ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಬೆಂಗಳೂರಿನ ಕಥೆಗಳು
ಬೆಂಗಳೂರು ಯಾರದೇ ಕಲ್ಪನೆಗೆ, ಹಿಡಿತಕ್ಕೆ, ಮಿಡಿತಕ್ಕೆ ಸಿಗಲಾರದಂತೆ ಅಗಾಧವಾಗಿ ಬೆಳೆಯುತ್ತಿದೆ. ಸಮುದ್ರದ ಆಳಅಗಲಗಳನ್ನು ಅಳೆಯಲು ಸಾಧ್ಯ. ಆದರೆ, ಬೆಂಗಳೂರನ್ನು ಅಳತೆಗೋಲಿನಲ್ಲಿ ಹಿಡಿದು ಇದು ಹೀಗೇ, ಇಷ್ಟೇ ಅಸಾಧ್ಯ.
ಬೆಂಗಳೂರಿನ ಮಿನಿಸ್ಟರುಗಳಿಗೆ ಕಾರ್ಪೋರೇಟರುಗಳು ಹೇಗೆ ಹಿಡಿತಕ್ಕೆ ಸಿಗುವುದಿಲ್ಲವೋ, ಬೆಂಗಳೂರಿನ ಜನತೆ ಕೂಡ ಕಾರ್ಪೋರೇಟರುಗಳಿಗಾಗಲಿ, ಮಂತ್ರಿಗಳಿಗಾಗಲಿ, ಪೊಲೀಸರಿಗಾಗಲಿ, ಬಿಪ್ಯಾಕ್ ನಂಥ ಶಿಸ್ತಿನ ಸಿಪಾಯಿಗಳಿಗಾಗಲಿ ಹಿಡಿತಕ್ಕೆ ಸಿಗುವುದಿಲ್ಲ.

ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಬಿಬಿಎಂಪಿ ಮೊದಲು ಅಭಿವೃದ್ಧಿಪಡಿಸಲಿ ಎಂದು ಪೊಲೀಸ್ ಇಲಾಖೆ ಹೇಳುವುದು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಲಿ ಎಂದು ಬಿಬಿಎಂಪಿಯವರು ಹೇಳುವುದು... ಅವರು ಇವರನ್ನು ತೆಗಳುವುದು, ಇವರು ಅವರನ್ನು ಹೀಗಳೆಯುವುದು...
ಇದೆಲ್ಲ ಇದ್ದಿದ್ದೆ. ಆದರೆ, ಬೆಂಗಳೂರಿನಲ್ಲಿ ಹಲವಾರು ಕಥೆಗಳಿವೆ. ಇವು ಶ್ರೀಸಾಮಾನ್ಯರ ಕಥೆಗಳು, ಪೊಲೀಸರ ಕಥೆಗಳು, ಟೆಕ್ಕಿಗಳ ಕಥೆಗಳು, ಕೆರೆಗಳ ಕಥೆಗಳು, ತಿಪ್ಪೆಯ ಕಥೆಗಳು, ರಸ್ತೆಯ ಕಥೆಗಳು, ಬಡಾವಣೆಯ ಕಥೆಗಳು, ಫ್ಲೈಓವರುಗಳ ಕಥೆಗಳು, ಅರಳಿಕಟ್ಟೆಯ ಹಿರಿಯಜ್ಜರ ಕಥೆಗಳು, ಪುಢಾರಿಗಳ ಕಥೆಗಳು.... ಹೀಗೆ ಹಲವಾರಿವೆ.

ಅವುಗಳನ್ನು ಒಂದೊಂದಾಗಿ ನಮಗೆ ತಿಳಿದಂತೆ, ಸುತ್ತಿಟ್ಟಿದ್ದ ಕಾರ್ಪೆಟ್ಟಿನ ಸುರುಳಿ ಬಿಚ್ಚಿಟ್ಟಂತೆ, ನಮ್ಮನಿಮ್ಮೆಲ್ಲರ ದಿನನಿತ್ಯ ಕೇಳುವ ಕಥೆಗಳಂತೆ ಬಿಡಿಸುತ್ತ ಹೋಗುವುದು ಈ ಪ್ರಯೋಗಾತ್ಮಕ ಬರಹಗಳ ಮೂಲ ಉದ್ದೇಶ. ಇದರಲ್ಲಿ ಉಪದೇಶವೂ ಇಲ್ಲ, ಬೆಂಗಳೂರು ಉದ್ಧಾರವಾಗಲಿ ಎಂಬ ಮಹತ್ವಾಕಾಂಕ್ಷೆಯೂ ಇಲ್ಲ.
ಇಷ್ಟವಾದರೆ ಬೆನ್ನುತಟ್ಟಿ, ಕಷ್ಟವಾದರೆ ಇದು ಹೀಗಿರಬಹುದಿತ್ತಲ್ಲ ಎಂದು ತಿದ್ದಿತೀಡಿ. ಇವು ನಿಮ್ಮವೇ ಅನ್ನಿಸಿದರೆ, ಇತರರಿಗೂ ಹೇಳಬೇಕೆಂನಿಸಿದರೆ ಸ್ನೇಹಿತರೆಲ್ಲರಿಗೂ ತಿಳಿಸಿ. ಇಲ್ಲ, ನನಗೂ ಬರೆಯಬೇಕು ಅಂತ ಅನ್ನಿಸಿದರೆ, ನಿಮ್ಮ ಬೆಂಗಳೂರಿನ ಕಥೆಗಳನ್ನು, ಅನುಭವಗಳನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ.
-
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications