ಪಾಕ್ ಪ್ರಜೆಗಳಿಗೆ ಆಧಾರ್: ಬೆಂಗಳೂರಿನ ವೈದ್ಯೆ, ಡಿ ಗ್ರೂಪ್ ನೌಕರ ಅಮಾನತು
ಬೆಂಗಳೂರು, ಮೇ 30 : ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಕಾರ್ಡ್ ನೀಡಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮಮ್ಮ ಹಾಗೂ ಡಿ ಗ್ರೂಪ್ ನೌಕರ ಟಿ.ಎಚ್. ರವಿಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಇಬ್ಬರನ್ನೂ ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್ ಯಾದವ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಸಿ.ಎಸ್.ನಾಗಲಕ್ಷ್ಮಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. [ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಮಾಡಿಸಲು ನೆರವಾದ ಬೆಂಗಳೂರಿನ ವೈದ್ಯೆ!]
ಆಧಾರ್ ಕಾರ್ಡ್ ಮಾಡಿಸಲು ತಾನು ಅವರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ, ಅವರಿಂದ ಹಣವನ್ನೂ ಪಡೆದಿಲ್ಲ ಎಂದು ಸಮರ್ಥಿಸಿಕೊಂಡಿರುವ ಡಾ.ನಾಗಲಕ್ಷ್ಮಮ್ಮನವರ ವಿಚಾರಣೆಯ ನಂತರ ಸತ್ಯ ಹೊರಬರಲಿದೆ.
Comments
English summary
A deputy chief medical officer of Jayanagar government hospital, Dr. Nagalakshmamma and D group employee T.H. Ravikumar has been suspended from service in collection with helping pakistan nationals to get aadhaar card.
Story first published: Tuesday, May 30, 2017, 22:33 [IST]