ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಮಾಡಿಸಲು ನೆರವಾದ ಬೆಂಗಳೂರಿನ ವೈದ್ಯೆ!
ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಸಲು ಸಹಾಯ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿಯ ವೈದ್ಯೆಯೊಬ್ಬರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಮೇ 30: ಪಾಕಿಸ್ತಾನಿ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿಸಲು ಸಹಾಯ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿಯ ವೈದ್ಯೆಯೊಬ್ಬರನ್ನು ಬನಶಂಕರಿ ಪೊಲೀಸರು ನಿನ್ನೆ (ಮೇ 29) ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಮೂವರು ಪಾಕಿಸ್ತಾನಿಯರಿಗೆ ಆಧಾರ್ ಕಾರ್ಡ್ ಮಾಡಿಸಲು ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಪ ಮುಖ್ಯ ವೈದ್ಯಕೀಯಾಧಿಕಾರಿಯಾಗಿರುವ ಡಾ.ಸಿ.ಎಸ್.ನಾಗಲಕ್ಷ್ಮಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ಕಾರು ಕಳವಿನ ಕೇಸಿನ ಬೆನ್ನಟ್ಟಿದರೆ ಸಿಕ್ಕಿದ್ದು ಇಂಡೋ-ಪಾಕ್ ಪ್ರೇಮ ಕಥೆ]
ಆಧಾರ್ ಕಾರ್ಡ್ ಮಾಡಿಸಲು ತಾನು ಅವರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ, ಅವರಿಂದ ಹಣವನ್ನೂ ಪಡೆದಿಲ್ಲ ಎಂದು ಸಮರ್ಥಿಸಿಕೊಂಡಿರುವ ಡಾ.ನಾಗಲಕ್ಷ್ಮಮ್ಮನವರ ವಿಚಾರಣೆಯ ನಂತರ ಸತ್ಯ ಹೊರಬರಲಿದೆ.
Comments
English summary
A deputy chief medical officer of Jayanagar government hospital, Dr. Nagalakshmamma has arrested by Banashankari police in Bengaluru, in collection with helping pakistan nationals to get aadhaar card.