ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ
ಬೆಂಗಳೂರು, ಫೆಬ್ರವರಿ 03: " ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ಹತ್ತು ಪಥಗಳ ನಿರ್ಮಾಣ ಕಾರ್ಯ ಫೆಬ್ರವರಿ 2022ರಲ್ಲಿ ಮುಕ್ತಾಯವಾಗಲಿದೆ" ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಈ ಕುರಿತು ಉತ್ತರ ನೀಡಿದರು. "6 ಪಥದ ಹೆದ್ದಾರಿಯ ಜೊತೆಗೆ ಎರಡೂ ಕಡೆ ಎರಡು ಪಥದ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ" ಎಂದರು.
ಧಾರವಾಡದಲ್ಲಿ ರಸ್ತೆ ಅಪಘಾತ; ವರದಿ ಕೇಳಿದ ಸುಪ್ರೀಂಕೋರ್ಟ್
"ಮೊದಲ ಪ್ಯಾಕೇಜ್ನಲ್ಲಿ ಬೆಂಗಳೂರು-ನಿಢಘಟ್ಟ ತನಕ ಕಾಮಗಾರಿ ನಡೆಯಲಿದೆ. 2190 ಕೋಟಿ ಪ್ಯಾಕೇಜ್ನಲ್ಲಿ ಶೇ 67.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ" ಎಂದು ಸಚಿವರು ವಿವರಣೆ ನೀಡಿದರು.
ಬೆಂಗಳೂರು, ಮಂಗಳೂರು ನಡುವೆ ಚತುಷ್ಪಥ ರಸ್ತೆ,ಹೊಸ ಟೆಂಡರ್
"ಎರಡನೇ ಪ್ಯಾಕೇಜ್ನಲ್ಲಿ 2283 ಕೋಟಿ ರೂ.ಗಳಲ್ಲಿ ನಿಢಘಟ್ಟ-ಮೈಸೂರು ನಡುವೆ ಕಾಮಗಾರಿ ನಡೆಯಲಿದೆ. ಈ ಪ್ಯಾಕೇಜ್ನಲ್ಲಿ ಶೇ 50.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಫೆಬ್ರವರಿ 2022ಕ್ಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದರು.
ಕೇಂದ್ರ ಬಜೆಟ್ 2021; 11 ಸಾವಿರ ಕಿ. ಮೀ. ರಾಷ್ಟ್ರೀಯ ಹೆದ್ದಾರಿ
Recommended Video
"ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಎರಡೂ ಪ್ಯಾಕೇಜ್ಗಳ ಕಾಲಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ" ಗೋವಿಂದ ಕಾರಜೋಳ ವಿವರಿಸಿದರು.