15 ದಿನಕ್ಕೊಮ್ಮೆ ಬಿಡಿಎಯಿಂದ ನಾಗರಿಕರ ಅಹವಾಲು ಸಭೆ
ಬೆಂಗಳೂರು, ಮೇ 24: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪ್ರತಿ ಬುಧವಾರ ನಾಗರಿಕರ ಅಹವಾಲು ಸಭೆಯನ್ನು ಆಯೋಜನೆ ಮಾಡುತ್ತಿತ್ತು. ಆದರೆ ಇನ್ನು ಪ್ರತಿ ತಿಂಗಳ ಎರಡು ಹಾಗೂ ನಾಲ್ಕನೇ ಬುಧವಾರ ಮಾತ್ರ ಸಭೆ ನಡೆಯಲಿದೆ.
ಇತ್ತೀಚೆಗೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಅಹವಾಲು ಸಭೆ ತಾತ್ಕಾಲಿಕಾವಾಗಿ ರದ್ದಾಗಿತ್ತು. ಅಧಿಕಾರಿಗಳ ಅಲಭ್ಯ ಹಾಗೂ ಸಿಬ್ಬಂದಿ ಚುನಾವಣೆ ನಿಯೋಜನೆಯಾಗಿದ್ದ ಕಾರಣ ನಾಗರಿಕರ ಕುಂದು-ಕೊರತೆ ಆಲಿಸಿರಲಿಲ್ಲ. ಬುಧವಾರ ಅಧಿಕಾರಿಗಳೊಂದಿಗೆ ಚರ್ಚಿಸಿದ ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್ ಈ ಹೊಸ ತೀರ್ಮಾನ ತಿಳಿಸಿದ್ದಾರೆ.

ಪ್ರಾಧಿಕಾರದ ದಿನನಿತ್ಯದ ಕಾರ್ಯಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕಚೇರಿ ಸಮಯದಲ್ಲಿ ನಾಗರಿಕರು ಅಧಿಕಾರಿಗಳ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಸಂಜೆ 3.30ರಿಂದ 5.30ರವರೆಗೆ ಭೇಟಿಕೆ ಅವಕಾಶ ಕಲ್ಪಿಸಿದ್ದರೂ, ಕೆಲ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿರಲಿಲ್ಲ.












Click it and Unblock the Notifications