹೇಳಿ ₹270 ವಸೂಲಿ ಮಾಡಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆ ಶುಲ್ಕ ದರದ ರಶೀದಿಯನ್ನೂ ಹಂಚಿಕೊಂಡಿದ್ದಾರೆ.
ಬೆಂಗಳೂರು - ಮೈಸೂರು ಟೋಲ್ ಕೇಂದ್ರದ ಬಳಿ ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಬೆಳಗಿನಿಂದ ಟಿವಿ, ಪತ್ರಿಕೆಯಲ್ಲಿ ನೋಡಿದ್ದೆ. ಇಂದು ಬಿಡದಿಯಿಂದ ರಾಮನಗರಕ್ಕೆ ತೆರಳುವ ವೇಳೆ ನನಗೂ ಅನುಭವಕ್ಕೂ ಬಂತು. ಬಿಡದಿಯಿಂದ ರಾಮನಗರಕ್ಕೆ ತೆರಳಲು ₹135 ಟೋಲ್ ಕೊಡಬೇಕಂತೆ, ಫಾಸ್ಟ್ಟ್ಯಾಗ್ ಸ್ಕ್ಯಾನರ್ ತೊಂದರೆ ನೆಪ ಹೇಳಿ ₹270 ವಸೂಲಿ ಮಾಡಿದ್ದಾರೆ. pic.twitter.com/65dLixTv1d
— DK Shivakumar (@DKShivakumar) March 14, 2023
ವಿಡಿಯೊ ಹಂಚಿಕೊಂಡ ಕಾಂಗ್ರೆಸ್
'ಮಾತೆತ್ತಿದರೆ ಫೇಸ್ಬುಕ್ ಲೈವ್ ಬಂದು ಹೆದ್ದಾರಿ ನಾನೇ ಮಾಡಿದೆ ಎನ್ನುವ ಮಾನ್ಯ ಪ್ರತಾಪ ಸಿಂಹ ಅವರೇ, ಬನ್ನಿ ಜನರ ಈ ಮಾತುಗಳನ್ನೂ ಒಮ್ಮೆ ಫೇಸ್ಬುಕ್ ಲೈವ್ ಮಾಡಿಬಿಡಿ. ಸರ್ವಿಸ್ ರಸ್ತೆಗಳನ್ನು ನಿರ್ಮಿಸದೆ ಟೋಲ್ ಹೆಸರಲ್ಲಿ ಜನರ ಸುಲಿಗೆಗೆ ಇಳಿದ ಸರ್ಕಾರದ ವಿರುದ್ಧ ಜನರ ಹಿಡಿಶಾಪ ಬಿಜೆಪಿಗೆ ಮಾರಕವಾಗಿ ಪರಿಣಮಿಸಲಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾತೆತ್ತಿದರೆ ಫೇಸ್ಬುಕ್ ಲೈವ್ ಬಂದು ಹೆದ್ದಾರಿ ನಾನೇ ಮಾಡಿದೆ ಎನ್ನುವ
— Karnataka Congress (@INCKarnataka) March 14, 2023
ಮಾನ್ಯ @mepratap ಅವರೇ, ಬನ್ನಿ ಜನರ ಈ ಮಾತುಗಳನ್ನೂ ಒಮ್ಮೆ ಫೇಸ್ಬುಕ್ ಲೈವ್ ಮಾಡಿಬಿಡಿ!
ಸರ್ವಿಸ್ ರಸ್ತೆಗಳನ್ನು ನಿರ್ಮಿಸದೆ ಟೋಲ್ ಹೆಸರಲ್ಲಿ ಜನರ ಸುಲಿಗೆಗೆ ಇಳಿದ ಸರ್ಕಾರದ ವಿರುದ್ಧ ಜನರ ಹಿಡಿಶಾಪ @BJP4Karnataka ಗೆ ಮಾರಕವಾಗಿ ಪರಿಣಮಿಸಲಿದೆ. pic.twitter.com/1h8uzIDM31
'ಮೋದಿ ಕೈಬೀಸಿ ಹೋದರೆಂದರೆ ಜನತೆಗೆ ಬರೆ ಎಳೆದು ಹೋದರೆಂದೇ ಅರ್ಥ ಎಂದು ನಾವು ಹಿಂದೆಯೇ ಹೇಳಿದ್ದೆವು. ಅಂತೆಯೇ ಮೋದಿ ಕೈಬೀಸಿ ಹೋಗಿದ್ದೆ ತಡ ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸದೆ ಏಕಾಏಕಿ ಟೋಲ್ ಸುಲಿಗೆಗೆ ಇಳಿಯಲಾಗಿದೆ. ಸುಲಿಗೆಯನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವುದು ಬಿಜೆಪಿಗೆ ಮಾತ್ರ ಸಾದ್ಯವೇನೋ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications